fbpx
ಸಮಾಚಾರ

ತಾಯಿ ಗರ್ಭದಲ್ಲಿರುವ ಶಿಶುವಿಗೆ ಅಪಾಯಕಾರಿ ಆಪರೇಷನ್‌ ಮಾಡುವ ಮೂಲಕ ಯಶಸ್ವಿಯಾದ ಏಮ್ಸ್‌ ವೈದ್ಯರು!

“ವೈದ್ಯೋ ನಾರಾಯಣ ಹರಿ” ಎಂಬ ಮಾತನ್ನು ನಾವು ಹಲವು ಬಾರಿ ಕೇಳಿದ್ದೇವೆ. ಕೆಲವೊಂದು ಸರಿ ನಮ್ಮ ಜೀವವನ್ನು ಉಳಿಸುವುದು ವೈದ್ಯರು ಎಂದು ಹೇಳಿದರೆ ತಪ್ಪಾಗಲಾರದು. ಇದೀಗ ನವದೆಹಲಿಯ AIMS ಆಸ್ಪತ್ರೆಯ ವೈದ್ಯರು ಮಾಡಿರುವ ಸಾಧನೆ ಎಲ್ಲ ಕಡೆ ಮೆಚ್ಚುಗೆಯನ್ನು ಗಳಿಸುತ್ತಿದೆ.

ಗರ್ಭಿಣಿ ಮಹಿಳೆ AIMS ಆಸ್ಪತ್ರೆಗೆ ದಾಖಲಾಗಿದ್ದರು. ಗರ್ಭಿಣಿಯ ಹೊಟ್ಟೆಯಲ್ಲಿ ಇದ್ದ ಶಿಶುವಿನ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ವೈದ್ಯರು ಗಮನಿಸಿದರು. ತಪಾಸಣೆ ನಡೆಸಿದ ನಂತರ ಶಿಶುವಿಗೆ ಹೃದಯದ ತೊಂದರೆ ಇರೋದು ಕಂಡು ಬಂದಿದೆ. ಹೀಗಾಗಿ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಬಿಟ್ಟು ಬೇರೆ ಯಾವ ಆಯ್ಕೆ ಕೂಡ ಇರಲಿಲ್ಲ. ಹೀಗಾಗಿ ಇದರ ಕುರಿತು ಗರ್ಭಿಣಿಯ ಕುಟುಂಬಸ್ಥರಿಗೂ ವಿಷಯ ತಿಳಿಸಿ ಆಪರೇಷನ್‌ ನಡೆಸಲು ಮುಂದಾಗಿದ್ದರು.

ವೈದ್ಯರು ತಾಯಿಯ ಹೊಟ್ಟೆಯ ಮೂಲಕ ಮಗುವಿನ ಹೃದಯಕ್ಕೆ ಸೂಜಿಯನ್ನು ಸೇರಿಸಿದರು. ನಂತರ, ಬಲೂನ್ ಕ್ಯಾತಿಟರ್ ಬಳಸಿ ಅಡಚಣೆಯಾದ ಕವಾಟವನ್ನು ತೆರೆದು ರಕ್ತದ ಹರಿವಿಗೆ ದಾರಿ ಮಾಡಿಕೊಟ್ಟರು. ಅಲ್ಟ್ರಾಸೌಂಡ್‌ ಮಾರ್ಗದರ್ಶನದಲ್ಲಿ ಹೃದಯದ ಕವಾಟಗಳಲ್ಲಿ ಉಂಟಾಗುವ ಅಡಚಣೆಯನ್ನು ತೆಗೆದು ಹಾಕಲು ಬಲೂನ್ ಹಿಗ್ಗಿಸುವ ಪ್ರಕ್ರಿಯೆಯ ಮೂಲಕ ಶಿಶುವಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಆಪರೇಷನ್ ಯಶಸ್ವಿಯಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಮಾತನಾಡಿದ ವೈದ್ಯರು “ಇಂತಹ ಪ್ರಕ್ರಿಯೆಯು ಭ್ರೂಣದ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತದೆ. ಜೊತೆಗೆ ಅತ್ಯಂತ ಎಚ್ಚರಿಕೆಯಿಂದ ಮಾಡಬೇಕು” ಎಂದು ಹೇಳಿದ್ದಾರೆ. ಇದೀಗ ತಾಯಿ ಮತ್ತು ಮಗು ಇಬ್ಬರು ಕೂಡ ಆರೋಗ್ಯವಾಗಿದ್ದಾರೆ. ವೈದ್ಯರ ಸಾಹಸಕ್ಕೆ ಎಲ್ಲ ಕಡೆ ಇಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top