ನಾಗರಹಾವು ಸಿನಿಮಾ ಮೂಲಕ ವಿಷ್ಣುವರ್ಧನನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಂಪತ್ ಕುಮಾರ್ ಚಿತ್ರರಂಗದ ಬಹುದೊಡ್ಡ ಆಸ್ತಿಯಾಗಿ ಬೆಳೆದಿದ್ದು ಒಂದು ಇತಿಹಾಸ.
ಹೀಗಿರುವಾಗ ಸಾಹಸ ಸಿಂಹ ಎಂದು ಹೆಸರು ಮಾಡಿದ ನಟ ವಿಷ್ಣುವರ್ಧನ್ ರವರ ಮೂಲ ಹೆಸರು ಸಂಪತ್ ಕುಮಾರ್ ಎಂಬುದು ಎಲ್ಲರಿಗು ಗೊತ್ತಿರುವುದೇ. ತಮ್ಮ ಮನೋಜ್ಞ ನಟನೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಯಜಮಾನ ಇಂದಿಗೂ ಹಲವರ ಮೆಚ್ಚಿನ ನಟ ಎಂದರೆ ತಪ್ಪಾಗಲಾರದು ಅಲ್ಲವೇ? ಇಂದಿಗೂ ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವವಾಗಿರುವ ನಟ ವಿಷ್ಣುವರ್ಧನ್ ಜನರ ಮನದಲ್ಲಿ ಚಿರಸ್ಮರಣೀಯರಾಗಿ ಉಳಿಯಲಿದ್ದಾರೆ.
ಹೀಗಿರುವಾಗ ವಿಷ್ಣು ದಾದಾರ ಅಪ್ಪಟ ಅಭಿಮಾನಿಯಾಗಿರೋ ಕೆ.ಮಂಜು ತಮ್ಮ ಮಗನನ್ನು ಪಡ್ಡೆಹುಲಿ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಪರಿಚಯಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದು . ಇದಕ್ಕಾಗಿ ಅವರು ವಿಷ್ಣು ಅಭಿಮಾನಿಗಳಿಗಾಗಿ ನಿನ್ನೆ ಅಷ್ಟೇ ಒಂದು ಸ್ಪೆಷಲ್ ರಾಪ್ ಸಾಂಗ್ ರಿಲೀಸ್ ಮಾಡಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು “ಸಾಹಸಸಿಂಹನ ಅಭಿಮಾನಿಯಾಗಿರೋ ನಾನು ವಿಷ್ಣುವಿನ ಮೂಲ ಹೆಸರು ಸಂತಪ್ ಕುಮಾರ್ ಹೆಸರಲ್ಲಿ ಸಿನಿಮಾ ಮಾಡಲಿದ್ದೇನೆ ಅದಕ್ಕಾಗಿ ಈಗಾಗಲೇ ಟೈಟಲ್ ಕೂಡ ರಿಜಿಸ್ಟರ್ ಮಾಡಲಾಗಿದೆ” ಎಂದು ಹೇಳಿದರು.
ಒಟ್ಟಿನಲ್ಲಿ ವಿಷ್ಣು ದಾದಾರ ಮೂಲ ಹೆಸರನ್ನು ಟೈಟಲ್ ಆಗಿ ಇಟ್ಟುಕೊಂಡು ಒಂದು ಸಿನಿಮಾ ಮೂಡಿಬರುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
