fbpx
ಸಮಾಚಾರ

ಮತ್ತೆ ಪ್ರತ್ಯಕ್ಷನಾದ ನಿತ್ಯಾನಂದನಿಂದ ಅಚ್ಚರಿಯ ಹೇಳಿಕೆ; ಮಧುರೈ ಅಧೀನಂ ಮಠದ ಸಿಬ್ಬಂದಿಗೆ ಗೊಂದಲ

ಭಾರತ ತೊರೆದು ಕೈಲಾಸ ಹೆಸರಿನ ದ್ವೀಪ ರಾಷ್ಟ್ರ ಸ್ಥಾಪಿಸಿದ್ದೇನೆ ಎಂದು ಹೇಳಿಕೊಳ್ಳುವ ನಿತ್ಯಾನಂದ ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಮದುರೈ ಅಧೀನಂ ಮಟದ 292ನೇ ಸ್ವಾಮೀಜಿ ಆಗಿದ್ದ ಶ್ರೀ ಅರುಣಗಿರಿನಾದರ್ ಅವರು ಕಳೆದ ವಾರ ನಿಧನರಾಗುತ್ತಿದ್ದಂತೆಯೇ ನಿತ್ಯಾನಂದ ಆ ಮಠಕ್ಕೆ ತಾನೇ ಸ್ವಾಮೀಜಿ ಎಂದು ಹೇಳಿಕೊಂಡಿದ್ದಾರೆ. ಅರುಣಗಿರಿನಾಥರ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಹೇಳಿಕೆ ನೀಡಿರುವ ಅವರು, ತಾನು ಈ ಪುರಾತನ ಅಧೀನಮ್ ಮಠಕ್ಕೆ ನಿಜವಾದ ವಾರಸುದಾರ ಎಂದು ಹೇಳಿದ್ದಾರೆ.

ಪೀಠದ 292ನೇ ಗುರುವಾಗಿದ್ದ ಅರುಣಗಿರಿನಾಥ ದೇಶಿಕ ಪರಮಾಚಾರ್ಯ ಸ್ವಾಮಿಗಳು ಆ.14ರಂದು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಕಿರಿಯ ಸ್ವಾಮಿಗಳಾಗಿದ್ದ ಹರಿಹರ ದೇಶಿಕ ಪರಮಾಚಾರ್ಯ ಅವರನ್ನು ನೂತನ ಗುರುಗಳೆಂದು ಘೋಷಿಸಲಾಗಿತ್ತು. ಇದರ ಹೊರತಾಗಿಯೂ ನಿತ್ಯಾನಂದ, ತಾನೇ ಮಠದ ನೂತನ ಸ್ವಾಮಿ ಎಂದು ಘೋಷಿಸಿಕೊಂಡಿದ್ದಾನೆ. 2012ರಲ್ಲಿ ಅಧೀನಮ್‌ ಪೀಠದಲ್ಲಿ ಶಿಷ್ಯವೃತ್ತಿ ಮಾಡುತ್ತಿದ್ದ ನಿತ್ಯಾನಂದ, ನಂತರ ನಡೆದ ಗಲಾಟೆಗಳಿಂದ ಪೀಠದಿಂದ ಹೊರಹಾಕಲ್ಪಟಿದ್ದ

ಮಧುರೈ ಅಧೀನಂನ 292ನೇ ಪೀಠಾಧಿಪತಿಯಾಗಿದ್ದ ಅರುಣಗಿರಿನಾಥ ಸ್ವಾಮಿಗಳು ಆಗಸ್ಟ್​ 9ರಂದು ಆಸ್ಪತ್ರೆಗೆ ದಾಖಲಾದಾಗ, ಶೀಘ್ರವೇ ಗುಣಮುಖರಾಗುವಂತೆ ಈ ನಿತ್ಯಾನಂದ ಹಾರೈಸಿದ್ದರು. ನಿತ್ಯಾನಂದ ಅವರನ್ನು 2012ರ ಏಪ್ರಿಲ್​ 27ರಂದು ಇದೇ ಅರುಣಗಿರಿನಾಥರು, ಮಧುರೈ ಅಧೀನಂನ ಕಿರಿಯ ಪೀಠಾಧಿಪತಿ ಎಂದು ಘೋಷಿಸಿದ್ದರು. ಆದರೆ ನಂತರ ಅವರ ವಿರುದ್ಧದ ಕಾನೂನು ಮೊಕದ್ದಮೆಗಳು ಮತ್ತಿತರ ಕಾರಣಕ್ಕೆ ಅದೇ ವರ್ಷ ಡಿಸೆಂಬರ್​​ನಲ್ಲಿ ತೆಗೆದುಹಾಕಿದ್ದರು. ಅದಾದ ನಂತರ ನಿತ್ಯಾನಂದ ಮತ್ತು ಆತನ ಸಹಚರರು ಮಧುರೈ ಅಧೀನಂ ಒಳಗೆ ಪ್ರವೇಶ ಮಾಡಬಾರದು ಎಂದು 2017ರಲ್ಲಿ ಮದ್ರಾಸ್​ ಹೈಕೋರ್ಟ್​ ತೀರ್ಪು ನೀಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top