fbpx
ಸಮಾಚಾರ

ಧಾರವಾಡದ ಗ್ರಾಮವೊಂದರಲ್ಲಿ ಪ್ರತಿ ವರ್ಷ ನಡೆಯುತ್ತದೆ ವಿಚಿತ್ರ ಆಚರಣೆ! ಏನದು?

ಎಲ್ಲೆಡೆ ಹೋಳಿಯ ಸಂಭ್ರಮ, ಬಣ್ಣದೋಕುಳಿ ಇದ್ದರೆ ಧಾರವಾಡ ತಾಲೂಕಿನ ಗ್ರಾಮವೊಂದರಲ್ಲಿ ಮಾತ್ರ ಒಂದು ವಿಚಿತ್ರ ಆಚರಣೆ ರೂಢಿಯಲ್ಲಿದೆ. ಏನದು? ಇಲ್ಲಿದೆ ಒಂದು ಸ್ಟೋರಿ. ಹೋಳಿ ದಿನ ಈ ಗ್ರಾಮದಲ್ಲೊಂದು ವಿಶಿಷ್ಟ ಸಂಪ್ರದಾಯವೊಂದನ್ನ ಆಚರಿಸಿಕೊಂಡು ಬರಲಾಗುತ್ತಿದೆ.

ಅದು ಐತಿಹಾಸಿಕ ಹಿನ್ನೆಲೆಯ ಕಾಮಣ್ಣನ ಮೂರ್ತಿ. ಅದನ್ನೇ ಯಾರಾದರೂ ಕದ್ದೊಯ್ದು ಬಿಟ್ಟರೆ, ಗತಿಯೇನು? ಅದೇ ಕಾರಣಕ್ಕೆ ಗ್ರಾಮಸ್ಥರೆಲ್ಲಾ ಅಲ್ಲಿ ಪಹರೆ ಕಾಯ್ತಾರೆ. ತಮ್ಮ ತಮ್ಮ ಮನೆಯಲ್ಲಿರೋ ಆಯುಧಗಳೊಂದಿಗೆ ಆ ಮೂರ್ತಿಯ ರಕ್ಷಣೆಗೆ ನಿಲ್ತಾರೆ.  ಕಾಮಣ್ಣನ ಸುತ್ತಲೂ ಹಾಗೂ ಗ್ರಾಮದ ಅಗಸಿಯಲ್ಲಿ ಯುವಕರೆಲ್ಲಾ ಆಯುಧಗಳನ್ನು ಹಿಡಿದುಕೊಂಡು ಪಹರೆ ಕಾಯುತ್ತಾರೆ. ಕಾಮಣ್ಣನ ರಕ್ಷಣೆ -ಅಣ್ಣಿಗೇರಿ ಜನರು ಬಂದು ಕಾಮಣ್ಣನ ಮೂರ್ತಿ ಒಯ್ಯಬಹುದು ಅನ್ನೋ ಲೆಕ್ಕಾಚಾರದಲ್ಲಿ ಆ ಮೂರ್ತಿಯ ಸುತ್ತಲೂ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದ ಜನರು ಆಯುಧಗಳೊಂದಿಗೆ ನಿಲ್ಲೋದು ನಡೆದು ಬಂದಿದೆ.

ಹಲವಾರು ವರ್ಷಗಳ ಹಿಂದೆ ಗ್ರಾಮದ ಬುಡ್ಡಪ್ಪ ಕಣವಿ ಅನ್ನೋ ವ್ಯಕ್ತಿ ಅತ್ತಿಗೆಗೆ ಕುಡಿಯಲು ನೀರು ಕೇಳುತ್ತಾನಂತೆ. ಆಕೆ ನೀನು ಅದೇನು ದೊಡ್ಡ ಕಾರ್ಯ ಮಾಡಿ ಬಂದಿದ್ದೀಯಾ ಅಂತಾ ಹೀಯಾಳಿಸುತ್ತಾಳಂತೆ. ಇದರಿಂದ ನೊಂದ ಬುಡ್ಡಪ್ಪ ಪಕ್ಕದ ಅಣ್ಣಿಗೇರಿ ಗ್ರಾಮಕ್ಕೆ ಹೋಗಿ, ಅಲ್ಲಿನ ರಾಜರು ಪ್ರತಿಷ್ಠಾಪಿಸಿದ್ದ ಕಾಮಣ್ಣನ ಮೂರ್ತಿಯ ತಲೆಯನ್ನು ಕತ್ತರಿಸಿಕೊಂಡು ತರುತ್ತಾನೆ.

ಬಳಿಕ ತಾನು ಮಾಡಿದ ಸಾಧನೆಯನ್ನ ತೋರಿಸಲು ಗ್ರಾಮದ ಅಗಸಿ ಮುಂದೆ ಬಂದು, ಮೂರ್ತಿಯನ್ನ ಅಲ್ಲಿಟ್ಟು, ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನಂತೆ. ಅಂದು ಕಾಮಣ್ಣನ ಮೂರ್ತಿಯ ತಲೆಯನ್ನು ಮರಳಿ ಪಡೆಯಲು ಆಯುಧ ಸಮೇತ ಬಂದ ಅಣ್ಣಿಗೇರಿ ಗ್ರಾಮಸ್ಥರನ್ನ ಹಿಮ್ಮೆಟ್ಟಿಸಲು ಸ್ಥಳೀಯರು ಆಯುಧಗಳೊಂದಿಗೆ ಹೋರಾಟಕ್ಕೆ ನಿಲ್ಲುತ್ತಾರೆ. ಕಾಮಣ್ಣನ ಮೂರ್ತಿಯ ತಲೆಯನ್ನು ಮರಳಿ ಪಡೆಯಲು ಆಯುಧ ಸಮೇತ ಬಂದ ಅಣ್ಣಿಗೇರಿ ಗ್ರಾಮಸ್ಥರನ್ನ ಹಿಮ್ಮೆಟ್ಟಿಸಲು ಸ್ಥಳೀಯರು ಆಯುಧಗಳೊಂದಿಗೆ ಹೋರಾಟಕ್ಕೆ ನಿಲ್ಲುತ್ತಾರೆ.

ಅಂದು ಆರಂಭವಾದ ಕಾಮಣ್ಣನನ್ನು ಕಾಯೋ ಕೆಲಸ ಸಾಂಪ್ರದಾಯಿಕ ಆಚರಣೆಯ ರೂಪ ತಳೆದು, ಇವತ್ತಿಗೂ ಮುಂದುವರೆದಿದೆ. ಇದೆಲ್ಲಾ ನೋಡಿದರೆ, ನಮ್ಮಲ್ಲಿನ ವಿಚಿತ್ರ ಆಚರಣೆಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತವೆ.

ಅಣ್ಣಿಗೇರಿ ಜನರು ಬಂದು ಕಾಮಣ್ಣನ ಮೂರ್ತಿ ಒಯ್ಯಬಹುದು ಅನ್ನೋ ಲೆಕ್ಕಾಚಾರದಲ್ಲಿ ಆ ಮೂರ್ತಿಯ ಸುತ್ತಲೂ ಜನರು ಆಯುಧಗಳೊಂದಿಗೆ ನಿಲ್ಲೋದು ನಡೆದು ಬಂತು. ಅಷ್ಟೇ ಅಲ್ಲ, ಆರಂಭದ ವರ್ಷಗಳಲ್ಲಿ ಹೋಳಿ ಹಬ್ಬದ ವೇಳೆಯಲ್ಲಿ ಬೇರೆ ಗ್ರಾಮದ ಯಾರಿಗೂ ಕೂಡ ಇಲ್ಲಿಗೆ ಪ್ರವೇಶವೂ ಇರಲಿಲ್ಲ. ಬೇರೆ ಯಾವುದೋ ನೆಪ ಮಾಡಿಕೊಂಡು ಬಂದು, ಮೂರ್ತಿಯನ್ನು ಕದ್ದೊಯ್ದರೆ ಹೇಗೆ ಅನ್ನೋ ಅನುಮಾನವೇ ಇದಕ್ಕೆ ಕಾರಣವಾಗಿತ್ತು. ಆದರೆ ವರ್ಷಗಳು ಉರುಳಿದಂತೆ ಆ ನಿಯಮವನ್ನ ಸಡಿಲಿಸಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top