ಮಾನವತಾವಾದಿ, ಅಪ್ರತಿಮ ದೇಶ ಭಕ್ತ , ಛಲಗಾರ ಮತ್ತು ಸಾಮಾಜಿಕ ಹಾಗೂ ಧೀಮಂತ ರಾಜಕರಣಿಯಾಗಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಇಂದು ಬಾರದ ಲೋಕದತ್ತ ಮುಖ ಮಾಡಿದ್ದಾರೆ.
ದೀರ್ಘ ಕಾಲದ ಆನಾರೋಗ್ಯದಿಂದ ಬಳಲಿ ಬೆಂಡಾಗಿದ್ದ ಫೆರ್ನಾಂಡಿಸ್ ರವರು ದೆಹಲಿಯ ಆಸ್ಪತ್ರೆಯೊಂದರಲ್ಲಿ ಅಸುನೀಗಿದ್ದು . ಜವರಾಯನ ಕರೆಗೆ ಓಗೊಟ್ಟು ಹೊರಟ ಅಪ್ರತಿಮ ರಾಜಕಾರಣಿ ಜಾರ್ಜ್ ಫೆರ್ನಾಂಡಿಸ್ ರವರಿಗೆ 88 ವರ್ಷ ವಯಸ್ಸಾಗಿತ್ತು.
ಇನ್ನೂ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ರವರ ಅಗಲಿಕೆಗೆ ಜನಸಾಮಾನ್ಯರು ಮತ್ತು ಹಲವು ಗಣ್ಯರು ಮರುಗಿದ್ದು, ಅಪ್ಪಟ ದೇಶಭಕ್ತರಾದ ಫೆರ್ನಾಂಡಿಸ್ ರವರ ಕುರಿತು ಶ್ರೀಯುತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಫೆರ್ನಾಂಡಿಸ್ ರವರ ಬಗ್ಗೆ ಹೇಳಿದ್ದೇನು ?
ಅವರ ದೀರ್ಘಾವಧಿಯ ಸಾರ್ವಜನಿಕ ಜೀವನದಲ್ಲಿ, ಜಾರ್ಜ್ ಸಾಹಬ್ ಅವರ ರಾಜಕೀಯ ಸಿದ್ಧಾಂತದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಅವರ ಸರಳತೆ ಮತ್ತು ನಮ್ರತೆ ಎಲ್ಲರಿಗೂ ಮಾದರಿಯಾಗಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅವರನ್ನು ಪ್ರೀತಿಸುವ ಲಕ್ಷಾಂತರ ಜನರಿಗೆ ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
During his long years in public life, George Sahab never deviated from his political ideology. He resisted the Emergency tooth and nail. His simplicity and humility were noteworthy. My thoughts are with his family, friends and lakhs of people grieving. May his soul rest in peace.
— Narendra Modi (@narendramodi) January 29, 2019
ಮತ್ತು, ದಿಟ್ಟ ಹಾಗೂ ದೂರದೃಷ್ಟಿವುಳ್ಳ ನಾಯಕರಾಗಿದ್ದ ಜಾರ್ಜ್ ಫರ್ನಾಂಡಿಸ್ ಬಡವರ ಹಕ್ಕಿಗಾಗಿ ಧ್ವನಿಯೆತ್ತುತ್ತಿದ್ದವರಲ್ಲಿ ಪ್ರಮುಖರಾಗಿದ್ದರು. ಇಂತಹ ವ್ಯಕ್ತಿಯ ಅಗಲಿಕೆ ದುಃಖವನ್ನು ತಂದಿದೆ ಎಂದು ಪ್ರಧಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
George Sahab represented the best of India’s political leadership.
Frank and fearless, forthright and farsighted, he made a valuable contribution to our country. He was among the most effective voices for the rights of the poor and marginalised.
Saddened by his passing away.
— Narendra Modi (@narendramodi) January 29, 2019
ಒಟ್ಟಿನಲ್ಲಿ ದಿಗಜ್ಜನನ್ನು ಕಳೆದುಕೊಂಡ ನಾಡು ಬಡವಾಗಿದೆ.
ಜಾರ್ಜ್ ಫೆರ್ನಾಂಡಿಸ್ ರವರ ಬಗ್ಗೆ :
ಮೂಲತಃ ಮಂಗಳೂರಿನವರಾದ ಜಾರ್ಜ್ ಫೆರ್ನಾಂಡಿಸ್ ರವರು , 1930 ಜೂನ್ 3 ರಂದು ಜನಿಸಿದ್ದರು. ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದರು.
ಜನತಾ ದಳದಲ್ಲಿದ್ದ ಜಾರ್ಜ್ ಫೆರ್ನಾಂಡೀಸರು ನಂತರ ತಮ್ಮದೇ ಸಮತಾ ಪಕ್ಷ ಆರಂಭಿಸಿದ್ದಲ್ಲದೆ ನಂತರದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದರು ಹಾಗೂ ವಿ.ಪಿ ಸಿಂಗ್ ಅವರ ಆಡಳಿತಾವಧಿಯಲ್ಲಿ ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಹಾಗೂ ಕೊನೆಯ ಬಾರಿಗೆ ಅವರು 2009 ರ ಆಗಸ್ಟ್ ನಿಂದ 2010 ರ ಜೂಲೈ ವರೆಗೆ ರಾಜ್ಯಸಭಾ ಸದ್ಯಸರಾಗಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
