fbpx
Get Inspired

ಕೊಟ್ಟ ಮಾತು ಉಳಿಸಿಕೊಂಡ ಒಳ್ಳೇ ಹುಡ್ಗ

ಹಾಸನ: ಹುತಾತ್ಮ ಯೋಧ ಸಂದೀಪ್ ನಿವಾಸಕ್ಕೆ ಇವತ್ತು ಬಿಗ್ ಬಾಸ್ ಸೀಸನ್ 4 ವಿನ್ನರ್ ಪ್ರಥಮ್ ಭೇಟಿ ನೀಡಿ ಸೈನಿಕನ ಕುಟುಂಬಕ್ಕೆ 50 ಸಾವಿರ ಹಣ ನೀಡಿ ತಾನು ಕೊಟ್ಟ ಮಾತನ್ನ ಪ್ರಥಮ್ ಉಳಿಸಿಕೊಂಡರು.

ವೀರಯೋಧನ ಸ್ವಗ್ರಾಮ ದೇವಿಹಳ್ಳಿಗೆ ಆಗಮಿಸಿದ ಪ್ರಥಮ್, ಸಂದೀಪ್ ಪೋಷಕರಾದ ಪುಟ್ಟರಾಜು ಹಾಗೂ ಗಂಗಮ್ಮನಿಗೆ ಧೈರ್ಯ ತುಂಬಿದರು. ನಂತರ ಸಂದೀಪ್ ಸಮಾಧಿಗೆ ನಮಸ್ಕರಿಸಿ, ಯೋಧನಿಗೆ ಗೌರವ ಸಲ್ಲಿಸಿದರು.

ಬಿಗ್‌ಬಾಸ್‌‌‌ನ ಗೆಲುವಿನ ಹಣ ಪ್ರಥಮ್ ಕೈ ಸೇರದಿದ್ದರೂ ಸೈನಿಕನ ಕುಟುಂಬಕ್ಕೆ 50 ಸಾವಿರ ಹಣ ನೀಡಿ ತಾನು ಕೊಟ್ಟ ಮಾತನ್ನ ಪ್ರಥಮ್ ಉಳಿಸಿಕೊಂಡರು. ಮುಂದಿನ ದಿನಗಳಲ್ಲೂ ಕೂಡ ನನ್ನ ಕೈಲಾದ ಮಟ್ಟಿಗೆ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top