ಸ್ಯಾಂಡಲ್ವುಡ್ ನಟಿ ಮಯೂರಿ ಕ್ಯಾತರಿ ಅವರು ತಮ್ಮ ಮಗನ ತಲೆ ಕೂದಲನ್ನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಆರವ್ಗೆ ಕೇಶಮುಂಡನ ಮಾಡಿಸಿದ್ದಾರೆ.. ಮಗನಿಗೆ ಕೇಶಮುಂಡನ ಮಾಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ದಂಪತಿ ಮುಗುವನ್ನು ಇತ್ತಿಕೊಂಡು ದೇವಸ್ಥಾನದ ಎದುರು ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಫೋಟೋಗೆ ‘ಗೋವಿಂದ… ಗೋವಿಂದ…’ ಎಂದು ಅಡಿಬರಹ ನೀಡಿದ್ದಾರೆ. ಅಭಿಮಾನಿಗಳು ಮಯೂರಿ ಹಾಗೂ ಅರುಣ್ ಅವರ ಮುದ್ದಿನ ಮಗನ ಫೋಟೋಗೆ ಲೈಕ್ ಕೊಟ್ಟಿದ್ದಾರೆ.
2020 ಜೂನ್ 12ರಂದು ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆಗೆ ಮಯೂರಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದರು. ನಂತರ ತಾಯಿ ಆಗುತ್ತಿರುವ ವಿಚಾರ, ಸಿಮಂತ ಫೋಟೋಗಳು ಹಾಗೂ ಬೇಬಿ ಬಂಪ್ ಫೋಟೋಗಳನ್ನು ಮಯೂರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
