ಕನ್ನಡದ ಮೇರುನಟರಲ್ಲಿ ಒಬ್ಬರಾದ ಸಾಹಸಸಿಂಹ ಡಾ.ವಿಷ್ಣುವರ್ಧನ್ ದೈಹಿಕವಾಗಿ ದೂರವಾಗಿ ಇಂದಿಗೆ ಬರೋಬ್ಬರಿ 12 ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ಇಂದು ವಿಷ್ಣು ಅವರ 12ನೇ ವರ್ಷದ ಪುಣ್ಯಸ್ಮರಣೆ ನಡೆಯಲಿದೆ. ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿರುವ ಸಮಾಧಿ ಬಳಿ ಅಭಿಮಾನಿಗಳಿಂದ ಪೂಜೆ ನಡೆಯಲಿದ್ದು, ಸಾಹಸಸಿಂಹನಿಗೆ ಫ್ಯಾನ್ಸ್ ನಮನ ಸಲ್ಲಿಸಲಿದ್ದಾರೆ. ಪೂಜೆಗಾಗಿ ನಿನ್ನೆಯಿಂದಲೇ ಸಾಕಷ್ಟು ಸಿದ್ಧತೆ ನಡೆದಿದೆ.
ಪ್ರತಿವರ್ಷದಂತೆ ಈ ವರ್ಷವೂ ರಾಜ್ಯದ ಮೂಲೆಮೂಲೆಯಿಂದ ಭಕ್ತರು ವಿಷ್ಣು ಪುಣ್ಯತಿಥಿಗೆ ಕೆಂಗೇರಿಯ ಅಭಿಮಾನ್ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸರ ನಿಯೋಜನೆ ಮಾಡಲಾಗಿದೆ. ಇನ್ನು ಪ್ರತಿ ವರ್ಷದಂತೆ ಈ ಭಾರಿ ಕೂಡ ವಿಷ್ಣು ಪುಣ್ಯತಿಥಿ ಅಂಗವಾಗಿ ಅಭಿಮಾನಿಗಳು ಅನ್ನದಾನ, ರಕ್ತದಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದಾರೆ.
ಪುಣ್ಯಭೂಮಿಯ ಬೇಸರ:
ವಿಷ್ಣುವರ್ಧನ್ ದೈಹಿಕವಾಗಿ ನಮ್ಮಿಂದ ದೂರವಾಗಿ 12 ವರ್ಷಗಳು ಕಳೆದರೂ ವಿಷ್ಣು ಪುಣ್ಯ ಭೂಮಿಯ ಗೊಂದಲ ಇನ್ನೂ ಬಗೆಹರಿದಿಲ್ಲ ಎಂಬ ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿದೆ.. ಅಲ್ಲದೆ, ಜಾಲತಾಣಿಗರು ಟ್ವಿಟರ್ ಫೇಸ್ಬುಕ್ನಲ್ಲಿ ಸಾಹಸ ಸಿಂಹ ವಿಷ್ಟು ಅವರನ್ನು ಸ್ಮರಿಸಿಕೊಂಡಿದ್ದಾರೆ. ಜತೆಗೇ, ಅವರ ಸ್ಮಾರಕ ಇನ್ನೂ ನಿರ್ಮಾಣವಾಗದ ಬಗ್ಗೆ ಅತೀವ ಬೇಸರ, ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
