fbpx
Astrology

ನಿತ್ಯ ಭವಿಷ್ಯ 22 ಫೆಬ್ರವರಿ 2017

 

ಫೆಬ್ರವರಿ 22, 2017 (ಬುಧವಾರ)
ಪಂಚಾಂಗ: 1938 ದುರ್ಮುಖಿ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಏಕಾದಶೀ ತಿಥಿ,
ಪೂರ್ವ ಆಷಾಢ ನಕ್ಷತ್ರ,

ರಾಹುಕಾಲ: ಬೆಳಿಗ್ಗೆ 8:11 am – 9:38 am
ಗುಳಿಕಕಾಲ: ಮಧ್ಯಾಹ್ನ 2:00 pm – 3:28 pm
ಯಮಗಂಡಕಾಲ: ಬೆಳಿಗ್ಗೆ 11:05 am – 12:33 pm

ಮೇಷ

01-Mesha

ನಿಮ್ಮ ಪಾಡಿಗೆ ನೀವಿದ್ದರೂ ನಿಮ್ಮನ್ನು ಮಾತನಾಡಿಸಿ ತಪ್ಪು ಹುಡುಕುವ ಮಂದಿಯಿಂದ ಈ ದಿನ ಎಚ್ಚರದಿಂದಿರಿ. ಆದಷ್ಟು ಈ ದಿನ ಮೌನವಾಗಿದ್ದು ಗಣಪತಿಯ ಆರಾಧನೆ ಮಾಡಿರಿ.

ವೃಷಭ

02-Vrishabha

ಹಿರಿಯರ ಆಶೀರ್ವಾದದಿಂದ ಈ ದಿನ ನಿಮ್ಮ ಕಾರ್ಯಗಳು ಕೈಗೂಡುವವು. ಹಾಗಾಗಿ ಹಿರಿಯರ ಸಹಾಯವನ್ನು ಕಡೆಗಣಿಸದಿರಿ. 

ಮಿಥುನ

03-Mithuna

ಕುಟುಂಬ ಕಲಹದಿಂದ ಮನಸ್ಸಿಗೆ ಅಶಾಂತಿ ಉಂಟಾಗುವುದು. ಹಿರಿಯರ ಮಧ್ಯಸ್ಥಿಕೆಯಿಂದ ಕಲಹವು ಶಮನಗೊಳ್ಳುವುದು. ಪತಿ-ಪತ್ನಿಯರು ಈ ದಿನ ಶಿವನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿರಿ.

ಕಟಕ

04-Kataka

ಪರಾಕ್ರಮ ಕೆಲಸಗಳು ಸುಸೂತ್ರವಾಗಿ ನಡೆಯುವುದು. ಆದಾಗ್ಯೂ ನಿಮ್ಮ ಎದುರಾಳಿಗಳು, ಪ್ರತಿಸ್ಪರ್ಧಿಗಳು ತಲೆನೋವಿಗೆ ಕಾರಣರಾಗುತ್ತಾರೆ. 

ಸಿಂಹ

05-Simha

ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುವವು. ಆದರೆ ನಿಮ್ಮ ಕಠೋರ ಮಾತು ಇತರೆಯವರನ್ನು ಘಾಸಿಗೊಳಿಸುವುದು. ಇದರಿಂದಾಗಿ ಅವರು ಹಣಕಾಸಿನ ವ್ಯವಹಾರದಲ್ಲಿ ಸಂಶಯ ತಾಳುವರು.

ಕನ್ಯಾ

06-Kanya

 ಕೈ ಧಾರಾಳತನವಿರುವ ನೀವು ಇಂದಿನಿಂದ ಹಣ ಕೂಡಿಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ನಿಮ್ಮ ಆಪತ್‌ ಕಾಲದಲ್ಲಿ ಯಾರೂ ನಿಮಗೆ ಸಹಾಯ ಮಾಡುವುದಿಲ್ಲ.

ತುಲಾ

07-Tula

ನಿಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡಿರಿ. ಇದರಿಂದ ನಿಮ್ಮ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಹಣಕಾಸು ಕೂಡಾ ನಿಮಗೆ ಸಕಾಲದಲ್ಲಿ ಒದಗಿ ಬರುವುದು.

ವೃಶ್ಚಿಕ

08-Vrishika

ದ್ವಿತೀಯ ವಾಕ್‌ ಸ್ಥಾನದಲ್ಲಿ ಸಂಚರಿಸುವ ಸಂದರ್ಭದಲ್ಲಿ ಮಾತಿನಿಂದ ಸಮಸ್ಯೆಗಳು ಎದುರಾಗುವುದು. ಹಾಗಾಗಿ ಈ ದಿನ ಎಚ್ಚರಿಕೆ ಅಗತ್ಯ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. 

ಧನು

09-Dhanussu

ತಣ್ಣೀರನ್ನು ಆರಿಸಿ ಕುಡಿಯುವ ಕಾಲವಿದು. ಹಾಗಾಗಿ ನಿಮ್ಮ ಎದುರಾಳಿಯು ಆಡಿದ ಮಾತಿಗೆ ತಕ್ಷ ಣವೇ ಪ್ರತಿಕ್ರಿಯಿಸುವುದು ಈ ದಿನ ಸೂಕ್ತವಲ್ಲ. ಹಾಗಾಗಿ ಇದು ನಿಮ್ಮ ಸೋಲಲ್ಲ. ಸೋತಂತೆ ನಟಿಸಿ ಗೆಲ್ಲಲು ಪ್ರಯತ್ನಿಸಿ.

ಮಕರ

10-Makara

ಗುರು ಕೃಪೆಯಿಂದ ಪಡೆದ ಹಣವು ಶನಿಯ ವ್ಯಯಸ್ಥಾನದ ಸಂಚಾರದಿಂದಾಗಿ ವೃಥಾ ಸರ್ಕಾರಕ್ಕೆ ದಂಡ ತೆರುವ ಮೂಲಕ ಖರ್ಚಾಗುವುದು. ಸಂಚಾರ ನಿಯಮ ಪಾಲಿಸಿ ಮತ್ತು ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಿ

ಕುಂಭ

11-Kumbha

ವ್ಯಾಪಾರ-ವ್ಯವಹಾರಸ್ಥರಿಗೆ ಸಾಧಾರಣ ಫಲ ಕಂಡು ಬರುವುದು. ಕೃಷಿಕರಿಗೆ ಸರ್ಕಾರದ ಧನ ಸಹಾಯ ದೊರೆಯುವುದು. ಮನೆಯ ಇತರೆ ಕಾರ್ಯಗಳು ಮಂದಗತಿಯಿಂದ ಸಾಗುವುದು.

ಮೀನ

12-Meena

ರಾಜಕೀಯ ನೇತಾರರಿಗೆ ಗುರುವಿನ ರಕ್ಷೆ ಇರುವುದರಿಂದ ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಬರುವುದು. ಸಂಘಸಂಸ್ಥೆಗಳ ಚುನಾವಣೆಗಳಲ್ಲಿ ಯಶಸ್ಸನ್ನು ಹೊಂದುವಿರಿ. ಇದರಿಂದ ಜನಪ್ರಿಯತೆ ಹೆಚ್ಚುವುದು.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top