fbpx
ಸಮಾಚಾರ

ಮೆಟ್ರೋದಲ್ಲಿ ಮತ್ತೆ ಕನ್ನಡ ಕಡೆಗಣನೆ: ಜಿಸಿ ಚಂದ್ರಶೇಖರ್ ವಿರೋಧದ ನಂತರ ಎಚ್ಚೆತ್ತುಕೊಂಡ ಕನ್ನಡ &ಸಂಸ್ಕೃತಿ ಇಲಾಖೆ

ಪ್ರಾದೇಶಿಕ ಭಾಷಾನೀತಿಯನ್ನು ಗಾಳಿಗೆ ತೂರಿ ಬೆಂಗಳೂರಿನ ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಕನ್ನಡ ನಿರ್ಲಕ್ಷದ ವಿಚಾರ ಹೊಸತೇನಲ್ಲ.. ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಕನ್ನಡ ಭಾಷೆ ಬಳಕೆಗಿಂತ ಹಿಂದಿ ಭಾಷೆಯ ಬಳಕೆಯೇ ಹೆಚ್ಚಗಿರುವುದಕ್ಕೆ ಒಂದು ಪರಂಪರೆಯೇ ಇದೆ.. ಈ ಬಗ್ಗೆ ಕನ್ನಡಿಗರು ವರ್ಷಾಂತರಗಳಿಂದ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಹಾಗಿದ್ದರೂ ನಮ್ಮ ಮೆಟ್ರೋ ಸಂಸ್ಥೆ ಮಾತ್ರ ಕನ್ನಡಿಗರ ಆಕ್ರೋಶಕ್ಕೆ ಮಣಿದಿಲ್ಲ. ಭಾಷೆಯ ವಿಚಾರಕ್ಕೆ ಕನ್ನಡಿಗರು ಪ್ರತಿ ಪ್ರತಿಭಟಿಸಿದಾಗಲೆಲ್ಲಾ “ಗಮನಕ್ಕೆ ಬಾರದೆ ತಪ್ಪಾಯಿತು” ಎಂದು ಸಬೂಬು ನೀಡುವ ನಮ್ಮ ಮೆಟ್ರೋ ಸಂಸ್ಥೆಯು “ಇನ್ನು ಮುಂದೆ ಈ ರೀತಿಯ ತಪ್ಪುಗಳ ಆಗುವುದಿಲ್ಲ” ಎಂಬ ಹುಸಿ ಭರವಸೆಗಳನ್ನು ನೀಡುತ್ತಲೇ ಬಂದಿದೆ.. ಇತ್ತೀಚಿಗೆ ಇಂತಹುದೇ ಒಂದು ಘಟನೆ ನಡೆದಿತ್ತು.

ಇತ್ತೀಚೆಗೆ ನಡೆದಿದ್ದ ಮೈಸೂರು ರಸ್ತೆ- ನಾಯಂಡಳ್ಳಿ ಮೆಟ್ರೋ ನಿಲ್ದಾಣಗಳ ಉದ್ಘಾಟನೆ ಸಮಾರಂಭದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಸಮಾರಂಭದಲ್ಲಿ ಹಾಕಲಾಗಿದ್ದ ನಾಮಫಲಕಗಳಲ್ಲಿ ಕೇವಲ ಆಂಗ್ಲ ಭಾಷೆಯಲ್ಲಿ ಮಾತ್ರ ಇತ್ತು ಆದರೆ ಎಲ್ಲಿಯೂ ಕೂಡ ಒಂದಕ್ಷರ ಕನ್ನಡ ಕಾಣಲಿಲ್ಲ..

ಮೆಟ್ರೋ ಉದ್ಘಾಟನೆ ಸಮಾರಂಭದಲ್ಲಿ ಕನ್ನಡ ಕಡೆಗಣನೆ ಮಾಡಿದ ವಿಚಾರಕ್ಕೆ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಚಂದ್ರಶೇಖರ್ ಅವರ ವಿರೋಧದ ನಂತರ ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಚ್ಚೆತ್ತುಕೊಂಡಿದೆ.

 

 

ಇದೇ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಅವರು ನಮ್ಮ ಮೆಟ್ರೋ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಕನ್ನಡದ ನಿರ್ಲಕ್ಷ್ಯ ಆಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಘಟನೆಯ ಬಗ್ಗೆ ಸೂಕ್ತ ವಿವರಣೆ ನೀಡುವಂತೆ ಆದೇಶಿಸಿದ್ದಾರೆ.

ಒಟ್ಟಿನಲ್ಲಿ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಕನ್ನಡ ಕಡೆಗಣನೆ ಬಗ್ಗೆ ವಿರೋಧ ವ್ಯಕ್ತಪಡಿಸಿದ ಪರಿಣಾಮ ಎಚ್ಚೆತ್ತುಕೊಂಡ ಕನ್ನಡ ಸಂಸ್ಕೃತಿ ಇಲಾಖೆ ನಮ್ಮ ಮೆಟ್ರೋ ನಿರ್ದೇಶಕರಿಗೆ ಪತ್ರ ಬರೆದಿದ್ದು ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ

ಟ್ವೀಟ್ ಮಾಡಿದ್ದ ಜಿಸಿ ಚಂದ್ರಶೇಖರ್:
ಮೆಟ್ರೋ ಉದ್ಘಾಟನೆ‌ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ನೋಡಿದರೆ “ಮೆಟ್ರೋ ವಿಸ್ತರಣೆಯಿಂದ ಜನರು ಹತ್ತಿರಾಗುತ್ತಿದ್ದಾರೆ, ಆದರೆ ಮುಖ್ಯಮಂತ್ರಿಗಳು ಕನ್ನಡ, ಕನ್ನಡಿಗರಿಂದ ದೂರ ಸರಿಯುತ್ತಿದ್ದಾರ? ಎಂದು ಸಂಸದ ಜಿಸಿ. ಚಂದ್ರಶೇಖರ್ ಸಿಎಂ ಬಿಮ್ಮಾಯಿ ಅವರಿಗೆ ಪ್ರಶ್ನಿಸಿದ್ದರು.

 

 

ಈ ಕುರಿತು ಖಾರವಾಗಿ ಟ್ವೀಟ್‌ ಮಾಡಿರುವ ಅವರು, ಮಾನ್ಯ ಮುಖ್ಯಮಂತ್ರಿಗಳೆ, ನಮ್ಮ ಮೆಟ್ರೋ ವಿಸ್ತರಣೆಯಿಂದ ಜನರು ಹತ್ತಿರಾಗುತ್ತಿದ್ದಾರೆ ಆದರೆ ತಾವೇಕೆ ಕನ್ನಡಿಗರಿಂದ, ಕನ್ನಡದಿಂದ ದೂರ ಸರಿಯುತ್ತಿದ್ದಿರಿ? ಎಂದು ಪ್ರಶ್ನಿಸಿದ್ದರು…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top