ನಟ-ನಿರ್ದೇಶಕ ಪ್ರಕಾಶ್ ರಾಜ್ ಇವರು ಮೊದಲು ತಮ್ಮ ನಟನೆಯ ಮೂಲಕ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ. ಆದರೆ ಈ ಬಾರಿ ದಲಿತ ಹುಡುಗಿಯೊಬ್ಬಳಿಗೆ ಆತ ಮಡಿದ ಸಹಾಯ ಆತನಿಗೆ ಮೆಚ್ಚುಗೆಯನ್ನು ತಂದುಕೊಟ್ಟಿದೆ. ದಲಿತ ಹುಡುಗಿ ಶ್ರೀಚಂದನಾ ಯುಕೆಯಲ್ಲಿ ಓದಲು ಬಯಸಿದ್ದಳು ಆಕೆಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ಕೂಡ ಶ್ರೀಚಂದನಾ ಯುಕೆಗೆ ಹೋಗಲು ಕಷ್ಟ ಪಡುತ್ತಿದ್ದರು. ಆದರೆ ಹಣದ ಕೊರತೆಯಿಂದ ಆಕೆ ಹೋಗಲು ಸಾಧ್ಯವಾಗಲಿಲ್ಲ. ಆಕೆಗೆ ತಂದೆಯು ಇಲ್ಲ.
ಆಕೆಯ ಪರಿಸ್ಥಿತಿ ತಿಳಿದು ನಂತರ ತಮಿಳು ನಿರ್ದೇಶಕ ನವೀನ್ ಮೊಹಮ್ಮದ್ ಅಲಿ ಅದನ್ನು ನಟ ಪ್ರಕಾಶ್ ರಾಜ್ ಅವರ ಗಮನಕ್ಕೆ ತಂದರು. ಅವರು ವಿದ್ಯಾರ್ಥಿಯ ಸಮಸ್ಯೆಗಳನ್ನ ಕೇಳಿ ಮತ್ತು ಯುಕೆಯಲ್ಲಿ ಪ್ರವೇಶವನ್ನು ಪಡೆಯಲು ಸಹಾಯ ಮಾಡಿದರು. ಈಗ ಶ್ರೀಚಂದನಾ ಅಲ್ಲಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಹಾಗೆಯೇ ನವೀನ್ ಪ್ರಕಾರ, ರಾಜ್ ಯುಕೆಯಲ್ಲಿ ಕೆಲಸ ಮಾಡಲು ಸಹಾಯ ಕೂಡ ಮಾಡಿದರು. “ಬಡತನದಿಂದಾಗಿ ಅಪರೂಪಕ್ಕೆ ಸಿಗುವ ಅವಕಾಶಗಳು ವಂಚಿತರಾದವರಿಗೆ ಪ್ರಕಾಶ್ರಾಜ್ ಅವರಂತಹವರು ದಾರಿದೀಪವಾದರೂ. ಧನ್ಯವಾದಗಳು ಸರ್,” ಎಂದು ನವೀನ್ ಹೇಳಿದರು. ಹಾಗೆಯೇ “ಒಬ್ಬರ ಜೀವನದಲ್ಲಿ ಬದಲಾವಣೆಯನ್ನು ಮಾಡಿದ್ದಕ್ಕಾಗಿ” ಥಂಕ್ಸ್ ಸರ್ ಎಂದು ಟ್ವೀಟ್ನಲ್ಲಿ ಈ ವ್ಯಕ್ತಿ ಪ್ರಕಾಶ್ರಾಜ್ ಅವರಿಗೆ ಧನ್ಯವಾದಗಳು ಹೇಳಿದ್ದಾರೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
