fbpx
Awareness

ನೀರಿಗೆ ಪರ್ಯಾಯ ಪದ ‘ಅಮೃತ’ ಎನ್ನಬಹುದು…

ನೀರಿನ ಬಗ್ಗೆ ನಿರ್ಲಕ್ಷ್ಯವಹಿಸುವುದು ಹಾಗೂ ಅದನ್ನು ಪೋಲುಮಾಡುವುದು ನಮ್ಮಲ್ಲಿ ಸಾಮಾನ್ಯ ದೃಶ್ಯ. ಆದರೆ ಮಾನವನ ದೇಹಕ್ಕೆ ಪ್ರಮುಖವಾಗಿ ಬೇಕಿರುವ ಜೀವಾಂಶ ನೀರು ಎಂಬುದನ್ನು ನಾವು ಮರೆತಿರುತ್ತೇವೆ.

ನೀರು ದೇಹದ ಬಾಹ್ಯ ಅಂಗಗಳನ್ನು ಸ್ವಚ್ಛವಾಗಿಡುವುದರೊಂದಿಗೆ ಒಳಗಿನ ಅಂಗಗಳನ್ನು ಪುನಃಶ್ಚೇತನಗೊಳಿಸುತ್ತದೆ. ದೇಹದೊಳಗಿನ ಕಶ್ಮಲಗಳನ್ನು ಹೊರಹಾಕಲು ದೇಹದಲ್ಲಿರುವ ಪ್ರಮುಖ ಮಾಧ್ಯಮ ನೀರು. ನೀರಿನೊಂದಿಗೆ ಸೋಸಿ ಕಶ್ಮಲಗಳನ್ನು ದೇಹ ಹೊರ ವಿಸರ್ಜಿಸುತ್ತದೆ.

ನೀರಿನ ಕೊರತೆಯಿಂದ ವ್ಯಕ್ತಿಯ ಸಾವು ಕೂಡ ಸಂಭವಿಸಬಹುದು. ವಾಂತಿ ಬೇಧಿಯಿಂದಾಗಿ ಸಂಭವಿಸುವ ಮರಣಗಳು ನೀರು ಹಾಗೂ ಲವಣಾಂಶಗಳ ಕೊರತೆಯಿಂದ ಸಂಭವಿಸುತ್ತವೆ. ದೇಹದೊಳಗೆ ನೀರಿನ ಸಮತೋಲನ ಸರಿಯಾಗಿರದಿದ್ದರೆ ವ್ಯಕ್ತಿ ಪ್ರಜ್ಞೆಯಿಂದಿರಲು ಸಾಧ್ಯವಿಲ್ಲ. ನೀರು ಜೀವಕೋಶಗಳನ್ನು ಚುರುಕುಗೊಳಿಸುವುದು.

ನೀರಿನ ಇನ್ನೊಂದು ಅಂಶವೆಂದರೆ ಮೂತ್ರಜನಾಂಗಗಳ ಮೂಲಕ ಆಹಾರದಲ್ಲಿ ಕಶ್ಮಲಗಳನ್ನು ಹೊರಹಾಕುವುದು. ನೀರಿನ ಮೂಲಕ ಮೂತ್ರ ಪಿಂಡಗಳಲ್ಲಿ ಕಶ್ಮಲಗಳು ಸೋಸಿ ಮೂತ್ರದ ರೂಪದಲ್ಲಿ ಹೊರ ಹಾಕಲಾಗುತ್ತದೆ. ಇದೇ ರೀತಿ ಚರ್ಮದಲ್ಲೂ ನೀರು ಹವಾ ನಿಯಂತ್ರಕದಂತೆ ಬಳಕೆಯಾಗುತ್ತದೆ. ಬೆವರಿನ ರೂಪದಲ್ಲಿ ದೇಹದ ಉಷ್ಣತೆಯನ್ನು ಸರಿದೂಗಿಸತ್ತದೆ, ಚರ್ಮದಲ್ಲಿ ಕಶ್ಮಲಗಳನ್ನು ಬೆವರಿನ ರೂಪದಲ್ಲೇ ಹೊರ ಹಾಕಲಾಗುತ್ತದೆ.

ಈ ಎಲ್ಲಾ ಉದ್ದೇಶಗಳಿಗಾಗಿ ಹಾಗೂ ರಕ್ತ ಪರಿಚಲನೆಗಾಗಿ ದೇಹಕ್ಕೆ ಪ್ರತಿದಿನ ಕನಿಷ್ಠ ಮೂರು ಲೀಟರ್‌ಗಳಷ್ಟು ನೀರು ಅಗತ್ಯವಿದೆ. ಇಷ್ಟು ಪ್ರಮಾಣದಲ್ಲಿ ನೀರು ಲಭಿಸದಿದ್ದರೆ ಮೂತ್ರಾಂಗಗಳ ದೋಷ ಸಂಭವಿಸುತ್ತದೆ. ಇಂತಹ ಪ್ರಮುಖ ಕಾರಣಗಳಿಂದಾಗಿ ನೀರು ಮನುಷ್ಯನ ಅಸ್ತಿತ್ವಕ್ಕೆ ಅಗತ್ಯವಿರುವ ನಿಸರ್ಗದತ್ತ ಸಾಮಗ್ರಿಯಾಗಿದೆ.

ಸ್ಪಷ್ಟವಾದ ಬಣ್ಣ :

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಜಠರದ ಚಲನೆ ಚೆನ್ನಾಗಿರುತ್ತದೆ. ದೇಹದ ವಿಷಕಾರಿಗಳನ್ನು ಹೊರಗೆ ಹಾಕಿ ದುರ್ಬಲ ಚರ್ಮಕ್ಕೆ ಹೊಳಪು ನೀಡುತ್ತದೆ.

ಕರುಳನ್ನು ಸ್ವಚ್ಛಗೊಳಿಸಲು ನೆರವು :

ಖಾಲಿ ಹೊಟ್ಟೆಗೆ ಒಂದು ಉದ್ದದ ಗ್ಲಾಸಿನಲ್ಲಿ ನೀರು ಕುಡಿದರೆ ಕರುಳನ್ನು ಮತ್ತು ಅಲ್ಲಿ ತುಂಬಿದ ಕೊಳೆ ಸ್ವಚ್ಛಗೊಳಿಸಲು ನೆರವಾಗುತ್ತದೆ. ಪೌಷ್ಠಿಕಾಂಶಗಳನ್ನು ವೇಗವಾಗಿ ಮತ್ತು ಉತ್ತಮವಾಗಿ ಹೀರಿಕೊಳ್ಳಲೂ ನೆರವಾಗುತ್ತದೆ.

ಶಕ್ತಿಯುತವಾಗಿ ಮಾಡುತ್ತದೆ :

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕೆಂಪು ರಕ್ತಕಣಗಳು ಪ್ರಚೋದನೆಗೊಂಡು ವೇಗವಾಗಿ ಬೆಳೆಯುತ್ತವೆ. ಅದರಿಂದ ರಕ್ತಕ್ಕೆ ಹೆಚ್ಚು ಆಮ್ಲಜನಕ ಸರಬರಾಜು ಆಗುತ್ತದೆ. ಇಡೀ ದಿನ ನಿಮಗೆ ಸಕ್ರಿಯವಾಗಲು ಹೆಚ್ಚು ಶಕ್ತಿ ಕೊಡುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ :

ನೀರಿನಲ್ಲಿ ಶೂನ್ಯ ಕ್ಯಾಲರಿಗಳು ಇರುವ ಕಾರಣ ಬೇಕಾದಷ್ಟು ಕುಡಿಯಬಹುದು. ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಟಾಕ್ಸಿನುಗಳನ್ನು ಹೊರಗೆ ಹಾಕಿ ದೇಹ ಉಬ್ಬುವುದನ್ನು ತಡೆಯುತ್ತದೆ. ಅದು ಚಯಾಪಚಯ ಕ್ರಿಯೆಗೂ ನೆರವಾಗುತ್ತದೆ ಮತ್ತು ಕ್ಯಾಲರಿಗಳನ್ನು ವೇಗವಾಗಿ ಕಡಿಮೆ ಮಾಡುತ್ತದೆ.

ಬಲಿಷ್ಠ ನಿರೋಧಕ ವ್ಯವಸ್ಥೆ ನಿರ್ಮಿಸುತ್ತದೆ :

ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ದೇಹದಲ್ಲಿ ಫ್ಲೂಯಿಡ್ ಸಮತೋಲನದಲ್ಲಿಡಲು ನೆರವಾಗುತ್ತದೆ. ಹಾಗೆ ನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ. ಇದು ನಿಮಗೆ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡಿ ಕಡಿಮೆ ರೋಗಗ್ರಸ್ತರಾಗುತ್ತೀರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top