ಟೋಲ್ ಸಿಬ್ಬಂದಿ ಹಾಗೂ ಶಾಸಕರ ನಡುವೆ ವಾಗ್ವಾದ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ ಪ್ಲಾಜಾದಲ್ಲಿ ಭಾನುವಾರ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಟೋಲ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.
ಬೆಂಗಳೂರಿನಿಂದ ಮಳವಳ್ಳಿಗೆ ತೆರಳುತ್ತಿದ್ದ ನರೇಂದ್ರಸ್ವಾಮಿ ಅವರ ಕಾರನ್ನು ರಾಮನಗರ ವ್ಯಾಪ್ತಿಯ ಕುಂಬಳಗೂಡಿನ ಕಾನನಮಿಣಿಕಾ ಟೋಲ್ ಬಳಿ ತಡೆದಿದ್ದಾರೆ. ಆ ವೇಳೆ ಶಾಸಕರು ತಮ್ಮ ಬಳಿ ಇದ್ದ ಪಾಸ್ ತೋರಿಸಿದರು. ಆದರೆ ನಿಮ್ಮ ಕಾರ್ ನಂಬರ್ ನಮೂದಿಸಿಲ್ಲವೇ ಎಂದು ಪರಿಶೀಲಿಸತೊಡಗಿದರು. ಇದರಿಂದ ಕೆರಳಿದ ಶಾಸಕ ಟೋಲ್ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು.
‘ನಿಮ್ಮನ್ನು ಇಲ್ಲಿ ಬಿಟ್ಟಿಯಾಗಿ ಬಿಡುತ್ತಿದ್ದೇವೆ. ನಾವು ಕೇಳಿದ್ದನ್ನು ತೋರಿಸಿ ಹೋಗುತ್ತಿರಬೇಕು. ನಮ್ಮೊಂದಿಗೆ ಹೆಚ್ಚು ಮಾತನಾಡಬೇಡಿ’ ಎಂದ ಸಿಬ್ಬಂದಿಯೊಬ್ಬ ತಾಕೀತು ಮಾಡಿದ್ದಾನೆ. ಅದಕ್ಕೆ, ಶಾಸಕರು, ‘ಸ್ಥಳಕ್ಕೆ ಪೊಲೀಸ್ ಕರೆಯಿರಿ’ ಎಂದಿದ್ದಕ್ಕೆ, ‘ಕರಿ, ನಾನು ನೋಡದೇ ಇರೊ ಪೊಲೀಸಾ’ ಎಂದು ಹೇಳಿದ್ದಾರೇ. ಅಲ್ಲಿದ್ದವರು ಈ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
