fbpx
ಸಮಾಚಾರ

ನಿರ್ದೇಶಿಸಿದ ಮೊದಲ ಸಿನಿಮಾ ಬಿಡುಗಡೆಯಾಗುವ ಮುಂಚೆ ಇಹಲೋಕ ತ್ಯಜಿಸಿದ ಯುವ ನಿರ್ದೇಶಕ ಜೊಸೆಫ್ ಮನು!

ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ನಾವು ಒಂದಾದರಮೇಲೊಂದರಂತೆ ಕಹಿ ಘಟನೆಗಳನ್ನು ಕೇಳುತ್ತಿದ್ದೇವೆ. ಹಲವಾರು ಸಿನಿಮಾ ಪ್ರತಿಭೆಗಳು ನಿಧನರಾಗಿರುವ ಸುದ್ದಿ ನಾವು ಕೇಳುತ್ತಿದ್ದೇವೆ. ಇತ್ತೀಚಿಗೆ ಮಲಯಾಳಂ ಸಿನಿಮಾದ ಯುವ ನಿರ್ದೇಶಕರೊಬ್ಬರು ತಾವು ನಿರ್ದೇಶಿಸಿದ ಮೊದಲ ಸಿನಿಮಾ ಬಿಡುಗಡೆಯಾಗುವುದಕ್ಕಿಂತ ಮುಂಚೆ ಇಹಲೋಕ ತ್ಯಜಿಸಿದ್ದಾರೆ.

ಮಲಯಾಳಂ ನ ಯುವ ನಿರ್ದೇಶಕರಾಗಿರುವ ಜೊಸೆಫ್ ಮನು (31) ಹೆಪಟೈಟಿಸ್​​ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಜೊಸೆಫ್ ಮನು ಅವರಿಗೆ ನಿರ್ದೇಶಕನಾಗಬೇಕು ಎನ್ನುವ ಆಸೆ ಇತ್ತು. ಇವರ ಆಸೆಯಂತೆ ‘ನಾನ್ಸಿ ರಾಣಿ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಅರ್ಜುನ್ ಅಶೋಕನ್, ಶ್ರೀನಿವಾಸನ್ ಮೊದಲಾದವರು ನಟಿಸಿದ್ದಾರೆ. ಇನ್ನೇನು ಈ ಸಿನಿಮಾ ಬಿಡುಗಡೆಯಾಗಬೇಕು ಅನ್ನುವಷ್ಟರಲ್ಲಿ ಅವರು ನಿಧನರಾಗಿದ್ದಾರೆ. ಇವರ ನಿಧನಕ್ಕೆ ಕುಟುಂಬದವರು, ಆಪ್ತರು ಹಾಗೂ ಸಿನಿಮಾ ತಂಡದವರು ಸಂತಾಪ ಸೂಚಿಸಿದ್ದಾರೆ.

ಇವರು ನಿರ್ದೇಶಕರಾಗುವ ಮುಂಚೆ ಬಾಲ ನಟನಾಗಿ ನಟಿಸುತ್ತಿದ್ದರು. ‘ಐ ಆ್ಯಮ್ ಕ್ಯೂರಿಯಸ್’ ಚಿತ್ರದಲ್ಲಿ ಅವರು ನಟಿಸಿದರು. ಇದಲ್ಲದೆ ಮಲಯಾಳಂ, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top