ಬಿಗ್ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಲಾಗಿದೆ. ಅದು ತಡರಾತ್ರಿ ಪಬ್ನಲ್ಲಿ ಪೋಟೋವಿಚಾರಕ್ಕೆ ಕಿರಿಕ್ ನಡೆದು, ಬಿಯರ್ ಬಾಟಲ್ ನಿಂದ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಲಾಗಿದೆ. ಕಿರಿಕ್ ಕೀರ್ತಿ ಮೇಲೆ 2018ರಲ್ಲೂ ಹಲ್ಲೆ ಮಾಡಲಾಗಿತ್ತು. ಇದೀಗ ಸದಾಶಿವನಗರ ಪಬ್ನಲ್ಲಿ ಪೋಟೋ ವಿಚಾರಕ್ಕೆ ಬಿಯರ್ ಬಾಟೆಲ್ನಿಂದ ಹಲ್ಲೆ ನಡೆಸಲಾಗಿದೆ.
ಕಿರಿಕ್ ಕೀರ್ತಿ ಮೇಲಿನ ಅಭಿಮಾನಕ್ಕಾಗಿ ಆತ ಫೋಟೋ ಕ್ಲಿಕ್ಕಿಸಿದ್ದಾನೆ. ಆದರೆ ಅದನ್ನು ಕೀರ್ತಿ ಸಹಿಸಿಲ್ಲ. ಫೋಟೋ ತೆಗೆದ ಅಭಿಮಾನಿಯ ವಿರುದ್ಧ ಅವರು ಕೋಪಗೊಂಡು ಮನಬಂದಂತೆ ಮಾತನಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಕಾರಣಕ್ಕಾಗಿ ಆ ವ್ಯಕ್ತಿ ಹಲ್ಲೆ ಮಾಡಿರುವುದು ಎಂದು ಕನ್ನಡ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಗಲಾಟೆಯಾಗುತ್ತಿದ್ದಂತೆ ಅಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಹಲ್ಲೆ ನಡೆಸಿ ವ್ಯಕ್ತಿ ಪರಾರಿಯಾಗಿದ್ದಾನೆ. ಇನ್ನೂ ಹಲ್ಲೆಯಿಂದ ಗಾಯಗೊಂಡ ಕಿರಿಕ್ ಕೀರ್ತಿ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
