ಸಾಮಾನ್ಯವಾಗಿ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಅಷ್ಟು ಕೋಟಿ ಕಲೆಕ್ಷನ್ ಆಯ್ತು, ಇಷ್ಟ್ ಕೋಟಿ ಆಯ್ತು ಅಂತ ಕೇಳಿರ್ತೇವೆ… ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೆಟ್ಟದ ಮೇಲಿನ 31 ಕಂಪಾರ್ಟ್ ಮೆಂಟ್ ಗಳು ಭಕ್ತರಿಂದ ತುಂಬಿವೆ. ನಿನ್ನೆ 86,181 ಮಂದಿ ಭಕ್ತರು ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕಳೆದ ಭಾನುವಾರ ಭಕ್ತರು ನೀಡಿದ ಕಾಣಿಕೆಯಿಂದ ಹುಂಡಿಗೆ ರೂ.4.59 ಕೋಟಿ ಆದಾಯ ಬಂದಿದೆ ಎಂದು ದೇವಸ್ಥಾನದ ಅಧಿಕಾರಿಗಳು ವಿವರಿಸಿದ್ದಾರೆ., ಅಲ್ಲದೆ ಭಕ್ತರು 24 ಗಂಟೆಯೊಳಗೆ ದರ್ಶನ ಪಡೆಯಬಹುದು ಎಂದು ದೇವಸ್ಥಾನದ ಅಧಿಕಾರಿಗಳು ವಿವರಿಸಿದರು.
ಶ್ರೀನಿವಾಸಮಂಗಪುರಂ ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜೂನ್ 24 ರಿಂದ 26 ರವರೆಗೆ ಶ್ರೀವಾರಿ ಸಾಲಕಟ್ಲ ಸಾಕ್ಷಾತ್ಕಾರ ಮಹೋತ್ಸವದ ಸಂದರ್ಭದಲ್ಲಿ ಜೂನ್ 22 ರಂದು ಕೋಯಿಲ್ ಆಳ್ವಾರ್ ತಿರುಮಂಜನವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ವಿವರಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
