ಮೇಷ
ಪ್ರತಿ ಮಾತುಗಳೂ ಅಳೆದು ತೂಗಲ್ಪಡುತ್ತವೆ. ಒಮ್ಮೆಗೇ ಥಟ್ಟನೆ ಮಾತು ಕೊಟ್ಟು ಸುಮ್ಮನೆ ಸಿಕ್ಕಿಹಾಕಿಕೊಳ್ಳದಿರಿ. ಶುಭಸಂಖ್ಯೆ: 7
ವೃಷಭ
ಯಾವ ಮನೋಭಾವಗಳೂ ಜನರನ್ನು ಆಕರ್ಷಿಸಲು ಸಾಧ್ಯವಿರದ ಕಾಲ. ಎದುರಿಸಿ ಅನುಭವ ಪಡೆಯಿರಿ. ಶುಭಸಂಖ್ಯೆ: 5
ಮಿಥುನ
ಹೊಸ ತಾಪತ್ರಯ ಶುರುವಾಗುವ ಸಾಧ್ಯತೆಗಳಿವೆ. ಹಳೆಯ ಕೆಲಸದ ಭಾರವನ್ನು ಬಾಕಿ ಇಟ್ಟುಕೊಳ್ಳಬೇಡಿ. ಶುಭಸಂಖ್ಯೆ: 2
ಕಟಕ
ದಿನದ ಅವಧಿ ಕೆಲವು ತಾಪತ್ರಯಗಳನ್ನು ತರಬಹುದಾದರೂ ಸ್ಥೈರ್ಯವೇ ನಿಮ್ಮನ್ನು ಇಂದು ಗೆಲ್ಲಿಸಲಿದೆ. ಶುಭಸಂಖ್ಯೆ: 4
ಸಿಂಹ
ಕುಟುಂಬಜೀವನದಲ್ಲಿ ಹೊಂದಾಣಿಕೆಗಾಗಿ ಪ್ರಯತ್ನಗಳು ನಡೆದರೆ ಸೂಕ್ತ.ಒಳಿತಿಗೆದಾರಿಯೂ ಸರಳ. ಶುಭಸಂಖ್ಯೆ: 9
ಕನ್ಯಾ
ತತ್ತ್ವಜ್ಞಾನಿಯಂತೆ ಮಾತನಾಡುವುದು ಸರಿಯಾಗಿದೆ. ಆದರೆ ಒಳಿತಿಗೆ ವ್ಯಾವಹಾರಿಕ ಕೌಶಲವೂ ಇರಲಿ. ಶುಭಸಂಖ್ಯೆ: 3
ತುಲಾ
ದೂರದ ಊರಿಗೆ ವರ್ಗಾವಣೆಯ ವಿಚಾರ ನಿಮ್ಮನ್ನು ಬಾಧಿಸಬಹುದು.ಈ ಕುರಿತಾಗಿ ಎಚ್ಚರ ಇರಲಿ. ಶುಭಸಂಖ್ಯೆ: 1
ವೃಶ್ಚಿಕ
ಒಳ್ಳೆಯ ಅದೃಷ್ಟ ಎಂದರೆ ನೆರೆಹೊರೆಯ ಜನ ನಿಮ್ಮ ಸಹಾಯಕ್ಕಿದ್ದು ನಿಮ್ಮ ಭಾರವನ್ನು ತಗ್ಗಿಸಲಿದ್ದಾರೆ. ಶುಭಸಂಖ್ಯೆ: 6
ಧನು
ನಿಮ್ಮ ಮನೋಭಿಲಾಷೆಗೆ ಪೂರಕವಾದ ವಿಷಯಗಳನ್ನು ಗೆಳೆಯರ ಬೆಂಬಲದ ಮೂಲಕ ಸಾಧಿಸುತ್ತೀರಿ. ಶುಭಸಂಖ್ಯೆ: 8
ಮಕರ
ತೃಪ್ತಿಯ ಬದುಕಿಗೆ ಇಂದು ಒಂದು ಒಳ್ಳೆಯ ಕಾರ್ಯಸಂಯೋಜನೆಗೆ ಸೂಕ್ತವಾದ ಅವಕಾಶ ಸಿಗಲಿದೆ. ಶುಭಸಂಖ್ಯೆ: 3
ಕುಂಭ
ಭವಭಯಹರನಾದ ಶ್ರೀ ಮಹಾಬಲೇಶ್ವರನ ಕಾರುಣ್ಯದಿಂದ ಸೂಕ್ತವಾದ ಯಶಸ್ಸು ಲಭಿಸಿ ಬರಲಿದೆ. ಶುಭಸಂಖ್ಯೆ: 7
ಮೀನ
ಯಾರನ್ನೂ ಆಶ್ರಯಿಸದೆ ಒಂಟಿಯಾಗಿ ಮುಂದುವರಿಯಿರಿ.ಆಶಾವಾದದಿಂದಲೇ ಗೆಲುವು ಲಭಿಸಲಿದೆ. ಶುಭಸಂಖ್ಯೆ: 2
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
