ಜೆಎನ್ಯು ಹಿಂಸಾಚಾರ ಘಟನೆ ಬೆನ್ನಲ್ಲೇ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳನ್ನು ಭೇಟಿಯಾದ ಪ್ರಕರಣ ನಟಿ ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ಧಾರೆ. ದೀಪಿಕಾ ಹೋಗಿದ್ದು ಅವರ ವೈಯಕ್ತಿಕ ವಿಚಾರ.ಆದರೆ, ನಾನಂತೂ ತುಕಡೆ ಗ್ಯಾಂಗ್ ಜೊತೆ ಹೋಗಿ ನಿಲ್ಲಲಾರೆ ಎಂದು ಕಂಗನಾ ಸ್ಪಷ್ಟಪಡಿಸಿದ್ದಾರೆ.
“ವೆಬ್ಸೈಟ್” ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಂಗನಾ ರಾಣಾವತ್ ಜೆಎನ್ಯು ವಿದ್ಯಾರ್ಥಿಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶೈಲಿಯಲ್ಲಿ “ತುಕ್ಡೆ ತುಕ್ಡೆ ಗ್ಯಾಂಗ್” ಎಂದು ಟೀಕಿಸಿದ್ದಾರೆ. “ಜೆಎನ್ಯು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಬೆಂಬಲಕ್ಕೆ ನಿಲ್ಲುವುದು ದೀಪಿಕಾ ನಿರ್ಧಾರ. ಏನು ಮಾಡುತ್ತಿದ್ದಾಳೆ ಎಂದು ಆಕೆಗೆ ಅರಿವಿದೆ. ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನನಗೆ ಅಭಿಪ್ರಾಯ ಇರಬಾರದು. ಇದನ್ನು ಮಾಡಬೇಕು ಅಥವಾ ಮಾಡಬಾರದು ಎಂದು ಆಕೆಗೆ ನಾನು ಹೇಳುವುದು ಸರಿಯಿಲ್ಲ. ನಾನು ಏನು ಮಾಡಬೇಕೆನ್ನುವುದನ್ನು ನಾನು ಹೇಳುತ್ತೇನೆ”
‘ನನ್ನನ್ನೇ ಕೇಳುವುದಾದರೆ ನಾನು ಟುಕ್ಡೆ ಟುಕ್ಡೆ ಗ್ಯಾಂಗ್ನವರಿಗೆ ಬೆಂಬಲ ಸೂಚಿಸುವುದಿಲ್ಲ. ಅವರು ದೇಶವನ್ನು ಯಾಕಾಗಿ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ನಮ್ಮ ಸೈನಿಕರು ಹುತಾತ್ಮರಾಗುವುದನ್ನು ಅವರ್ಯಾಕೆ ಸಂಭ್ರಮಿಸುತ್ತಾರೆ ಅರ್ಥವಾಗದ ವಿಷಯ. ನನಗೆ ಅವರು ಹಿಡಿಸುವುದಿಲ್ಲ. ಅವರು ಸರಿಯಾದ ಮಾರ್ಗದಲ್ಲಿದ್ದಾರೆ ಎಂದು ನನಗನಿಸುವುದಿಲ್ಲ’ ಎಂದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
