ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಲಿದ್ದಾರೆ ಎಂದು ಹಲವು ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಿದೆ. ಕಿರೀಟಿ ರೆಡ್ಡಿ ಅತೀ ಶೀಘ್ರದಲ್ಲೇ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ. ಹಾಗಾದರೆ, ಈ ಸಿನಿಮಾಗೆ ನಿರ್ಮಾಪಕ ಮತ್ತು ನಿರ್ದೇಶಕ ಯಾರು? ಮುಂದೆ ಓದಿ.
ಕನ್ನಡದಲ್ಲಿ 2016ರಲ್ಲಿ ತೆರೆ ಕಂಡ ‘ಮಾಯಾ ಬಜಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಧಾಕೃಷ್ಣ ಅವರು ಈ ಚಿತ್ರಕ್ಕೆ ನಿರ್ದೇಶಕ. ಮಾಯಾ ಬಜಾರ್ ಚಿತ್ರವನ್ನು ನೋಡಿ ಮನಸೋತ ಕಿರೀಟಿ ರೆಡ್ಡಿ, ತಮ್ಮ ಮೊದಲ ಚಿತ್ರಕ್ಕೆ ರಾಧಾ ಕೃಷ್ಣ ಅವರನ್ನು ಆಯ್ಕೆ ಮಾಡಿದ್ದಾರಂತೆ. ಚಿತ್ರಕ್ಕಾಗಿ ಅಭಿನಯದ ಜೊತಗೆ, ಡ್ಯಾನ್ಸ್, ಫೈಟ್ ಕೂಡ ಕಲಿತಿದ್ದಾರಂತೆ ಕಿರೀಟಿ.
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಕಿರೀಟಿ ರೆಡ್ಡಿ ಸಿನಿಮಾ ನಿರ್ಮಾಣ ಆಗಲಿದೆ. ಸದ್ಯದಲ್ಲೇ ಕಿರೀಟಿ ರೆಡ್ಡಿ ಫೋಟೋಶೂಟ್ ಮಾಡಿಸಿ, ಅದ್ಧೂರಿಯಾಗಿ ಲಾಂಚ್ ಮಾಡುಲು ನಿರ್ದೇಶಕ ರಾಧಕೃಷ್ಣ ಮತ್ತು ತಂಡ ಸಜ್ಜಾಗಿದೆ. ಸದ್ಯದಲ್ಲೇ ಜನಾರ್ದನ ರೆಡ್ಡಿ ಮಗ ಕಿರೀಟಿ ರೆಡ್ಡಿ ಸಿನಿಮಾದ ಮತ್ತಷ್ಟು ಹೊಸ ಅಪ್ಡೇಟ್ಸ್ ಕೊಡ್ತಿನಿ ಅಂತಾ ನಿರ್ದೇಶಕ ರಾಧಕೃಷ್ಣ ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
