ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಮೇಲೆ ನಟಿ, ನಿರೂಪಕಿ ಅನಸೂಯಾ ಭಾರದ್ವಾಜ್ ಗಂಭೀರ ಆರೋಪ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿರುವ ನಟಿ ಅನಸೂಯಾ. ಸಲ್ಲದ ಕಾರಣಕ್ಕಾಗಿ ಇವರು ಟ್ರೋಲ್ ಆಗುತ್ತಿದ್ದಾರೆ. ಇದಕ್ಕೆ ಕಾರಣ ವಿಜಯ್ ದೇವರಕೊಂಡ ಕಡೆಯವರು ಎನ್ನುವ ಆರೋಪ ಅವರದ್ದು. ವಿಜಯ್ ಆತ್ಮೀಯರೇ ದುಡ್ಡುಕೊಟ್ಟು ಟ್ರೋಲ್ ಮಾಡಿಸುತ್ತಿದ್ದಾರೆ ಎನ್ನುವುದು ಅವರ ಆರೋಪ.
ಈ ಬಗ್ಗೆ ಮಾತನಾಡಿರುವ ಅನಸೂಯ “ವಿಜಯ್ ದೇವರಕೊಂಡ ನನಗೆ ಬಹಳ ಹಿಂದಿನಿಂದಲೂ ಗೊತ್ತು. ಆಗ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಅವರು ನಾಯಕನಾಗಿ ನಟಿಸಿರುವ ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಕೆಲ ಆಕ್ಷೇಪಾರ್ಹ ಮಾತುಗಳನ್ನು ಮ್ಯೂಟ್ ಮಾಡಿರುವುದು ಗೊತ್ತೇ ಇದೆ. ಆದರೆ ಸಿನಿಮಾ ರಿಲೀಸ್ ವೇಳೆ ಥಿಯೇಟರ್ ಗೆ ತೆರಳಿದ ವಿಜಯ್ ಅಲ್ಲಿದ್ದ ಅಭಿಮಾನಿಗಳಿಗೆ ಆ ಮಾತು ಹೇಳಿದ್ದಾರೆ. ಮಹಿಳೆಯಾಗಿ ಇದು ನನಗೆ ನೋವುಂಟು ಮಾಡಿದೆ. ವಿಜಯ್ಗೆ ಇಂತಹ ವಿಷಯಗಳನ್ನು ಆ್ಯಂಕರ್ ಮಾಡಬೇಡಿ ಎಂದು ಹೇಳಿ. ಅಂದಿನಿಂದ ನನ್ನ ಮೇಲೆ ಟ್ರೋಲಿಂಗ್ ಶುರುವಾಗಿದೆ.” ಎಂದು ಆರೋಪ ಮಾಡಿದ್ದಾರೆ.
“ವಿಜಯ್ ಅವರಿಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ನನ್ನನ್ನು ಟ್ರೋಲ್ ಮಾಡಿ ಹಲವರಿಗೆ ಹಣ ನೀಡುತ್ತಿದ್ದಾರೆ ಎಂದು ತಿಳಿದು ಬೆಚ್ಚಿಬಿದ್ದೆ. ವಿಜಯ್ಗೆ ತಿಳಿಯದೆ ಇದು ನಡೆಯುತ್ತಿದೆಯೇ? ಅನ್ನಿಸಿತು ವಿಜಯ್ ನನ್ನನ್ನು ದ್ವೇಷಿಸುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಇಲ್ಲಿ ನಿಲ್ಲಿಸಲು ಬಯಸುತ್ತೇನೆ. ಯಾಕೆಂದರೆ ಮನಸ್ಸಿಗೆ ನೆಮ್ಮದಿ ಬೇಕು’ ಎಂದರು ಅನಸೂಯಾ. ಈ ಕಾಮೆಂಟ್ಗಳಿಗೆ ವಿಜಯ್ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
