fbpx
ಸಮಾಚಾರ

ನವೆಂಬರ್ 16: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 16, 2021 ಮಂಗಳವಾರ
ವರ್ಷ : 1943 ಪ್ಲಾವ
ತಿಂಗಳು : ಕಾರ್ತೀಕ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದ್ವಾದಶೀ 8:01 am
ನಕ್ಷತ್ರ : ರೇವತಿ 8:14 pm
ಯೋಗ : ಸಿಧ್ಧಿ 1:47 am
ಕರಣ : ಬಾಲವ 8:01 am ಕುಲವ 8:52 pm

Time to be Avoided
ರಾಹುಕಾಲ : 2:55 pm – 4:20 pm
ಯಮಗಂಡ : 9:13 am – 10:38 am
ದುರ್ಮುಹುರ್ತ : 8:39 am – 9:24 am, 10:48 pm – 11:39 pm
ವಿಷ : 7:12 am – 8:56 am
ಗುಳಿಕ : 12:04 pm – 1:29 pm

Good Time to be Used
ಅಮೃತಕಾಲ : 5:38 pm – 7:22 pm
ಅಭಿಜಿತ್ : 11:41 am – 12:27 pm

Other Data
ಸೂರ್ಯೋದಯ : 6:18 am
ಸುರ್ಯಾಸ್ತಮಯ : 5:50 pm
ರವಿರಾಶಿ : ತುಲ upto 13:17
ಚಂದ್ರರಾಶಿ : ಮೀನ upto 20:14

 

 

 

 

ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗಿರುವುದು. ವಾಕ್‌ ಚಾತುರ್ಯದಿಂದ ನಿಮ್ಮ ಸಹಪಾಠಿಗಳನ್ನು ಗೆಲ್ಲುವಿರಿ. ದುಷ್ಟಫಲ ನಿವಾರಣೆಗಾಗಿ ಗಣಪತಿಯನ್ನು ಆರಾಧಿಸಿರಿ.

 

ನಿಮ್ಮ ಹಿಂದೆ ಬಿದ್ದ ಕೆಲಸ ಕಾರ್ಯಗಳಿಗೆಲ್ಲ ಇಂದು ಕ್ರಿಯಾಶೀಲತೆ ದೊರೆಯುವುದು. ಹಮ್ಮಿಕೊಂಡ ಕೆಲಸಗಳಲ್ಲಿ ಯಶಸ್ಸು ಪಡೆಯುವಿರಿ. ಪರಾಕ್ರಮದ ಶನಿ ಉತ್ತಮನಾಗಿದ್ದು, ಹಣಕಾಸಿನ ತೊಂದರೆ ಇರುವುದಿಲ್ಲ.

 

ನೆರೆಹೊರೆಯವರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿರಿ. ಭಗವಂತನ ಆಶೀರ್ವಾದ ದೊರೆಯುವುದು.

 

ಸಮಸ್ಯೆಗಳ ಸುಳಿಯಿಂದ ಹೊರಬರಲು ಹನುಮಾನ್‌ ಚಾಲೀಸಾ ಪಠಣ ಮಾಡಿರಿ. ದೀನ ದಲಿತರಿಗೆ ಆಹಾರವನ್ನು ನೀಡಿರಿ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ಆರೋಗ್ಯದ ಕಡೆ ಗಮನವಿರಲಿ.

 

 

ಮನಸ್ಸಿನ ಸಂತಸವನ್ನು ನಿಯಂತ್ರಿಸಿಕೊಳ್ಳಿ. ಕೆಟ್ಟ ದೃಷ್ಟಿಯ ಜನ ಎಲ್ಲವನ್ನೂ ಹಾಳು ಮಾಡುವರು. ಶ್ರೀ ರಾಘವೆಂದ್ರ ಸ್ವಾಮಿಯನ್ನು ಮನಸಾ ಸ್ಮರಿಸಿ. ಕೆಲವು ವಿಚಾರಗಳಲ್ಲಿ ಸಹೋದರನ ಸಹಕಾರ ಬಯಸುವುದು ಒಳ್ಳೆಯದು.

 

 

ಉಸಿರು ಕಟ್ಟಿಸುವ ವಾತಾವರಣ ಇರುತ್ತದೆ. ಕುಲದೇವರ ಪ್ರಾರ್ಥನೆಯೊಂದಿಗೆ ಮನೆಯಿಂದ ಹೊರಡಿ. ಸಹೋದ್ಯೋಗಿಗಳೊಡನೆ ಅನಗತ್ಯ ಚರ್ಚೆ ಬೇಡ. ಕುಲದೇವರನ್ನು ಸ್ಮರಣೆ ಮಾಡಿ. ಹೆಚ್ಚಿನ ತೊಂದರೆ ಆಗುವುದಿಲ್ಲ.

 

 

ಬಹುದಿನಗಳ ನಂತರ ಜೀವನದಲ್ಲಿ ನೆಮ್ಮದಿಯ ಮತ್ತು ಸಂತೋಷದ ದಿನಗಳನ್ನು ಕಾಣುವಿರಿ. ನಿಮ್ಮ ಮೇಲೆ ಇದ್ದ ಅಪವಾದಗಳಲ್ಲಿ ಹುರುಳಿಲ್ಲ ಎಂದು ಸಾಬೀತು ಆಗುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

 

 

ಎಲ್ಲದಕ್ಕೂ ಕೋಲೆ ಬಸವನಂತೆ ಒಪ್ಪಿಗೆ ಸೂಚಿಸದಿರಿ. ನನ್ನಿಂದ ಈ ಕೆಲಸ ಆಗುವುದಿಲ್ಲ ಎನ್ನುವ ದಿಟ್ಟ ನಿಲುವನ್ನು ತಿಳಿಸಿ. ಇಲ್ಲದೆ ಇದ್ದಲ್ಲಿ ಅನಗತ್ಯ ತೊಂದರೆಯನ್ನು ಎದುರಿಸಬೇಕಾಗುವುದು.

 

ಮಾತಿನ ಭರದಲ್ಲಿ ಆಡಿದ ಒಂದು ಮಾತು ನಿಮ್ಮನ್ನು ಪೇಚಿಗೆ ಸಿಲುಕಿಸಲಿದೆ. ಹಾಗಾಗಿ ಅದನ್ನು ಅನ್ಯರು ಗುರುತಿಸುವುದಕ್ಕಿಂತ ಮುಂಚೆಯೆ ತಿದ್ದಿಕೊಳ್ಳುವುದು ಒಳ್ಳೆಯದು. ಇದರಿಂದ ನಿಮ್ಮ ಗೌರವ ಹೆಚ್ಚಾಗುವುದು.

 

 

ಹೃದಯ ವೈಶಾಲ್ಯತೆ ಇರುವ ಮನುಜನಿಗೆ ಭಗವಂತ ಸಹಾಯ ಮಾಡುತ್ತಾನೆ. ಹಾಗಾಗಿ ಈ ಹಿಂದೆ ಆಗದೆ ಇದ್ದ ಕೆಲಸವು ದೈವಾನುಕೂಲತೆಯಿಂದ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

ಸದಾ ಚಿಂತೆಯಲ್ಲಿದ್ದು ಎಲ್ಲಾ ಕಳೆದುಕೊಂಡ ಭಾವ ಬೇಡ. ಧೈರ್ಯವಾಗಿ ಮುನ್ನುಗ್ಗಿ ಕಾರ‍್ಯ ಸಾಧಿಸಿ. ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ನೀವಾಡುವ ಮಾತಿನಿಂದ ವಿರಸ ಉಂಟಾಗುವ ಸಾಧ್ಯತೆ ಇದೆ. ತಾಳ್ಮೆಯಿಂದಿರಿ.

 

ಯಾವುದೇ ಕಾರಣಕ್ಕೂ ಬೇರೊಬ್ಬರ ಜತೆಯಲ್ಲಿ ವಾಗ್ವಾದ ಮಾಡುವುದಕ್ಕೆ ಹೋಗಬೇಡಿ ಅದು ನಿಮಗೆ ಅಷ್ಟು ಶುಭವಲ್ಲ. ಆಂಜನೇಯ ಸ್ತೋತ್ರ ಪಠಿಸಿ. ಸಹೋದರರೊಂದಿಗೆ ವೈಮನಸ್ಸು ಬೆಳೆಯಲು ಕಾರಣವಾಗುವುದು. ಅದನ್ನು ಮೂಲದಲ್ಲಿಯೇ ಕತ್ತರಿಸಿ ಹಾಕಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top