ಪ್ರಪಂಚದ ಪ್ರತಿಷ್ಠಿತ ಕಂಪನಿಗಳಲ್ಲಿ ಇನ್ಫೋಸಿಸ್ ಕೂಡ ಒಂದು. ಸುಧಾಮೂರ್ತಿ ಮತ್ತು ನಾರಾಯಣ್ ಮೂರ್ತಿ ಅವರ ನೇತೃತ್ವದಲ್ಲಿ ಈ ಕಂಪನಿ ಇದೀಗ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುತ್ತಿದೆ. ಪ್ರತಿಯೊಬ್ಬರಿಗೂ ಸುಧಾಮೂರ್ತಿ ಅವರ ಸಿಂಪ್ಲಿಸಿಟಿ ಬಗ್ಗೆ ಗೊತ್ತು. ಇದಕ್ಕೆ ಹಲವಾರು ಉದಾಹರಣೆಗಳನ್ನು ನಾವು ನೋಡಬಹುದು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಘಟನೆ ನಡೆದಿದೆ.
ಕೇರಳದಲ್ಲಿ ಪೊಂಗಲ್ ತಯಾರಿಸುವುದು ಒಂದು ಪದ್ಧತಿ ತರ. ಅದನ್ನು ಅಲ್ಲಿನ ಜನರು ಯಾವಾಗಲು ಮಾಡುತ್ತಿರುತ್ತಾರೆ. ಆದರೆ ಅಚ್ಚರಿಯ ವಿಷಯ ಎಂದರೆ ಸುಧಾಮೂರ್ತಿ ಅವರು ಸಾಮಾನ್ಯರಲೊಬ್ಬರಂತೆ ಮಣ್ಣಿನ ಮಡಿಕೆಯಲ್ಲಿ ಸಿಹಿಯಾದ ಪೊಂಗಲ್ ಅನ್ನು ತಯಾರಿಸಿದ್ದಾರೆ.
ತಿರುವಂತಪುರಂನ ಅಟ್ಟುಕಲ್ ಭಗವತಿ ದೇವಾಲಯದಲ್ಲಿ ಪೊಂಗಲ್ ಹಬ್ಬದಾಚರಣೆಯಲ್ಲಿ ಸಂಬ್ರಹ್ಮದಿಂದ ಆಯೋಜಿಸಲಾಗಿತ್ತು. ಇದರಲ್ಲಿ ಹಲವಾರು ಮಹಿಳೆಯರು ಸಹ ಭಾಗಿಯಾಗಿದ್ದರು. ಇದರಲ್ಲಿ ಸುಧಾಮೂರ್ತಿ ಅವರು ಕೂಡ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಧಾಮೂರ್ತಿ ಅವರು ಸೌದೆ ಓಲೆ ಅಚ್ಚಿ ಅದರ ಮೇಲೆ ಮಣ್ಣಿನ ಮಡಿಕೆ ಇತ್ತು ಸಿಹಿಯಾದ ರುಚಿಕರವಾದ ಪೊಂಗಲ್ ಅನ್ನು ತಯಾರಿಸಿದ್ದಾರೆ. ಇದಲ್ಲದೆ ಇದಕ್ಕೆ ಮತ್ತಷ್ಟು ರುಚಿ ಬರಲು ಅಕ್ಕಿ, ಕೊಬ್ಬರಿ, ಬೆಲ್ಲ ಸೇರಿಸಿ ಇದನ್ನು ಮತ್ತಷ್ಟು ರುಚಿಕರವಾಗಿ ಮಾಡಿದ್ದಾರೆ. ಸುಧಾಮೂರ್ತಿ ತಯಾರಿಸುತ್ತಿರುವ ಪೊಂಗಲ್ ಫೋಟೋವನ್ನು ಸಂಸದ ಪಿಸಿ ಮೋಹನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
