ಕನ್ನಡ ಕಿರುತೆರೆಯ ಮಗುವಿನಂತ ಮನಸಿರುವ ಹುಡುಗಿ ಎಂದರೆ ಅದು ನಿವೇದಿತಾ ಗೌಡ. ಇವರು ಚಂದನ್ ಶೆಟ್ಟಿ ಅವರ ಜೊತೆ ವಿವಾಹವಾಗಿರುವ ವಿಚಾರ ನಮಗೆಲ್ಲ ಗೊತ್ತು. ಇವೆಲ್ಲದರ ಮದ್ಯೆ ಇವರು ಮದುವೆಯಾಗಲು ಅಸಲಿ ಕಾರಣವೇನೆಂಬುದನ್ನು ಕಲರ್ಸ್ ಕನ್ನಡ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಸ್ಪೆಷಲ್ ಎಪಿಸೋಡ್ನಲ್ಲಿ ಹಂಚಿಕೊಂಡಿದ್ದಾರೆ.
‘ನನಗೆ ಫ್ರೀಡಂ ಬೇಕು ಎಂದು ಮದುವೆಯಾದೆ’ ವೇದಿಕೆಯಮೇಲೆ ಕಣ್ಣೀರಿಡುತ್ತಾ ಶಾಕಿಂಗ್ ಹೇಳಿಕೆ ನೀಡಿದ ನಿವೇದಿತಾ ಗೌಡ
ಮಹಿಳಾ ದಿನಾಚರಣೆ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಒಂದು ಸ್ಪೆಷಲ್ ಎಪಿಸೋಡ್ ಆಯೋಜಿಸಲಾಗಿತ್ತು. ಇದರಲ್ಲಿ ನಿವೇದಿತಾ ಗೌಡ ತಮ್ಮ ತಾಯಿಯ ಜೊತೆ ನೃತ್ಯ ಮಾಡಿದರು. ಈ ವೇಳೆ ತಮ್ಮ ತಾಯಿಯ ಮೇಲೆ ಇರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ತಾವು ಇಷ್ಟು ಬೇಗ ಏನಿಕೆ ಮದುವೆಯಾದೆ ಎಂದು ತಿಳಿಸಿದ್ದರು.
‘ನನ್ನ ತಾಯಿ ಅಂದ್ರೆ ನನಗೆ ಸಿಕ್ಕಾಪಟ್ಟೆ ಇಷ್ಟ. ಮದುವೆಗೂ ಮುನ್ನ ಒಂದು ದಿನವೂ ಮನೆಯಿಂದ ಹೊರಗೆ ತಾಯಿ ಕಳುಹಿಸಿಲ್ಲ. ಕಳ್ಳರ ಭಯದಿಂದ ನನ್ನನ್ನು ಸದಾ ಮನೆಯಲ್ಲಿ ಕೂಡಿ ಹಾಕುತ್ತಿದ್ದರು. ಮಗಳು ಹೊರಗಡೆ ಹೋದಾಗ ಯಾರಾದರೂ ಬಂದು ಎತ್ತಿಕೊಂಡು ಹೋಗಬಹುದು ಅನ್ನೋ ಭಯ ಇತ್ತು. ನೀನು ಎಲ್ಲೇ ಹೋಗಬೇಕಿದ್ದರೂ ಮದ್ವೆ ಆದ ಮೇಲೆ ಹೋಗು ಎನ್ನುತ್ತಿದ್ದರು. ಹೀಗಾಗಿ ಫ್ರೀಡಂ ಬೇಕು ಎಂದು ಮದುವೆ ಮಾಡಿಕೊಂಡೆ’ ಎಂದು ಹೇಳಿದರು.
‘ಮದುವೆ ಆದ್ಮೇಲೆ ಸುತ್ತಾಡೋಣ ಹಾಗೆ ಹೀಗೆ ಎಂದು ಮದುವೆ ಮಾಡಿಕೊಂಡೆ. ಮದ್ವೆ ಆದ್ಮೇಲೆ ಪೋಷಕರ ಬೆಲೆ ತಿಳಿಯಿತ್ತು. ಅವಾಗೆಲ್ಲಾ ಬರೀ ಮನೆಯಲ್ಲಿ ಇದ್ದೀನಿ ಎಂದು ಬೇಸರ ಆಗುತ್ತಿತ್ತು ಆದರೆ ಈಗ ತಾಯಿ ಅವರನ್ನು ಒಂದು ಸಲ ನೋಡಿದರೂ ತುಂಬಾ ಖುಷಿಯಾಗುತ್ತದೆ.’ ಎಂದು ತಮ್ಮ ತಾಯಿಯ ಕುರಿತು ಮಾತನಾಡಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
