ಕೇಂದ್ರ ಸರ್ಕಾರ ಮಂಡಿಸಿದ್ದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೇಶಾದ್ಯಂತ ರೈತರು ಕಳೆದ ೨ ವರ್ಷಗಳಿಂದ ಉಗ್ರ ಪ್ರತಿಭಟನೆ ಮಾಡಿದ್ದರು. ಪರಿಣಾಮ ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಮಣಿದು ತಮ್ಮ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಂಡಿತು. ಕೇಂದ್ರ ಕೃಷಿ ಕಾಯ್ದೆಗಳನ್ನ ವಾಪಸ್ಸು ಪಡೆಯುತ್ತಿದ್ದಂತೆ ಅತ್ತ ರೈತರು ಕೂಡ ಪ್ರತಿಭಟನೆಯನ್ನು ಹಂಪಡೆದಿದ್ದಾರೆ.
ದೆಹಲಿಯಲ್ಲಿ ಮಳೆ, ಬಿಸಿಲು ಗಾಳಿ ಚಳಿ ಎನ್ನದೆ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾಗ ಕೇಂದ್ರ ರೈತರ ವಿರುದ್ಧ ಪೊಲೀಸ್ ಅಸ್ತ್ರ ಪ್ರಯೋಗಿಸಿತ್ತು. ರೋಡ್ ತುಂಬೆಲ್ಲಾ ಬ್ಯಾರಿಕೇಡ್ ಗಳನ್ನ ಹಾಕಿಲಾಗಿತ್ತು. ಇನ್ನು ರೈತರ ಟ್ರಾಕ್ಟರ್ ಗಳು ಚಲಿಸಿದಂತೆ ರಸ್ತೆಗೆಲ್ಲಾ ದೊಡ್ಡ ದೊಡ್ಡ ಮೊಳೆಗಳನ್ನ ಹೊಡೆಯಲಾಗಿತ್ತು. ಹಾಗೆಯೆ ರೈತರ ಮೇಲೆ ಜಲ ಪಿರಂಗಿ ಪ್ರಯೋಗ ಕೂಡ ನಡೆದಿತ್ತು.
ಹೀಗೆ ರೈತರ ಹೋರಾಟವನ್ನು ಅಡಗಿಸಲು ಕೇಂದ್ರ ಸರ್ಕಾರ ನಡೆಸಿದ ಪ್ರಯೋಗಗಳು ಒಂದೇ? ಎರಡೇ? ಎಂದೇ ಮಾಡಿದರೂ ಕೇಂದ್ರ ಸರ್ಕಾರ ಅನ್ನದಾತನ ದಿಟ್ಟ ಹೋರಾಟದ ಮುಂದೆ ಶರಣಾಯಿತು. ಇನ್ನು ಈ ರೈತರ ಹೋರಾಟದ ವಿರುದ್ಧ ನೇಮಿಸಿದ್ದ ಪೊಲೀಸ್ ಸೆಕ್ಯುರಿಟಿಗಾಗಿ ಖರ್ಚಾಗಿರುವ ಹಣದ ಮೊತ್ತ ಕೇಳಿದ್ರೆ ಶಾಕ್ ಆಗುತ್ತೆ.
ಹೌದು ಕೃಷಿ ಕಾಯ್ದೆಯನ್ನ ವಿರೋಧಿಸುವ ರೈತರ ಹೋರಾಟದ ಪೊಲೀಸ್ ಸಿಬ್ಬಂದಿಗೆ ಬರೋಬ್ಬರಿ ಏಳು ಕೋಟಿಯಷ್ಟು ಹಣ ಖರ್ಚಾಗಿದೆ. ಈ ಬಾರಿ ಪೊಲೀಸರು ನೀಡಿರುವ ರಕ್ಷಣೆಗೆ ಭರ್ಜರಿ ಖರ್ಚು ಮಾಡಲಾಗಿದೆ. ಈ ಮಾಹಿತಿಯನ್ನ ಸ್ವತಃ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಇಂದು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ತಮಿಳು ನಾಡು ಸಂಸದ ಎಂ ಮೊಹಮ್ಮದ್ ಈ ಕುರಿತು ಪ್ರಶ್ನಿಸಿದಾಗ ನಿತ್ಯಾನಂದ ರೈ ಸದನದಲ್ಲೇ ಈ ಮಾಹಿತಿಯನ್ನ ಎಲ್ಲರೆದುರು ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
