ಪ್ರಧಾನಮಂತ್ರಿ ಪ್ರತಿನಿಧಿಸೋ ವಾರಣಾಸಿಯ ಇನ್ನೊಂದು ಮುಖ ಬಯಲಾಗಿದೆ. ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವಾರಣಾಸಿ ಪ್ರವಾಸಿಗರಿಗೆ ಪೂರೈಸುವ ವೇಶ್ಯಾಗೃಹಗಳ ಬಗ್ಗೆ ಬೆಳಕು ಚೆಲ್ಲುವ ” ಗುಡಿಯಾ” ಎಂಬ ಡಾಕ್ಯುಮೆಂಟರಿ ಬಿಚ್ಚಿಟ್ಟ ಕರಾಳ ವಾರಣಾಸಿಯ ಕುರೂಪಮುಖ ಬೆಚ್ಚಿ ಬೀಳಿಸುವಂತಿದೆ. ಅಂಬಾನಿ ಪತ್ನಿಯ ಭದ್ರತೆಯ ಬಗ್ಗೆ ಎಲ್ಲಿಲ್ಲದ ಕಾಳಜಿ ವಹಿಸುವ ರಾಜಕಾರಣಿಗಳು ಈ ಕ್ಷೇತ್ರದ ಹೆಣ್ಣುಮಕ್ಕಳನ್ನ ನಿರ್ಲಕ್ಷಿಸಿದ್ದರ ಮುಖವಾಡ ಕಳಚಿ ಬಿದ್ದಿದೆ.
ಪೊಲೀಸರ ಸಪೋರ್ಟಿನಿಂದಲೇ ದೆಹಲಿ, ಉತ್ತರಪ್ರದೇಶದ ಹಳ್ಳಿಗಳಿಂದ ಅಪಹರಿಸಿದ ಅಪ್ರಾಪ್ತ ಬಾಲಕಿಯರನ್ನು ವಾರಣಾಸಿಯ ವೇಶ್ಯಾಗೃಹಗಳಲ್ಲಿ ಅತ್ಯಾಚಾರವೆಸಗಿ ದಂಧೆಗೆ ಇಳಿಸಲಾಗುತ್ತಿದೆ. ಒಪ್ಪದ ಮಕ್ಕಳಿಗೆ ಕರೆಂಟ್ ಶಾಕ್ ಕೊಟ್ಟು, ಕಬ್ಬಿಣದ ರಾಡುಗಳಲ್ಲಿ ಬಡಿದು ವೇಶ್ಯಾವೃತ್ತಿಗೆ ಇಳಿಸಲಾಗುತ್ತಿದೆ. ಆಸ್ಪತ್ರೆಗಳಿಂದ ಕದ್ದು ತಂದ ಹೆಣ್ಣು ಎಳೆಗೂಸುಗಳಿಗೆ ಹಾರ್ಮೋನ್ ಇಂಜೆಕ್ಷನ್ ಕೊಟ್ಟು ದೇಹ ಬೇಗ ಬೆಳೆಯುವಂತೆ ಮಾಡಿ ದೇಶದ ಮೂಲೆ ಮೂಲೆಯ ವೇಶ್ಯಾಗೃಹಗಳಿಗೆ ತಳ್ಳಲಾಗುತ್ತಿದೆ. ಈ ಅಪ್ರಾಪ್ತ ಬಾಲಕಿಯರು ತಾವೇ ಮಾತನಾಡಿ ತಾವು ಅನುಭವಿಸಿದ ನರಕಯಾತನೆಯನ್ನು ಎಳೆ ಎಳೆಯಾಗಿ ಈ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ.
“ಗುಡಿಯಾ” ಡಾಕ್ಯುಮೆಂಟರಿ ಯೂಟ್ಯೂಬ್ ನಲ್ಲಿ ಕೂಡ ಲಭ್ಯವಿದೆ. ಪ್ರಧಾನಿಯ ಸ್ವಕ್ಷೇತ್ರದಿಂದಲೇ ಬೇಟಿ ಬಚಾವೋ ಆಗಬೇಕಿದೆ. ವಾರಣಾಸಿಯಿಂದಲೇ ಎಳೆಯಪ್ರಾಯದ ಹೆಣ್ಣುಮಕ್ಕಳನ್ನು ನರಕಕ್ಕೆ ತಳ್ಳುವ ವೇಶ್ಯಾಗೃಹಗಳು, ಅದಕ್ಕೆ ಅಪ್ರಾಪ್ತ ಬಾಲಕಿಯರನ್ನು ಕದ್ದು ಪೂರೈಸುವ ಗೂಂಡಾಗಳು, ಪೊಲೀಸರನ್ನು ಹದ್ದುಬಸ್ತಿನಲ್ಲಿಡಲಾಗದ ಅಧಿಕಾರಿಗಳು ದೇಶದ ಹೆಣ್ಣುಮಕ್ಕಳ ಮಾನಪ್ರಾಣವನ್ನ ಹೇಗೆ ರಕ್ಷಿಸಬಲ್ಲರು? ಸದ್ಯಕ್ಕೆ ಇವರ ಬಾಯೊಳಗೆ ಲಾಲಿಪಾಪ್ ಇದೆ. ಮೌನವ್ರತ ಜಾರಿಯಲ್ಲಿದೆ. ಇಷ್ಟಕ್ಕೂ ನರಳೋ ಹೆಣ್ಣುಮಕ್ಕಳನ್ನ ಕಟ್ಕೊಂಡು ಇವರಿಗೆ ಆಗಬೇಕಿರೋದು ಏನು? ಅಂಬಾನಿ ಪತ್ನಿಗೆ Y ದರ್ಜೆ ಸೆಕ್ಯೂರಿಟಿ ಕೊಟ್ಟು ವಾರಣಾಸಿ ಕ್ಷೇತ್ರದ ಹೆಣ್ಮಕ್ಕಳ ಮಾನಪ್ರಾಣದ ರಕ್ಷಣೆಯ ಜವಾಬ್ದಾರಿ ಕೈಬಿಟ್ಟ ಅಧಿಕಾರಿಗಳ ಬಗ್ಗೆ ಜೊತೆಗೆ ತಮ್ಮ ಊರಿನ ಸ್ಥಿತಿಗತಿಗಳ ಬಗ್ಗೆ ದೇಶ ದೇಶ ಸುತ್ತುವ ಪ್ರಾಧಾನಿಯವರು ತಿಳ್ಕೋಲ್ಲದೆ ಇರುವುದು ವಿಪರ್ಯಾಸದ ಸಂಗತಿ.
“ಗುಡಿಯಾ” ಡಾಕ್ಯುಮೆಂಟರಿ Film
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
