ಸೆಪ್ಟೆಂಬರ್ 15, 2023 ಶುಕ್ರವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಅಮಾವಾಸ್ಯೆ : Sep 14 04:49 am – Sep 15 07:09 am; Sukla Paksha ಪ್ರತಿಪತ್ : Sep 15 07:09 am – Sep 16 09:17 am
ನಕ್ಷತ್ರ : ಉತ್ತರ: Sep 15 04:54 am – Sep 16 07:36 am
ಯೋಗ : ಶುಭ: Sep 15 02:59 am – Sep 16 03:41 am; ಶುಕ್ಲ: Sep 16 03:41 am – Sep 17 04:12 am
ಕರಣ : ನಾಗ: Sep 14 06:00 pm – Sep 15 07:09 am; ಕಿಮ್ಸ್ತುಗ್ನ: Sep 15 07:09 am – Sep 15 08:15 pm; ಬಾವ: Sep 15 08:15 pm – Sep 16 09:17 am
Time to be Avoided
ರಾಹುಕಾಲ : 10:44 AM to 12:14 PM
ಯಮಗಂಡ : 3:16 PM to 4:46 PM
ದುರ್ಮುಹುರ್ತ : 08:37 AM to 09:25 AM, 12:39 PM to 01:27 PM
ವಿಷ : 12:54 PM to 02:41 PM
ಗುಳಿಕ : 7:42 AM to 9:13 AM
Good Time to be Used
ಅಮೃತಕಾಲ : 11:35 PM to 01:22 AM
ಅಭಿಜಿತ್ : 11:50 AM to 12:39 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:17 PM
ಮನದ ಸಂಕಲ್ಪಕ್ಕೆ ವಿಘ್ನಗಳು ಬರುತ್ತವೆ. ಎದೆಗುಂದದಿರಿ. ನಿಮ್ಮನ್ನು ಟೀಕಿಸುವವರು ಬಹಳ ಮಂದಿ. ಹಾಗಾಗಿ ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿರಿ. ಆದಷ್ಟು ದೇವರ ಸೇವೆ ಮಾಡಿರಿ.
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ನಿಮಗೆ ಬುದ್ಧಿವಾದ ಹೇಳುವವರೇ ಆಗಿರುತ್ತಾರೆ. ಆದರೆ ಅವರ ಮಾತುಗಳಿಗೆ ಹೆಚ್ಚಿನ ಗಮನ ಕೊಡದಿರಿ. ನಿಮ್ಮ ಕಾರ್ಯಗಳಿಗೆ ಗುರುವಿನ ಬೆಂಬಲವಿರುತ್ತದೆ. ಸಾವಧಾನದಿಂದ ಸಕಲ ಕಾರ್ಯಗಳನ್ನು ಮಾಡಿರಿ.
ನೀವು ಸರಳವಾಗಿ ಇಡಬೇಕೆಂಬ ಹೆಜ್ಜೆಗಳು ತಪ್ಪಾಗುವ ಸಂಭವ ಜಾಸ್ತಿ. ನಿಮ್ಮ ಜಾಣ್ಮೆ ತರ್ಕಗಳು ಇಂದು ಉಪಯೋಗಕ್ಕೆ ಬರುವುದಿಲ್ಲ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ ಮತ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕಿರಿ.
ನಿಮ್ಮನ್ನು ಎದುರಿಗೆ ಹೊಗಳಿ ಹಿಂದೆ ತೆಗಳುವ ಮಂದಿಯೇ ಜಾಸ್ತಿ. ಹಾಗಾಗಿ ಇಂತಹ ಶತ್ರುಗಳಿಂದ ದೂರ ಇರುವುದು ಒಳ್ಳೆಯದು. ಆಸ್ತಿಯ ವಿಷಯದ ಬಗ್ಗೆ ತಕರಾರು ಎದುರಿಸಬೇಕಾಗುವುದು.
ಹಲವು ದಿನಗಳಿಂದ ಭೇಟಿಯಾಗಿರದ ಆಪ್ತರು ಭೇಟಿಯಾಗಲಿದ್ದಾರೆ. ನಿಮ್ಮ ಪ್ರತಿಭೆಗೆ ಸಾಮಾಜಿಕ ಮನ್ನಣೆ ಗೌರವ ದೊರೆಯಲಿದೆ. ಈ ದಿನ ಯೋಜಿಸಿದ ಕಾರ್ಯಗಳಲ್ಲಿ ಗೆಲುವು ಸಿಗಲಿದೆ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.
ಈ ದಿನ ಬರುವ ಅಡೆ-ತಡೆಗಳನ್ನು ಧೈರ್ಯವಾಗಿ ಎದುರಿಸುವಿರಿ. ಗುರುವು ನಿಮ್ಮ ಬೆಂಗಾವಲಿಗೆ ನಿಲ್ಲುವರು. ಹಲವು ಬದಲಾವಣೆಗಳಿಗೆ ಇಂದು ಸಾಕ್ಷಿಯಾಗುವ ಸಂಭವವಿದೆ. ಆಂಜನೇಯ ಸ್ತೋತ್ರವನ್ನು ಪಠಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ನಿಮ್ಮ ವಿಚಾರಧಾರೆಗಳು ಇತರರ ಮೇಲೆ ಪರಿಣಾಮ ಬೀರುವುದು. ನಿಮ್ಮನ್ನು ವಿರೋಧಿಸುತ್ತಿದ್ದವರು ಇಂದು ನಿಮ್ಮ ನಿಲುವನ್ನು ಸಮರ್ಥಿಸುವರು. ವೈಜ್ಞಾನಿಕ ವಿಚಾರಗಳು ನಿಮ್ಮನ್ನು ಸಮಾಜದಲ್ಲಿ ಅತಿ ಎತ್ತರಕ್ಕೆ ನಿಲ್ಲಿಸುವವು.
ಉತ್ಸಾಹ ಹಾಗೂ ಸಮರ್ಪಕ ನಡೆ-ನುಡಿಗಳಿಂದಲೇ ಜನರನ್ನು ಆಕರ್ಷಿಸುವಿರಿ. ಪ್ರಶಂಸೆಗಳ ಸುರಿಮಳೆಯಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಮಾನಸಿಕ ನೆಮ್ಮದಿ ದೊರೆಯುವುದು.
ಮನೆಯ ವಿಚಾರಗಳಲ್ಲಿ ಕಾಳಜಿಯನ್ನು ವಹಿಸಲು ಮುಂದಾಗುವಿರಿ. ಇದು ನಿಮ್ಮ ಸಂಗಾತಿಯ ಹರ್ಷಕ್ಕೆ ಕಾರಣವಾಗುವುದು. ಅನೇಕ ದಿನಗಳಿಂದ ನಿಶ್ಚಯಿಸಿದ್ದ ಕಾರ್ಯಗಳಿಗೆ ಚಾಲನೆ ದೊರೆಯುವುದು.
ಮನೆಯಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳೇ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಮೂಡಲು ಸಹಾಯವಾಗುತ್ತದೆ. ಆದಷ್ಟು ಶಿವನ ಆರಾಧನೆ ಮಾಡುವ ಮೂಲಕ ಸಂಸಾರದಲ್ಲಿ ಸುಖ ಕಾಣುವಿರಿ. ಸೋತು, ಗೆಲ್ಲವುದು ಶ್ರೇಷ್ಠ.
ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬಿ ನಿಮ್ಮ ಬಗ್ಗೆ ಅನುಕಂಪ ತೋರುವ ಎಲ್ಲರೂ ನಿಮ್ಮ ಪ್ರೀತಿಪಾತ್ರರು ಎಂದು ತಪ್ಪಾಗಿ ಅಥೈರ್ಸಿಕೊಳ್ಳುವಿರಿ. ಆದಷ್ಟು ಭೇಟಿ ಆದ ಜನರ ಪೂರ್ವಾಪರ ವಿಚಾರ ತಿಳಿದು ಅವರ ಸ್ನೇಹವನ್ನು ಸಂಪಾದಿಸಿರಿ.
ಕೂಡಿಟ್ಟ ಹಣವು ನೀರಿನಂತೆ ಖರ್ಚಾಗುವುದು. ಹಾಗಾಗಿ ಮನಸ್ಸಿಗೆ ಬಂದಂತೆ ಖರ್ಚನ್ನು ಮಾಡದಿರಿ. ಕೆಲ ಮಟ್ಟಿಗಿನ ಉಳಿತಾಯಗಳ ಕಡೆ ಗಮನ ಹರಿಸಿರಿ. ಹಿರಿಯರ ಆಶೀರ್ವಾದದಿಂದ ಈ ದಿನ ಉತ್ತಮವಾಗಿರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಚಿಂತೆ ಉಂಟಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
