ಅಂದು ಕನ್ನಡ ಚಿತ್ರರಂಗನೇ ಒಟ್ಟಾಗಿ ಮಹದಾಯಿ ವಿರುದ್ಧ ಹೊರಡ್ತಿದೆ ಎಂದಾಗ ಪ್ರತಿಯೊಬ್ಬ ಕನ್ನಡಿಗನ ಹೃದಯ ತುಂಬಿ ಬಂದಿದ್ದು ಸುಳಲ್ಲ, ಮಹದಾಯಿ ಹೋರಾಟ ಆಯಿತು, ಪಾಪ ಎಷ್ಟೋ ಮಂದಿ ವದೆ ತಿಂದು ಜೈಲ್ನಲ್ಲಿ ಮುದ್ದೆ ಮುರಿದಿದ್ದು ಆಯಿತು, ಕೈಲಾಗದವರು ಮೈ ಪರಚಿಕೊಂಡರು ಅನ್ನೋ ಹಾಗೆ ಸರ್ಕಾರ ಅಮಾಯಕರನ್ನು ದಂಡಿಸಿದ್ದು ಆಯಿತು…
ಆದರೆ ವಿಷೆಯ ಏನಪ್ಪಾ ಅಂದ್ರೆ ಎಷ್ಟೆಲ್ಲ buildup ತಗೊಂಡು ನಾನು ಕನ್ನಡಿಗ, ಕರ್ನಾಟಕದ ಪರ ಅಂತೆಲ್ಲ ಬೊಗಳೆ ಬಿಟ್ಟ ಯಶ್ ಬೆಂಗಳೂರಿನಲ್ಲಿ ತನ್ನ ಸ್ಟೇಟಸ್ ಗೆ ತಕ್ಕಂತೆ ಹೋಟೆಲ್ಗಳೇ ಇಲ್ಲ ಎಂಬಂತೆ ಗೋವಾದ ತಾಜ್ ವಿವಾಂತ ಹಾಲಿಡೇ ವಿಲೇಜ್ ಹೋಟೆಲ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವುದು ಕನ್ನಡಿಗರಿಗೆ ಮುಜುಗರ ತಂದೊಡ್ಡಿದೆ.
ಉತ್ತರ ಕರ್ನಾಟಕದಲ್ಲಿ ರೈತರು ಕುಡಿಯೋ ನೀರಿಗಾಗಿ ಹೋರಾಡಿ ಸಾಯ್ತಾ ಇದ್ದಾರೆ ಎಂಬುದು ಯಶ್ ಗೆ ಗೊತ್ತಿದ್ದರೂ, ಕನ್ನಡಿಗರ ಕುಡಿಯೋ ನೀರನ್ನೇ ಕಸಿದುಕೊಂಡ ಗೋವಾ ರಾಜ್ಯದಲ್ಲಿ ಒಬ್ಬ ಸ್ಟಾರ್ ನಿಶ್ಚಿತಾರ್ಥ ಅಂದ್ರೆ ಕೋಟ್ಯಾಂತರ ರೂಪಾ ಖರ್ಚಾಗೇ ಆಗುತ್ತೆ ಎಂಬುದು ಗುಟ್ಟಾಗಿ ಉಳಿದಿಲ್ಲ, ನಾವು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡ್ಕೋಬೇಡಿ ಅಂತ ಕಂಡಿತಾ ಹೇಳ್ತಿಲ್ಲ, ಒಬ್ಬ ಸ್ಟಾರ್ ಆಗಿ ಜನರ ಭಾವನೆಗಳಿಗೆ ದಕ್ಕೆ ಬರುವ ಕೆಲಸ ಬೇಡ ಎಂಬುದೇ ನಮ್ಮೆಲ್ಲರ ಒತ್ತಾಸೆಯಾಗಿದೆ. ಎಷ್ಟೋ ಜನ ಹೇಳಬಹುದು ರಾಧಿಕಾ ತಾಯಿಯ ಊರು ಗೋವಾ ಎಂದು, ಆದರೇನು ಸ್ವಾಮಿ ? ಆಕೆ ಕೂಡ ಕನ್ನಡದ ಹುಡುಗಿಯಲ್ಲವೇ, ಮೇಲಾಗಿ ಕರ್ನಾಟಕದ ಎಷ್ಟೋ ಚಿತ್ರರಸಿಕರ ಪರವಾಗಿ ಕನ್ನಡದ ಪರ ನಿಲ್ಲಬೇಕಾದ ಸೆಲಿಬ್ರೆಟಿ ತಾನೇ, ರೈತರ ನೀರಿನ ಹಾಹಾಕಾರದ ಬಗ್ಗೆ ಸ್ವಲ್ಪ ಯೋಚಿಸೋಣ. “ರಕ್ತ ಕೊಟ್ಟೇವು, ನೀರು ಮಾತ್ರ ಬಿಡೋದಿಲ್ಲಾ…” ಅಂತ ಘೋಷಣೆ ಕೂಗುವಾಗ ಅಲ್ಲಿದ್ದವರು ಇದೇ ಯಶ್ ಅಲ್ವಾ..? ಇಷ್ಟುಬೇಗ ಆ ಅಭಿಮಾನ ಮರೆತು ಹೋಯ್ತಾ..?
ಇಲ್ಲ, ಬರೀ ಪ್ರಚಾರ ಗಿಟ್ಟಿಸಿಕೊಳ್ಳಲು ಆ ಮಾತು ಹೇಳಿದ್ರಾ..? ಇಂಥವರ ಮಾತಿಗೆ ನಮ್ಮ ಜನ ಮರುಳಾಗ್ತಿರೋದಿಕ್ಕೇ ರಾಜ್ಯಕ್ಕೆ ಅನ್ಯಾಯ ಆಗ್ತಲೇ ಇರೋದು. ಇಂಥವರನ್ನು ಹೀರೋ ಅಂತ ಬಿಂಬಿಸೋದನ್ನ ನಮ್ಮ ಮಾಧ್ಯಮಗಳು ಬಿಡಬೇಕು ಅಲ್ಲವೇ..???????! ಒಂದ್ ಕಡೆ ತೊಟ್ಲು ತೊಗ್ತೀರಾ, ಇನ್ನೊಂದ್ ಕಡೆ ಮಗೂನೂ ಅಳುಸ್ತೀರಲ್ಲ ಯಶ್… ಮುಂದೆ ಇದಕ್ಕೆಲ್ಲ ಬೆಲೆ ತೆರಬೇಕಾದೀತು, ಎಚ್ಚರಿಕೆ…!!
-ಗಿರೀಶ್ ಗೌಡ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
