ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಲಿದ್ದಾರೆ ಎಂದು ಹಲವು ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಿದೆ. ಕಿರೀಟಿ ರೆಡ್ಡಿ ಅತೀ ಶೀಘ್ರದಲ್ಲೇ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ. ಹಾಗಾದರೆ, ಈ ಸಿನಿಮಾಗೆ ನಿರ್ಮಾಪಕ ಮತ್ತು ನಿರ್ದೇಶಕ ಯಾರು? ಮುಂದೆ ಓದಿ.
ಕನ್ನಡದಲ್ಲಿ 2016ರಲ್ಲಿ ತೆರೆ ಕಂಡ ‘ಮಾಯಾ ಬಜಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಧಾಕೃಷ್ಣ ಅವರು ಈ ಚಿತ್ರಕ್ಕೆ ನಿರ್ದೇಶಕ. ಮಾಯಾ ಬಜಾರ್ ಚಿತ್ರವನ್ನು ನೋಡಿ ಮನಸೋತ ಕಿರೀಟಿ ರೆಡ್ಡಿ, ತಮ್ಮ ಮೊದಲ ಚಿತ್ರಕ್ಕೆ ರಾಧಾ ಕೃಷ್ಣ ಅವರನ್ನು ಆಯ್ಕೆ ಮಾಡಿದ್ದಾರಂತೆ. ಚಿತ್ರಕ್ಕಾಗಿ ಅಭಿನಯದ ಜೊತಗೆ, ಡ್ಯಾನ್ಸ್, ಫೈಟ್ ಕೂಡ ಕಲಿತಿದ್ದಾರಂತೆ ಕಿರೀಟಿ.
ಪುತ್ರನ ಸಿನಿಮಾ ವಿಚಾರದ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ಚಿತ್ರದ ಮುಹೂರ್ತವನ್ನು ಇದೇ ೨೦ನೆ ತಾರೀಕಿನಂದು ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಮುಹೂರ್ತವನ್ನು ಸ್ವಲ್ಪ ಮುಂದಕ್ಕೆ ಹಾಕುತ್ತಿದ್ದೇವೆ. ಈ ಹಿಂದೆ ಪಿಆರ್ಕೆ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡಿದ್ದ ರಾಧಾಕೃಷ್ಣ ನನ್ನ ಮಗನ ಮೊದಲ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ” ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಇನ್ನು ಟಾಲಿವುಡ್ ನ ಖ್ಯಾತ ನಿರ್ಮಾಣ ಸಮಸ್ಯೆ ವಾರಾಹಿ ಸಿನಿಮಾಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವಾರಾಹಿ ಸಂಸ್ಥೆಯ ಮುಖ್ಯಸ್ಥರಾದ ಸಾಯಿ ಅವರು ನನಗೆ ಆತ್ಮೀಯ ಗೆಳೆಯರಾದ ಕಾರಣ ಅವರೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಜನಾರ್ಧನ ರೆಡ್ಡಿ ಮಾಧ್ಯಮದವರೊಂದಿಗೆ ಮಾಹಿತಿ ನೀಡಿದ್ದಾರೆ.
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಕಿರೀಟಿ ರೆಡ್ಡಿ ಸಿನಿಮಾ ನಿರ್ಮಾಣ ಆಗಲಿದೆ. ಸದ್ಯದಲ್ಲೇ ಕಿರೀಟಿ ರೆಡ್ಡಿ ಫೋಟೋಶೂಟ್ ಮಾಡಿಸಿ, ಅದ್ಧೂರಿಯಾಗಿ ಲಾಂಚ್ ಮಾಡುಲು ನಿರ್ದೇಶಕ ರಾಧಕೃಷ್ಣ ಮತ್ತು ತಂಡ ಸಜ್ಜಾಗಿದೆ. ಚಿತ್ರಕ್ಕೇ ಇನ್ನೂ ಶೀರ್ಷಿಕೆಯನ್ನು ನಿಗದಿಪಡಿಸಿಲ್ಲ. ಸದ್ಯ ಕೊರೋನಾ ಹಾವಳಿ ಇರುವುದರಿಂದ ಚಿತ್ರದ ಮುಹೂರ್ತವನ್ನು ಮುಂದೂಡಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
