ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ಮಾಡಿದ ಕೇಸ್ಗೆ ಸಂಬಂಧಿಸಿ ರಾಜ್ಯ ಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಖಂಡಿಸಿದ್ದಾರೆ. ಗುಂಡು ಹಾರಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಜಿಸಿ ಚಂದ್ರಶೇಖರ್ ಗುಂಡು ಹಾರಿಸಿದ್ದಕ್ಕೆ ಛಿಮಾರಿ ಹಾಕಿದ್ದಾರೆ.
“ಏನ್ ಆಶ್ಚರ್ಯ, ನಮ್ಮ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದಂತೇ ಎಲ್ಲರೂ ಹಾರ ತುರಾಯಿ ಬಿಟ್ಟು, ನಮ್ಮ ಕರ್ನಾಟಕದಲ್ಲೂ ಗೋಡ್ಸೆ ಮತ್ತು ಉತ್ತರ ಪ್ರದೇಶದ ಸಂಸ್ಕೃತಿ ಶುರು ಮಾಡಿದ್ದಾರೆ! ಇಂತಹ ಸಂಸ್ಕೃತಿ ಗೆ ನಾಂದಿ ಹಾಡಿದ ನಾಯಕರು ಸಮಾಜಕ್ಕೆ ಏನು ಸಂದೇಶ ಕೊಡಲು ಹೊರಟಿದ್ದಾರೆ ?” ಎಂದು ಟ್ವೀಟ್ ಮಾಡುವ ಮೂಲಕ ಜಿಸಿ ಚಂದ್ರಶೇಖರ್ ಕಟುವಾಗಿ ವಿರೋಧಿಸಿದ್ದಾರೆ,.
ಎನ್ ಆಶ್ಚರ್ಯ, ನಮ್ಮ ಮಾನ್ಯ @CMofKarnataka ಹೇಳಿದಂತ್ತೆ ಎಲ್ಲರೂ ಹಾರ ತುರಾಯಿ ಬಿಟ್ಟು, ನಮ್ಮ ಕರ್ನಾಟಕದಲ್ಲೂ ಗೋಡ್ಸೆ ಮತ್ತು ಉತ್ತರ ಪ್ರದೇಶದ ಸಂಸ್ಕೃತಿ ಶುರು ಮಾಡಿದ್ದಾರೆ!
ಇಂತಹ ಸಂಸ್ಕೃತಿ ಗೆ ನಾಂದಿ ಹಾಡಿದ ನಾಯಕರು ಸಮಾಜಕ್ಕೆ ಏನು ಸಂದೇಶ ಕೊಡಲು ಹೊರಟಿದ್ದಾರೆ ? pic.twitter.com/s8ra76ZYU3— GC ChandraShekhar (@GCC_MP) August 19, 2021
ಏನಿದು ಘಟನೆ:
ಬಿಜೆಪಿ ಜನಾರ್ಶೀವಾದ ಯಾತ್ರೆ ಅಂಗವಾಗಿ ಜಿಲ್ಲೆಯ ಗಡಿ ಗ್ರಾಮ ಯರಗೋಳದಲ್ಲಿ ಸಚಿವರನ್ನು ಮೆರವಣಿಗೆ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದರು. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
