fbpx
Astrology

ನಿತ್ಯ ಭವಿಷ್ಯ 21 ಫೆಬ್ರವರಿ 2017

ಫೆಬ್ರವರಿ 21, 2017 (ಮಂಗಳವಾರ)
ಪಂಚಾಂಗ: 1938 ದುರ್ಮುಖಿ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ದಶಮೀ ತಿಥಿ,
ಮೂಲ ನಕ್ಷತ್ರ,

ರಾಹುಕಾಲ: ಬೆಳಿಗ್ಗೆ 8:11 am – 9:38 am
ಗುಳಿಕಕಾಲ: ಮಧ್ಯಾಹ್ನ 2:00 pm – 3:28 pm
ಯಮಗಂಡಕಾಲ: ಬೆಳಿಗ್ಗೆ 11:05 am – 12:33 pm

ಮೇಷ

01-Mesha

ಈ ದಿನ ಬಲವಾಗಿ ನಿಮ್ಮ ಇಷ್ಟ ದೈವವನ್ನು ನೆನೆಯಿರಿ. ಇದರಿಂದ ಇಂದಿನ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದು.

ವೃಷಭ

02-Vrishabha

ಮಾಡಿ ಮುಗಿಸಲೇಬೇಕಾದ ಕೆಲಸವನ್ನು ಆದಷ್ಟು ಜಾಗ್ರತೆಯಾಗಿ ಮುಗಿಸಿರಿ. ಏಕೆಂದರೆ ಈ ದಿನ ಮನೆಗೆ ಬಂದು ಹೋಗುವ ಬಂಧುಗಳ ಸಂಖ್ಯೆ ಅಧಿಕವಾಗಿರುತ್ತದೆ. ಅವರ ಇಷ್ಟನಿಷ್ಟಗಳನ್ನು ಪೂರೈಸುವುದರಲ್ಲಿಯೇ ಈ ದಿನ ಕಳೆದು ಹೋಗುವುದು.

ಮಿಥುನ

03-Mithuna

ಕೆಲಸದ ಒತ್ತಡದ ದೆಸೆಯಿಂದ ಗೊಂದಲದ ಗೂಡಾಗಿರುವ ಮನಸ್ಸಿನಲ್ಲಿ ಯಾವ ಕೆಲಸವನ್ನು ಮೊದಲು ಮುಗಿಸಬೇಕು ಎಂದು ಚಿಂತಿಸುವಿರಿ. ಮೊದಲು ಮಾಡಿಕೊಂಡ ಒಪ್ಪಂದದ ಕೆಲಸವನ್ನು ಬೇಗನೆ ಮುಗಿಸಿ ಮತ್ತೊಂದು ಕೆಲಸವನ್ನು ಕೈಗೆತ್ತಿಕೊಳ್ಳಿರಿ.

ಕಟಕ

04-Kataka

ಕೋರ್ಟು, ಕಚೇರಿಯ ಕೆಲಸಗಳಲ್ಲಿ ಹಿನ್ನಡೆ ತೋರುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಕೇಸನ್ನು ನಡೆಸುತ್ತಿರುವ ವಕೀಲರನ್ನೇ ಬದಲಿಸಬೇಕೆಂಬ ಇಚ್ಛೆ ಮನದಲ್ಲಿ ಸುಳಿಯುವುದು. ಆದರೆ ಹಾಗೆ ಮಾಡುವುದು ಈ ಹಂತದಲ್ಲಿ ಸರಿಯಲ್ಲ.

ಸಿಂಹ

05-Simha

ವೃಥಾ ಕಾಡುಹರಟೆಯಿಂದ ಸಮಯ ಕಳೆಯಲು ಈ ದಿನ ಸಮಯವಿಲ್ಲ. ಮೈತುಂಬಾ ಕೆಲಸಗಳು. ಯಾವ ಕೆಲಸ ಮಾಡಲು ಹೋದರೂ ಟೀಕೆಗೆ ಗುರಿ ಆಗುವಿರಿ. ಆದರೆ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ ಎಂದು ಬಯಸಿರಿ.

ಕನ್ಯಾ

06-Kanya

ಗುರುಕಾರುಣ್ಯದಿಂದ ಪಾಪರಾಶಿಗಳು ಸುಟ್ಟು ಹೋಗುವುದು. ದೇಹದಲ್ಲಿ ನವಚೈತನ್ಯ ತುಂಬುವುದು. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಈ ದಿನ ಲೌಕಿಕ ಕಾರ್ಯ ಮಾಡಲು ಬಿಡುವು ಸಿಗದೆ ಹೋಗುವ ಸಾಧ್ಯತೆ ಇರುವುದು.

ತುಲಾ

07-Tula

ಕುಟುಂಬದ ಜನರೊಂದಿಗೆ ಬೆರೆತು ಉಲ್ಲಾಸದ ದಿನವನ್ನಾಗಿ ಪರಿವರ್ತಿಸಿ ಕೊಳ್ಳುವಿರಿ. ಮಡದಿ, ಮಕ್ಕಳು ನಿಮ್ಮ ಸಂತೋಷದಲ್ಲಿ ಪಾಲ್ಗೊಳ್ಳುವರು. ಹಣಕಾಸು ಅಲ್ಪಮಟ್ಟಿಗೆ ಕೈಬಿಟ್ಟರೂ ಅದರಿಂದ ಸಂತೋಷವನ್ನು ಹೊಂದುವಿರಿ.

ವೃಶ್ಚಿಕ

08-Vrishika

ದೂರ ದೂರದ ಊರಿನ ಪ್ರಯಾಣದಿಂದ ಅನೇಕ ಉತ್ತಮ ಅವಕಾಶಗಳು ಲಭ್ಯವಾಗಲಿವೆ. ಧೈರ್ಯವನ್ನು ಕಳೆದುಕೊಳ್ಳಬೇಡಿರಿ. ಗುರುವಿನ ಕೃಪಾದೃಷ್ಟಿಯಿಂದ ಎಲ್ಲವೂ ಒಳಿತಾಗಲಿದೆ.

ಧನು

09-Dhanussu

ಮನೆಗೆದ್ದು ಮಾರುಗೆಲ್ಲು ಎಂದರು ಹಿರಿಯರು. ಹಾಗಾಗಿ ಮನೆಯ ವಾತಾವರಣವನ್ನು ನಿರ್ಲಕ್ಷಿಸದಿರಿ. ಮಗ/ ಮಗಳಿನ ವಿದ್ಯಾಭ್ಯಾಸದ ವಿಚಾರವಾಗಿ ಸ್ವಲ್ಪ ಗಮನಹರಿಸಿ. ಸಾಧ್ಯವಾದರೆ ಅವರ ಓದಿಗೆ ಸಹಾಯ ಮಾಡಿರಿ.

ಮಕರ

10-Makara

ಮಾತು ಬೆಳ್ಳಿ ಮೌನ ಬಂಗಾರ ಎಂದರು ಹಿರಿಯರು. ಹಾಗಾಗಿ ಈ ದಿನ ನೀವಾಡುವ ಮಾತುಗಳು ಹಿತಮಿತವಾಗಿರಲಿ. ಸೂಜಿಗೆ ಮುತ್ತು ಕೊಟ್ಟಂತೆ ನಿಮ್ಮ ಮಾತುಗಳು ಹೊರಗೆ ಬರಲಿ. ಇದರಿಂದ ಗೌರವ ಘನತೆ ನಿಮ್ಮದಾಗುವುದು.

ಕುಂಭ

11-Kumbha

ವೃಥಾ ಸಂಯಮ ಕಳೆದುಕೊಳ್ಳಬೇಡಿರಿ. ಗುರು-ಹಿರಿಯರು ತೋರಿದ ಮಾರ್ಗದಲ್ಲಿ ನಡೆಯಿರಿ. ನಿಮ್ಮ ಬಾಲ್ಯ ಸ್ನೇಹಿತರ ಭೇಟಿ ಸಂಭವವಿದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿರಲಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿರಿ.

ಮೀನ

12-Meena

ನಿಮ್ಮ ಸನಿಹದ ಜನರಿಂದ ಪ್ರಶಂಸೆ ಸಿಗುವುದು. ನಿಮ್ಮ ಸೌಮ್ಯ ಸ್ವಭಾವದಿಂದಾಗಿ ನೀವು ಎಲ್ಲರ ಗಮನ ಸೆಳೆಯುವಿರಿ. ನಿಮ್ಮಲ್ಲಿ ಮಾಡಿದ ಹೊಸ ವಿಚಾರವನ್ನು ಗೆಳೆಯರ ಮುಂದೆ ಪ್ರಕಟಗೊಳಿಸುವಿರಿ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top