fbpx
ಸಮಾಚಾರ

ಸೆಪ್ಟೆಂಬರ್ 02: ನಾಳೆಯ ಪಂಚಾಂಗ ಮತ್ತು ದಿನದ ರಾಶಿ ಭವಿಷ್ಯ

ಸೆಪ್ಟೆಂಬರ್ 2, 2021 ಗುರುವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದಶಮೀ 6:21 am
ನಕ್ಷತ್ರ : ಆರುಧ್ರ 2:57 pm
ಯೋಗ : ಸಿಧ್ಧಿ 10:09 am
ಕರಣ : ವಿಷ್ಟಿ 6:21 am ಬಾವ 7:07 pm

Time to be Avoided
ರಾಹುಕಾಲ : 1:50 pm – 3:22 pm
ಯಮಗಂಡ : 6:12 am – 7:43 am
ದುರ್ಮುಹುರ್ತ : 10:16 am – 11:05 am, 3:10 pm – 3:59 pm
ವಿಷ : 3:49 am – 5:32 am
ಗುಳಿಕ : 9:15 am – 10:47 am

Good Time to be Used
ಅಮೃತಕಾಲ : Nil
ಅಭಿಜಿತ್ : 11:54 am – 12:43 pm

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:29 pm
ರವಿರಾಶಿ : ಸಿಂಹ
ಚಂದ್ರರಾಶಿ : ಮಿಥುನ

 

 

 

ಆಶಾವಾದ ಮತ್ತು ಧನಾತ್ಮಕ ಚಿಂತನೆ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುವುದು. ಈ ದಿನ ಶುಭವಾರ್ತೆ ಕೇಳುವಿರಿ. ಮಕ್ಕಳೊಡನೆ ನಕ್ಕು ನಲಿಯುವಿರಿ. ಆರ್ಥಿಕ ಸ್ಥಿತಿ ಉತ್ತಮವಿದ್ದು ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುವಿರಿ.

ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆ. ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿರಿ. ಬಂಧುವರ್ಗದಿಂದ ಅಶುಭವಾರ್ತೆ ಕೇಳುವಿರಿ. ಪ್ರಯಾಣದಲ್ಲಿ ಎಚ್ಚರ.

ಮನಸ್ಸಿನ ಕಾಮನೆಗಳು ಪೂರ್ತಿಗೊಳ್ಳುವುದು. ಹೊರಗಿನ ಕೆಲಸ ಸಾಧಿಸುವಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ಕೌಟುಂಬಿಕವಾಗಿ ನೆಮ್ಮದಿಯ ದಿನ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ, ಅಂತೆಯೇ ಇಂದು ನೀವು ಆಶಾವಾದಿಗಳಾಗಿದ್ದೀರಿ. ಇದರಿಂದ ಬಹುನಿರೀಕ್ಷಿತ ಫಲಿತಾಂಶವನ್ನು ಕಾಣುವಿರಿ. ಹಣಕಾಸಿನ ಬಗ್ಗೆ ಜಾಗ್ರತರಾಗಿರಿ. ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ.

 

ಗುರಿ ಸಾಧಿಸುವಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಸಲ್ಲದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಕುಟುಂಬದ ಸದಸ್ಯರೊಡನೆ ಕಾಲ ಕಳೆಯುವಿರಿ.

 

ಆದದ್ದೆಲ್ಲಾ ಒಳಿತೇ ಆಯಿತು ಎಂಬಂತೆ ಈದಿನ ಏನೇ ಆದರೂ ಅದು ನಿಮ್ಮ ಒಳ್ಳೆಯದಕ್ಕೆ ಆಗಲಿದೆ. ವೃಥಾ ಚಿಂತನೆ ಮಾಡದೆ ಸಕರಾತ್ಮಕವಾಗಿ ಚಿಂತಿಸಿ ಯಶಸ್ಸನ್ನು ಹೊಂದುವಿರಿ.

 

ನಿಮ್ಮ ಹಿತಚಿಂತಕರನ್ನು ಅಥವಾ ನಿಮ್ಮನ್ನು ಬೆಂಬಲಿಸುವ ಸ್ನೇಹಿತರನ್ನು ಸಂಪರ್ಕಿಸುವುದರಿಂದ ನಿಮ್ಮ ಮನಸ್ಸಿನ ತಾಕಲಾಟಕ್ಕೆ ಉತ್ತರ ದೊರೆಯುವುದು. ಮತ್ತು ಹಣಕಾಸಿನ ನೆರವು ದೊರೆಯುವುದು. ಆರೋಗ್ಯ ಉತ್ತಮವಾಗಿರುವುದು.

 

ವದಂತಿ ಹರಡುವವರನ್ನು ಸಮೀಪ ಇಟ್ಟುಕೊಳ್ಳಬೇಡಿರಿ. ಒಂದು ಚಿಕ್ಕ ವದಂತಿಯು ನಿಮ್ಮ ತೇಜೋವಧೆಯನ್ನು ಮಾಡಲಿರುವುದು. ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿರಿ. ಸಂಜೆಯ ವೇಳೆಗೆ ಆ ವದಂತಿಯು ಸುಳ್ಳೆಂದು ಗೋಚರಿಸುವುದು.

 

ಮನಸ್ಸಿನ ತಾಕಲಾಟದಲ್ಲಿ ಗೊಂದಲ ಏರ್ಪಡುವುದು. ದೈವ ಕಾರ್ಯಗಳು ಮನಸ್ಸಿಗೆ ನೆಮ್ಮದಿ ನೀಡುವುದು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ದೂರ ಪ್ರಯಾಣದ ಸಾಧ್ಯತೆ ಇರುವುದು. ಇಂದು ಲಾಭಾಂಶ ಕಡಿಮೆ.

ಒಳ್ಳೆಯ ದಿನಗಳು ನಿಮ್ಮ ಪಾಲಿಗೆ ಶುರುವಾಗಿವೆ. ಯಾವ ಕೆಲಸವನ್ನಾದರೂ ನಿಭಾಯಿಸುವ ಮಾನಸಿಕ ಶಕ್ತಿ ಗಳಿಸಿಕೊಂಡಿದ್ದೀರಿ. ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿರುವುದನ್ನು ಗಮನಿಸಿ ಅಚ್ಚರಿ ಪಡುವಿರಿ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ.

 

ಹೊರಗಿನ ಕಳ್ಳರನ್ನು ಹಿಡಿಯಬಹುದು. ಮನೆಯ ಕಳ್ಳರನ್ನು ಹಿಡಿಯುವುದು ಕಷ್ಟ. ಅಂತೆಯೇ ನೀವು ಯಾರನ್ನು ಗೌರವದಿಂದ ಕಾಣುತ್ತಿರುವಿರೋ ಅವರನ್ನು ಅವಮಾನಿಸಬೇಡಿ. ಭಿನ್ನಾಭಿಪ್ರಾಯವಿದ್ದರೆ ಒಂದೆಡೆ ಸೇರಿ ಬಗೆಹರಿಸಿಕೊಳ್ಳಿ.

 

ಹಳೆಯ ವೈಭವವನ್ನು ನೆನೆಯುತ್ತ ಕೂತರೆ ಭವಿಷ್ಯ ಉಜ್ವಲವಾಗುವುದಿಲ್ಲ. ಭವಿಷ್ಯದ ಬಗ್ಗೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಆಲಸ್ಯದಿಂದ ಇಂದು ಹೊರಬರಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top