ನೆನ್ನೆ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ಅವರ ಹುಟ್ಟುಹಬ್ಬವಿತ್ತು. ಕಳೆದ ಎರಡು ವರ್ಷಗಳಿಂದ ಕಾರಣಾಂತರದಿಂದ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗದೆ ಇದ್ದ ಡಿಬಾಸ್ ನೆನ್ನೆ ತಮ್ಮ ಅಭಿಮಾನಿಗಳಿಗೆ ದರ್ಶನದ ಭಾಗ್ಯ ಕರುಣಿಸಿದ್ದರು. ಡಿಬಾಸ್ ಹುಟ್ಟುಹಬ್ಬಕ್ಕೆ ಹಲವಾರು ಸೆಲೆಬ್ರಿಟಿ ಸ್ಟಾರ್ ಗಳು ಶುಭ ಕೋರಿದ್ದರು. ಆದರೆ ಪ್ರಥಮ್ ಡಿಬಾಸ್ ಹುಟುಹಬ್ಬಕ್ಕೆ ಮಾಡಿದ್ದ ಟ್ವೀಟ್ ದಾಸನ ಅಭಿಮಾನಿಗಳನ್ನು ಕೆರಳಿಸಿದೆ.
ದಾಸನಿಗೆ ಶುಭಾಶಯ ಕೋರಲು ಅಭಿಮಾನಿಗಳು ಮಧ್ಯರಾತ್ರಿಯಿಂದ ಕಾಯುತ್ತಿದ್ದರು. ಹೀಗಾಗಿ ಸಹಜವಾಗಿ ಡಿಬಾಸ್ ಹುಟ್ಟು ಹಬ್ಬ ಎಂದರೆ ಅಭಿಮಾನಿಗಳ ಸಾಗರ ಇದ್ದೆ ಇರುತ್ತದೆ. ಹೀಗಾಗಿ ಅಭಿಮಾನಿಗಳ ಜೊತೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು ಕೂಡ ವಿಶ್ ಮಾಡಿದ್ದರು. ಆದರೆ ಪ್ರಥಮ್ ದಾಸನಿಗೆ ವಿಶ್ ಮಾಡಿದ್ದಲ್ಲದೆ ಕೆಲವೊಂದು ಸಲಹೆ ಕೂಡ ಕೊಟ್ಟಿದ್ದಾರೆ. ಇದೀಗ ಇದು ದಾಸನ ಅಭಿಮಾನಿಗಳನ್ನು ಕೆರಳಿಸಿದೆ.
ದರ್ಶನ್ ಜತೆಗಿನ ತಮ್ಮ ಸೆಲ್ಫಿ ಚಿತ್ರವನ್ನು ಟ್ವೀಟ್ ಮಾಡಿರುವ ಪ್ರಥಮ್ “ಹುಟ್ಟುಹಬ್ಬದ ಶುಭಾಶಯಗಳು ದರ್ಶನ್ ಸರ್. ಎರಡು ಮಾತು ಹೇಳ್ತೀನಿ. ದಯವಿಟ್ಟು ಸ್ವೀಕರಿಸಿ. ಅಂಬರೀಶ್ ನಂತರ ಕನ್ನಡ ಚಿತ್ರರಂಗಕ್ಕೆ ಸಿಕ್ಕೆ ದೊಡ್ಡ ಮಾಸ್ ಹೀರೊ ನೀವು. ಭಗವಂತ ಎಲ್ಲಾ ಕೊಟ್ಟಿದ್ದಾನೆ ನಿಮಗೆ, ಎಷ್ಟು ಫ್ಯಾನ್ಸ್ ಇದ್ದಾರೆ ನೋಡಿ? ಇಷ್ಟಿದ್ದ ಮೇಲೆ ಕೂಲಾಗಿರಿ, ಆರಾಮಾಗಿರಿ. ಎರಡನೆಯದು ನಿಮ್ಮ ಹಾಗೂ ಮಾಧ್ಯಮದ ನಡುವಿನ ಮುನಿಸು ನಿಲ್ಲಲಿ. ನೀವು ಹಾಗೂ ಮೀಡಿಯಾ ಒಂದಾಗ್ಲಿ ಅನ್ನೋದೇ ಪ್ರಾಮಾಣಿಕ ಆಸೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅವರು ದರ್ಶನ್ ಅವರಿಗೆ ಕೂಲ್ ಆಗಿರಲು ಮತ್ತು ಮೀಡಿಯಾ ದವರ ಜೊತೆ ಬಾಂದವ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ. ಇದು ಡಿಬಾಸ್ ಅಭಿಮಾನಿಗಳನ್ನು ಕೆರಳಿಸಿದೆ.
ಈ ಟ್ವೀಟ್ ಕುರಿತು ಪ್ರತಿಕ್ರಿಯಿಸಿರುವ ದರ್ಶನ್ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭ ಕೋರಬೇಕೆಂದರೆ ಕೇವಲ ಶುಭ ಕೋರಿ, ಅದನ್ನು ಬಿಟ್ಟು, ಅದು ಮಾಡಿ, ಇದು ಮಾಡಿ ಎಂಬ ಸಲಹೆಗಳನ್ನು ಕೊಡಲು ಬರಬೇಡಿ ಎಂದು ಪ್ರಥಮ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೀಗ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
