ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ತಮಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ತಿಳಿಸಿದ್ದಾರೆ. ಐಸಿಸ್ ಉಗ್ರ ಸಂಘಟನೆ ನನಗೆ ಜೀವ ಬೆದರಿಕೆ ನೀಡಿದೆ ಎಂದು ಗೌತಮ್ ಅವರು ಪೊಲೀಸ್ ದೂರನ್ನು ಕೂಡ ದಾಖಲಿಸಿದ್ದಾರೆ.
ಜೀವ ಬೆದರಿಕೆ ಸಂಭಂದ ಗೌತಮ್ ಗಂಭೀರ್ ಅವರು ದೆಹಲಿ ಪೊಲೀಸರನ್ನು ಸಂಪರ್ಕಿಸಿ ಘಟನೆಯ ಬಗ್ಗೆ ವಿವರಣೆ ನೀಡಿದ್ದು ತಮಗೆ ಐಸಿಸ್ ಉಗ್ರರು ಕಾಶ್ಮೀರದಿಂದ ಕರೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ. ಕೊಲೆ ಬೆದರಿಕೆ ಸಂಭಂದ ದೆಹಲಿಯ ಡಿಸಿಪಿ ಶ್ವೇತಾ ಚೌಹಾಣ್ ತನಿಖೆಗೆ ಆಗ್ರಹಿಸಿದ್ದಾರೆ. ಹಾಗೂ ಗಂಭೀರ್ ಅವರ ನಿವಾಸದ ಹೊರಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಪೂರ್ವ ದೆಹಲಿಯ ಲೋಕಸಭಾ ಸದಸ್ಯ ಗೌತಮ್ ಗಂಭೀರ್ಗೆ ಈಮೇಲ್ಗಳ ರೂಪದಲ್ಲಿ ಬೆದರಿಕೆಗಳು ಬಂದಿವೆ. ಈ ಬಗ್ಗೆ ನಿನ್ನೆ ರಾತ್ರಿ ದೂರು ಬಂದಿದ್ದು, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ತನಿಖೆ ಆರಂಭಿಸಿದ್ದು ಗಂಭೀರ್ರ ದೆಹಲಿಯ ರಾಜೇಂದ್ರ ನಗರದ ನಿವಾಸಕ್ಕೆ ಸೂಕ್ತ ಭದ್ರತೆ ನೀಡಲಾಗಿದೆ ಎಂದು ಡಿಸಿಪಿ ಶ್ವೇತಾ ಚೌಹಾನ್ ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
