fbpx
ಸಮಾಚಾರ

ದರ್ಶನ್ ಮುಡಿಗೆ ಒಲಿದು ಬಂತು ಮತ್ತೊಂದು ಬಿರುದು! ಏನದು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ಎಂಬುದು ನಟ ದರ್ಶನ್’ಗೆ ಇರುವ ಬಿರುದು ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಇದರ ಜೊತೆಗೆ ಬಾಕ್ಸ್ ಆಫೀಸ್ ಸುಲ್ತಾನ್, ಮೈಸೂರು ಹುಲಿ, ಕರುನಾಡಿನ ಕರ್ಣ ಸೇರಿದಂತೆ ಅನೇಕ ಬಿರುದುಗಳು ಕೂಡ ದರ್ಶನ್ ಅವರಿಗೆ ಒಲಿದಿವೆ. ಆದಾಗ್ಯೂ ಅವರ ಅಭಿಮಾನಿಗಳು ಮಾತ್ರ ಅವರನ್ನು ಪ್ರೀತಿಯಿಂದ ಡಿ ಬಾಸ್ ಎಂತಲೇ ಕರೆಯುತ್ತಾರೆ. ಈ ಎಲ್ಲ ಬಿರುದುಗಳ ಮಧ್ಯೆ ದರ್ಶನ್ ಅವರಿಗೆ ಮತ್ತೊಂದು ಬಿರುದು ಒಲಿದು ಬಂದಿದೆ.

 

 

ದರ್ಶನ್​ರ ಮಹಿಳಾ ಅಭಿಮಾನಿಗಳು ಕುರುಕ್ಷೇತ್ರ ನೂರು ಕೋಟಿ ಸಂಭ್ರಮವನ್ನೂ ದರ್ಶನ್​ರೊಂದಿಗೆ ಹಂಚಿಕೊಂಡಿದ್ದಾರೆ. ಸಮಾರಂಭವೊಂದರಲ್ಲಿ ದರ್ಶನ್​ಗೆ ಶಾಲು, ಹಾರ, ಪೇಟವನ್ನು ತೊಡಿಸಿ ‘ಶತಕೋಟಿ ಸರದಾರ’ ಅನ್ನೋ ಹೊಸ ಬಿರುದು ನೀಡಿ ಗೌರವಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ‘ಕುರುಕ್ಷೇತ್ರ’. ರಾಜ್ಯದಾದ್ಯಂತ 3ನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಬಾಕ್ಸ್ ಆಫೀಸ್ ಗಳಿಕೆಯಲ್ಲಿ 100 ಕೋಟಿ ಗಳಿಕೆ ಕಂಡು ಮುನ್ನುಗ್ಗುತ್ತಿರುವ ಸಂಭ್ರಮಾಚರಣೆಯಲ್ಲಿ ಡಿ ಬಾಸ್ ಮತ್ತು ಅಭಿಮಾನಿಗಳು ಎಂದು ಡಿ ಕಂಪನಿ ಅಫಿಶಿಯಲ್ ಪೋಸ್ಟ್ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top