fbpx
ಸಮಾಚಾರ

ಮಾರ್ಚ್ ನಿಂದ ರಿಷಬ್ ಶೆಟ್ಟಿ ಯಾರ ಸಂಪರ್ಕಕ್ಕೂ ಸಿಗಲ್ಲ! ಮೊಬೈಲ್ ಸ್ವಿಚ್ ಆಫ್- ಕಾರಣವೇನು ಗೊತ್ತಾ?

ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿತು. ಈ ಸಿನಿಮಾ ರಿಷಬ್ ಶೆಟ್ಟಿ ಅವರಿಗೆ ದೊಡ್ಡ ಬ್ರೆಕ್ ಕೊಟ್ಟಿತ್ತು. ಈ ಸಿನಿಮಾದ ನಟನೆಗಾಗಿ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಸಿಕ್ಕಿತ್ತು. ಇದೀಗ ರಿಷಬ್ ತಮ್ಮ ಮೊಬೈಲ್ ಅನ್ನು ಮಾರ್ಚ್ ತಿಂಗಳಿಂದ ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಲಿದ್ದಾರಂತೆ.

ಕಾಂತಾರ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿ ಅವರನ್ನು ಮತ್ತಷ್ಟು ಜವಾಬ್ದಾರಿಯುತವನ್ನಾಗಿ ಮಾಡಿದೆ. ಹೀಗಾಗಿ ಇವರು ಕಾಂತಾರ ಪಾರ್ಟ್-2 ಬಗ್ಗೆ ಹೆಚ್ಚು ಚಿಂತನೆ ನಡೆಸುತ್ತಿದ್ದಾರೆ. ಇದಕ್ಕಾಗಿ ತಮ್ಮದೇ ಸುತ್ತ ಮುತ್ತಲಿನ ಊರುಗಳಿಗೆ, ಕಾಡು ಮೇಡುಗಳಿಗೆ ಅಲೆದು ಕಥೆ ಹುಡುಕುತ್ತಿದ್ದಾರೆ. ಹೀಗಾಗಿ ಮಾರ್ಚ್ ತಿಂಗಳಲ್ಲಿ ಮತ್ತಷ್ಟು ಗಮನ ಕೆಲಸದ ಮೇಲೆ ಕೊಡಬೇಕೆಂದು ತೀರ್ಮಾನಿಸಿದ್ದಾರಂತೆ. ಹೀಗಾಗಿ ತಮ್ಮ ಮೊಬೈಲ್ ಅನ್ನು ಸಂಪೂರಣವಾಗಿ ಸ್ವಿಚ್ ಆಫ್ ಮಾಡಿಕೊಳ್ಳಲಿದ್ದಾರಂತೆ.

ಹೀಗಾಗಲೇ ರಿಷಬ್ ಶೆಟ್ಟಿ ಹೇಳಿರುವಂತೆ ಇದೀಗ ನಾವು ನೋಡಿರುವುದು ಕಾಂತಾರ ಪಾರ್ಟ್-2. ಹೀಗಾಗಿ ಪಾರ್ಟ್-1 ಹೇಗೆ ಇರುತ್ತದೆ ಎಂಬ ಆಲೋಚನೆ ಅಭಿಮಾನಿಗಳಿಗೆ ಸಹಜವಾಗಿ ಹೆಚ್ಚಾಗಿ ಇರುತ್ತದೆ. ಈ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ತಮ್ಮ ಕೆಲಸದ ಕಡೆ ಹೆಚ್ಚಿನ ಗಮನ ಹರಿಸಬೇಕಾಗುವ ಅವಶ್ಯಕತೆ ಇದೆ. ಹೀಗಾಗಿ ಅವರು ಶ್ರದ್ಧೆಯಿಂದ ಕೆಲಸ ಮಾಡಲು ತೀರ್ಮಾನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top