ಕಾಂಗ್ರೆಸ್ ಸರಕಾರ ತಂದಿರುವ ಐದು ಖಾತ್ರಿ ಯೋಜನೆಗಳ ಅರ್ಜಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿರಬೇಕು, ಅನಗತ್ಯ ದಾಖಲೆಗಳನ್ನು ಕೇಳಬಾರದು. ಕುಂಟತನವಿರುವ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳ ಕುರಿತು ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಸರ್ಕಾರದ ಗ್ಯಾರಂಟೀ ಯೋಜನೆಗಳ ಅರ್ಜಿಗಳನ್ನ ಸುಖಾಸುಮ್ಮನೆ ತಿರಸ್ಕಾರ ಮಾಡಬಾರದು ಎಂದು ಸೂಚನೆ ನೀಡಿದರು
ರಾಜ್ಯ ಸರಕಾರ ಘೋಷಿಸಿರುವ ಖಾತ್ರಿ ಯೋಜನೆಗಳ ಪೈಕಿ ಗೃಹಜ್ಯೋತಿ ಯೋಜನೆ ಆಗಸ್ಟ್ 1ರಂದು ಹಾಗೂ ಗೃಹಲಕ್ಷ್ಮಿ ಯೋಜನೆ ಇದೇ ತಿಂಗಳ 17 ಮತ್ತು 18ರಂದು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಕಲಬುರಿಗಿಯಲ್ಲಿ ಆಗಸ್ಟ್ 1ರಂದು ಗೃಹಜ್ಯೋತಿ ಯೋಜನೆ ಆರಂಭಿಸಲು ಉದ್ದೇಶಿಸಿದ್ದು, ಈ ಯೋಜನೆಯಲ್ಲಿನ ಗೊಂದಲ ನಿವಾರಿಸಿ ಜಾಗೃತಿ ಮೂಡಿಸಬೇಕೆಂದರು. 17 ಮತ್ತು 18 ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
