fbpx
ಸಮಾಚಾರ

ಉಡುಪಿಯ 25 ಅಂತಸ್ತಿನ ಕಟ್ಟಡವನ್ನು ಏರಿ ಕನ್ನಡದ ಧ್ವಜ ಹಾರಿಸಿದ ಕೋತಿರಾಜ್!

ಚಿತ್ರದುರ್ಗ ಎಂದಾಕ್ಷಣ ನಮಗೆ ನೆನಪಾಗುವುದು ಕಲ್ಲಿನ ಕೋಟೆ. ಇದು ಬಿಟ್ಟರೆ ಈ ಕೋಟೆ ಏರುವ ಸಾಹಸಿ ಕೋತಿರಾಜ್ ಖ್ಯಾತಿಯ ಜ್ಯೋತಿರಾಜ್. ಮಂಕಿಮಾನ್ ಎಂದೇ ಪ್ರಖ್ಯಾತಿ ಗಳಿಸಿರುವ ಇವರು ಚಿತ್ರದುರ್ಗದ ಕೋಟೆಯನ್ನು ಸಲೀಸಾಗಿ ಹತ್ತುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸುತ್ತಿದ್ದರು. ಇದೀಗ ಉಡುಪಿಯ 25 ಅಂತಸ್ತಿನ ಕಟ್ಟಡವನ್ನು ಹತ್ತುವ ಮೂಲಕ ಮತ್ತೊಂದು ಸಾಹಸ ಮಾಡಿದ್ದಾರೆ.

ಕೋತಿರಾಜ್ ಉಡುಪಿಯ ಬ್ರಹ್ಮಗಿರಿಯಲ್ಲಿರುವ 25 ಅಂತಸ್ತುಗಳ ವಸತಿ ಸಮುಚ್ಚಯವನ್ನು ಹತ್ತುವುದರ ಮೂಲಕ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ. ಉಡುಪಿ ಬ್ರಹ್ಮಗಿರಿ ಸಮೀಪದ ವುಡ್ಸ್​ವಿಲ್ಲಾ ವಸತಿ ಸಮುಚ್ಚಯದ ಮಹಡಿಯನ್ನು ಕೆಲವೇ ನಿಮಿಷಗಳಲ್ಲಿ ತಲುಪಿ ಕನ್ನಡ ಬಾವುಟವನ್ನು ಹಾರಿಸುವುದರ ಮೂಲಕ ಕೋತಿರಾಜ್ ಈ ಸಾಹಸವನ್ನು ಮಾಡಿದ್ದಾರೆ.

ಇದಾದ ಬಳಿಕ ಮಾತನಾಡಿದ ಕೋತಿರಾಜ್ ” ಕ್ಲೈಂಬಿಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ ಹೊಂದಿರುವ ಕೋತಿರಾಜು, ಇದಕ್ಕಾಗಿ ನಾಡಿನೆಲ್ಲೆಡೆ ತಿರುಗಿ ಸಾಹಸ ಮಾಡುವ ಗುರಿಯನ್ನು ಹೊಂದಿದ್ದಾರೆ. “ದೇಶದೆಲ್ಲೆಡೆ ಈ ರೀತಿ ಬೆಟ್ಟ, ಗುಡ್ಡ ಹತ್ತಿ ಕನ್ನಡ ಬಾವುಟ ಹಾರಿಸುತ್ತೇನೆ. ವಿದೇಶದಲ್ಲೂ ಸಾಹಸ ಮಾಡಿ ರಾಷ್ಟ್ರ ಧ್ವಜ ಹಾರಿಸುತ್ತೇನೆ” ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top