ಟಾಲಿವುಡ್ ನ ಮುದ್ದು ಜೋಡಿಗಳಲ್ಲಿ ಒಂದಾಗಿದ್ದ ಸಮಂತಾ-ನಾಗಚೈತ್ಯ ಕಳೆದ ಅಕ್ಟೊಬರ್ ತಿಂಗಳಲ್ಲಿ ವಿಚ್ಛೇದನ ಪಡೆದುಕೊಳ್ಳುವ ತಮ್ಮ ವೈವಾಹಿಕ ಜೀವನವನ್ನು ಮುರುದುಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಡೈವೋರ್ಸ್ ಮೂಲಕ ಬೇರೆ ಬೇರೆಯಾದ ಸಮಂತಾ ಮತ್ತು ನಾಗಚೈತನ್ಯ ತಂತಮ್ಮ ಕೆಲಸಗಳಲ್ಲಿ ಬ್ಯುಸಿಯಿದ್ದಾರೆ.
ಡೈವೋರ್ಸ್ ಬಗ್ಗೆ ನಟಿ ಸಮಂತಾ ಅನೇಕ ಕಡೆಗಳಲ್ಲಿ ಮಾತನಾಡಿದ್ದಾರೆ, ವಿಚೇದನದ ನಂತರ ಜೀವನದ ಬಗ್ಗೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆದರೆ ಈವರೆಗೆ ವಿಚ್ಛೇದನದ ಬಗ್ಗೆಯಾಗಲಿ, ಸಾಮಂತರ ಬಗ್ಗೆ ಯಾಗಲಿ ನಾಗಚೈತನ್ಯ ಮಾತನಾಡಿರಲಿಲ್ಲ ಆದರೆ ಇದೆ ಮೊದಲ ಬಾರಿಗೆ ಈ ಬಗ್ಗೆ ಚೈತನ್ಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾಳೆ ತೆರೆ ಕಾಣುತ್ತಿರುವ ನಾಗಚೈತನ್ಯ ನಟನೆಯ ‘ಬಂಗಾರ್ರಾಜು’ ಸಿನಿಮಾ ಪ್ರಮೊಷನ್ ವೇಳೆ ಮಾತನಾಡುವ ಸಂದರ್ಭದಲ್ಲಿ ನಾಗಚೈತನ್ಯ ಮೊದಲ ಬಾರಿಗೆ ತಮ್ಮ ವೈವಾಹಿಕ ಜೀವನದ ಬಗ್ಗೆ ಮೌನ ಮುರಿದಿದ್ದಾರೆ. ‘ಸಮಂತಾ ಖುಷಿಯಾಗಿದ್ದರೆ, ನಾನು ಖುಷಿಯಾಗಿದ್ದೇನೆ’ ಎಂದು ಚೈತನ್ಯ ಹೇಳಿದ್ದಾರೆ. ‘ಪರವಾಗಿಲ್ಲ, ಸಮಂತಾ ಖುಷಿಯಾಗಿದ್ದರೆ, ನಾನು ಖುಷಿಯಾಗಿದ್ದೇನೆ. ನಮ್ಮಿಬ್ಬರಿಗೂ ಇದೊಂದು ಒಳ್ಳೆಯ ನಿರ್ಧಾರವಾಗಿತ್ತು. ನಮ್ಮಿಬ್ಬರ ಹಿತದೃಷ್ಟಿಯಿಂದಲೂ ಅದು ಮುಖ್ಯವಾಗಿತ್ತು. ನಾವಿಬ್ಬರು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಅದಾಗಿತ್ತು’ ಎಂದು ಹೇಳಿದ್ದಾರೆ ನಾಗ ಚೈತನ್ಯ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
