ಬಿಗ್ಬಾಸ್ ಸೀಸನ್ 5 ಯಶಸ್ವಿಯಾಗಿ 50 ದಿನ ಪೂರೈಸಿದ ಹಿನ್ನಲೆಯಲ್ಲಿ ಮಾಜಿ ಬಿಗ್ಬಾಸ್ ಸೀಸನ್ ಗೆದ್ದ ಅಕುಲ್, ಶೃತಿ ಹಾಗೂ ಪ್ರಥಮ್ ಅವರನ್ನು ಅತಿಥಿಗಳಾಗಿ ಆಗಮಿಸಿದ್ದರು
ಆದರೆ ಶೂಟಿಂಗ್ ಇದ್ದ ಕಾರಣ ವಿಜಯ್ ರಾಘವೇಂದ್ರ ವೇದಿಕೆಗೆ ಆಗಮಿಸಲಿಲ್ಲ.
ಈ ವಾರ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿದ್ದು ಚಂದ್ರು ಅವರನ್ನು ಮಾತನಾಡಿಸಿದ ಬಳಿಕ ಮಾಜಿ ಬಿಗ್ಬಾಸ್ ಸೀಸನ್ ಗೆದ್ದ ಅಕುಲ್, ಶೃತಿ ಹಾಗೂ ಪ್ರಥಮ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ರು ಸುದೀಪ್ ಹೀಗೆ ಬಿಗ್ ಬಾಸ್ ಬಗೆಗಿನ ಅಭಿಪ್ರಾಯ ಪಡೆದುಕೊಂಡರು .
ಆಟ ಚೆನ್ನಾಗಿ ಆಡುತ್ತಿರುವವರು ರಿಯಾಜ್ ಎಂದು ಅಕುಲ್ ಉತ್ತರ ಕೊಟ್ಟರೆ , ಶ್ರುತಿಯವರು ದಿವಾಕರ್ ಹೆಸರು ತೆಗೆದುಕೊಂಡರು , ಸೆಲೆಬ್ರಿಟಿ ಗಳ ಮಧ್ಯೆ ತಾವು ಆಟ ಆಡಿದ ರೀತಿ ಇಷ್ಟವಾಯಿತು , ಸರಿ ಇಲ್ಲದ ವಿಷಯಗಳನ್ನು ಕಡ್ಡಿ ತುಂಡು ಮಾಡಿದ ಹಾಗೆ ಹೇಳುವುದು ಇಷ್ಟ ಎಂದರು .
ಮುಂದೆ ಪ್ರಥಮ್ ಸರಣಿ ಬಂದಾಗ ಪ್ರಥಮ್ ಕೂಡ ದಿವಾಕರ್ ಹೆಸರು ತೆಗೆದುಕೊಳ್ಳಲು ಮರೆಯಲಿಲ್ಲ , ಇದಕ್ಕೆ ಕಾರಣವಾಗಿ ಪ್ರಥಮ್ ‘ಹಿಂದಿನ ಸೀಸನ್ ನ ಸ್ಪರ್ಧಿಯನ್ನು ಅನುಕರಣೆ ಮಾಡುತ್ತಿದ್ದಾರೆ ಎಂದರು ಇಲ್ಲಿಗೆ ಬಂದಿರುವುದು ನಿಮ್ಮ ತನವನ್ನು ತೋರಿಸಲು ಈ ಶೋ ಇರುವುದು ನೀವು ನೀವಾಗಿದ್ದರೆ ಒಳ್ಳೆಯದು’ ಎಂದರೆ ಇದಕ್ಕೆ ಮಧ್ಯೆ ಮಾತಾಡಿದ ಅಕುಲ್ ‘ಯಾರನ್ನು ಅನುಕರಣೆ ಮಾಡುತ್ತಿದ್ದಾರೆ ? ಅವರ ಮನಸ್ಥಿತಿ ಹಾಗೆಯೇ ಇರಬಹುದೋ ಏನೋ’ ಎಂದಾಗ ವೇದಿಕೆಯ ಮೇಲೆ ಭಾರಿ ಕೋಲಾಹಲ ಉಂಟು ಮಾಡಿದರು ಅಕುಲ್ ಹಾಗು ಪ್ರಥಮ್ .ಈ ವೇಳೆ ದಿವಾಕರ್ ನನ್ನನ್ನು ಅನುಕರಣೆ ಮಾಡುತ್ತಿದ್ದಾನೆ ಎಂದರು ಪ್ರಥಮ್ .
ಈ ಜಗಳಕ್ಕೆ ಬ್ರೇಕ್ ಹಾಕಿದ ಸುದೀಪ್ ‘ದಿವಾಕರ್ ನಿಮ್ಮನ್ನು ಅನುಕರಣೆ ಮಾಡುತ್ತಿದ್ದಾರೆ ಎಂದು ತುಂಬಾ ಕಡಿಮೆ ಜನ ಅಂದುಕೊಂಡಿದ್ದಾರೆ ಆದರೆ ಆತ ಆಟ ಆಡುತ್ತಿದ್ದಾರೆ , ಪ್ರಥಮ್ ನೀವು ಇನ್ನು ಒಂದು ವಿಷ್ಯ ಸರಿಯಾಗಿ ಕಲಿಯಬೇಕು ನಿಮ್ಮ ಅನಿಸಿಕೆಗಳನ್ನು ಹೇಳಿ ಆದರೆ ದಬಾಯಿಸಲು ಹೋಗುವುದು ಸರಿಯಲ್ಲ , ನನ್ನ ಬಿಗ್ ಬಾಸ್ ಸ್ಪರ್ಧಿಗಳಿಗೆ ಅವಮಾನ ಆಗಲು ನಾನು ಬಿಡುವುದಿಲ್ಲ , ಅದು ನೀವಾದರೂ ಸರಿ , ನೀವು ಇಷ್ಟು ದಿನಗಳಾದರೂ ನಾವು ಬಿಗ್ ಬಾಸ್ ವಿನ್ನರ್ ಎಂದು ಹೇಳಿಕೊಳ್ಳಲಿಲ್ಲ ಅಷ್ಟು ಬುದ್ದಿವಂತರು ನೀವು, ಈಗ ಆಟ ಆಡುತ್ತಿರುವವರು ಆಡುತ್ತಿದ್ದಾರೆ ಅಷ್ಟೇ , ದಿವಾಕರ್ ನಿಮ್ಮನ್ನು ಅನುಕರಣೆ ಮಾಡುತ್ತಿದ್ದಾರೆ ಎಂದು ಹೇಳಿದರೆ ನಾನು ವಯಸ್ನಲ್ಲೂ ಅನುಭವದಲ್ಲೂ ನಿಮಗಿಂತ ದೊಡ್ಡವನು , ನಿಮ್ಮಷ್ಟು ಚೆನ್ನಾಗಿ ಕನ್ನಡ ಮಾತಾಡಲು ಬರದೇ ಇರಬಹುದು ಆದರೆ ಬಹಳ ಪ್ರೀತಿ ಮಾಡುತ್ತೇನೆ ಆದ್ದರಿಂದ ಯಾರಿಗೂ ನಿಮ್ಮನ್ನು ಕಂಪೇರ್ ಮಾಡಬೇಡಿ’ಎಂದರು
ಇದ್ದಕ್ಕೆ ಪ್ರತಿಕ್ರಿಯಿಸಿದ ಪ್ರಥಮ್ ಕ್ಷಮೆ ಕೇಳಿದರು .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
