fbpx
ಸಮಾಚಾರ

ಶ್ರಾವಣ ಮಾಸದ ಹುಣ್ಣಿಮೆಯ ದಿನ ಬರುವ ಯಜುರ್ ಉಪಾಕರ್ಮ ಆಚರಣೆ ಹೇಗೆಮಾಡಬೇಕು ,ಇದರ ಫಲಗಳು ಏನೇನು ಅಂತ ತಿಳ್ಕೊಳ್ಳಿ

ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ದಿನ ಬರುವ ಯಜುರ್ ಉಪಾಕರ್ಮ ಆಚರಣೆ ಹೇಗೆ ? ಮಾಡಿದರೆ ವಿಶೇಷವಾದಂತಹ ಫಲ ಪ್ರಾಪ್ತಿಯಾಗುತ್ತದೆ ? ಇದು ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ. ಯಾವ ರೀತಿ ಆಚರಣೆ ಮಾಡಬೇಕು ? ಇದರ ಫಲಗಳು ಏನೇನು ?

ಯಜುರ್ ಉಪಕರ್ಮ ಒಂದೇ ಅಲ್ಲ,ಶ್ರಾವಣ ಮಾಸದಲ್ಲಿ ಬರುವ ಎಲ್ಲಾ ವಿಶೇಷವಾದ ದಿನಗಳನ್ನು ಸಹ ಭಕ್ತಿ,ಶ್ರದ್ಧೆಯಿಂದ ಆಚರಿಸಬೇಕು. ಉಪಕರ್ಮ ಎಂದರೆ ಯಜ್ಞೋಪವೀತಗಳನ್ನು ಬದಲಾಯಿಸಿಕೊಳ್ಳುವುದು ಅಂದರೆ ಕನ್ನಡ ಭಾಷೆಯಲ್ಲಿ ಜನಿವಾರ ಎಂದು ಅಥವಾ ಪವಿತ್ರವಾದಂತಹ ದಾರ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಯಜ್ಞೋಪವೀತ ಎಂದು ಕರೆಯಲಾಗುತ್ತದೆ.
ಜನಿವಾರವನ್ನು ಏನಕ್ಕೋಸ್ಕರ ನಾವು ಹಾಕಿಕೊಳ್ಳಬೇಕು ? ಎಂದರೆ ಜೀವನದಲ್ಲಿ ರೀತಿ, ನೀತಿ, ನಿಯಮ ಎನ್ನುವುದು ಇದೆ. ಆ ನಿಯಮವನ್ನು ಪಾಲನೆ ಮಾಡಿದವರು ಆ ಶಿವನ ಅನುಗ್ರಹಕ್ಕೆ ಪಾತ್ರರಾಗಿ ಗಳು ಎನ್ನುವುದನ್ನು ನಮ್ಮ ಋಷಿಗಳು.

 

 

ಯಜ್ಞೋಪವೀತ ಧಾರಣೆ ಎನ್ನುವುದನ್ನು ಹಿಂದಿನ ಕಾಲದಿಂದಲೂ ಕೂಡ ಮಾಡಿಕೊಂಡು ಬಂದಿದ್ದಾರೆ .ಇದನ್ನು ಸಾಮಾನ್ಯವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ಸಾಮಾನ್ಯವಾಗಿ ಧರಿಸುತ್ತಾರೆ. ಗಾಯಿತ್ರಿ ಮಂತ್ರವನ್ನು ಹೇಳುತ್ತಾ ಉಪನಯನದ ಮೂಲಕ ಧರಿಸುತ್ತಾರೆ.ಇದರ ಜೊತೆಗೆ ತ್ರಿಮೂರ್ತಿಗಳು ಕೂಡ ಯಜ್ಞೋಪವೀತ ಧಾರಣೆಯನ್ನು ಮಾಡಿಕೊಂಡಿದ್ದಾರೆ . ಯಜುರ್ವೇದ ಉಪಾಕರ್ಮ ಎಂದರೆ.

ಯಜುರ್ವೇದ ಉಪಾಕರ್ಮ ಎನ್ನುವುದು ಬಂದಾಗ ಯಾವ ರೀತಿ ಆಚರಣೆಯನ್ನು ಮಾಡಬೇಕು ?

ವ್ಯವಸ್ಥಿತವಾಗಿ ಪುರೋಹಿತರ ಹತ್ತಿರ ಹೋಗಿ ಯಜ್ಞೋಪವೀತವನ್ನು ಮಾಡಿಸಿಕೊಂಡರೆ ಸಾಕಾಗುವುದಿಲ್ಲ. ಪ್ರತಿನಿತ್ಯ ಯಜ್ಞೋಪವೀತಕ್ಕೆ ಅನುಷ್ಠಾನ ಎನ್ನುವುದು ಇದೆ. ಸಂಧ್ಯಾ ವಂದನೆ , ತ್ರಿಕಾಲ ಸಂಧ್ಯಾವಂದನೆ ಮಾಡಬೇಕು. ಆದರೆ ಇಂದಿನ ಕಾಲದಲ್ಲಿ ಏಕಕಾಲದಲ್ಲಿ ಮಾಡುವುದೇ ಕಷ್ಟವಾಗಿದೆ .ಅದಕ್ಕಾಗಿ ಈ ಕಾಲದಲ್ಲಿ ಅನೇಕ ಕಷ್ಟಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಒಬ್ಬ ದೇವಸ್ಥಾನದ ಅರ್ಚಕ ಆಗಿರಬಹುದು, ಪುರೋಹಿತ ಆಗಿರಬಹುದು. ಯಜ್ಞೋಪವೀತವನ್ನು ಧಾರಣೆ ಮಾಡಿಕೊಂಡು ಮೇಲೆ ತ್ರಿಕಾಲ ಸಂಧ್ಯಾ ವಂದನೆಯನ್ನು ವ್ಯವಸ್ಥಿತವಾಗಿ ಆಚರಣೆ ಮಾಡಬೇಕು .ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು. ನಮ್ಮ ಪೂರ್ವಿಕರು ವ್ಯವಸ್ಥಿತವಾಗಿ ನಿಯಮಗಳನ್ನು ಪಾಲಿಸುತ್ತಾ ಬಂದಿದ್ದರು.

ನಾವು ಆ ನಿಯಮವನ್ನು ಪಾಲನೆ ಮಾಡುತ್ತಿಲ್ಲ.ಆದ್ದರಿಂದಲೇ ನಾವು ನಾನಾ ರೀತಿಯ ಕಷ್ಟ ,ಜಲ ಮತ್ತು ಅಗ್ನಿಯಿಂದ ತೊಂದರೆ, ಸ್ವಾರ್ಥಕ್ಕೋಸ್ಕರ ಬಹಳಷ್ಟು ಪಾಪ ಕರ್ಮಗಳನ್ನು ಮಾಡುತ್ತಿದ್ದಾರೆ. ಸಂಧ್ಯಾ ವಂದನೆಯನ್ನು ಬಿಟ್ಟಿದ್ದಾರೆ, ಯಜುರ್ ಉಪಾಕರ್ಮದ ದಿನ ವ್ಯವಸ್ಥಿತವಾಗಿ ಬ್ರಾಹ್ಮಿ ಲಗ್ನದಲ್ಲಿ ಆಯುಷ್ಯ ಹೋಮ, ರಾಜ ಹೋಮ, ಜಯಾದಿ ಹೋಮವನ್ನು ಆಚರಣೆ ಮಾಡಿ ಯಜ್ಞೋಪವೀತವನ್ನು ಗುರುಗಳ ಮುಖಾಂತರ ಧಾರಣೆ ಮಾಡಬೇಕು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top