ಖ್ಯಾತ ವಾಸ್ತುಶಾಸ್ತ್ರ ಪಂಡಿತರಾದ ಚಂದ್ರಶೇಖರ್ ಗುರಿಜಿ ಅವರನ್ನು ಇಂದು ದುಷ್ಕರ್ಮಿಗಳು ಭಕ್ತರ ಸೋಗಿನಲ್ಲಿ ಬಂದು ಮನಸೋಇಚ್ಚೆಯಂತೆ ಇವರನ್ನು ಬರ್ಬರವಾಗಿ ಚಾಕುವಿನಲ್ಲಿ ಇರಿದು ಹತ್ಯೆ ಮಾಡಿದ್ದಾರೆ. ಇವರ ಕೊಲೆಯ ವಿಡಿಯೋ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಇವರ ಸಾವಿನ ಸುತ್ತಾ ಹತ್ತು ಹಲವಾರು ಅನುಮಾನಗಳು ಸೃಷ್ಟಿಯಾಗಿದೆ.
ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಆದ ನಂತರ ತನಿಖೆ ಶುರು ಮಾಡಿದ ಪೊಲೀಸರು ಕೆಲವು ಮಾಹಿತಿಯನ್ನು ಕಲೆಹಾಕಿದ್ದಾರೆ. ಪ್ರಾರ್ಥಮಿಕ ತನಿಖೆಯಿಂದ ಸಿಕ್ಕಿರುವ ಮಾಹಿತಿ ಏನೆಂದರೆ ಹುಬ್ಬಳಿಯ ರೌಡಿಶೀಟರ್ ಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಲಿಗೆ ಎಂದು ಹೇಳಲಾಗುತ್ತಿದೆ. ಇದಾದ ನಂತರ ತನಿಖೆ ಮುಂದುವರಿಸಿದ ಪೊಲೀಸರು ಈ ಹತ್ಯೆಯ ಹಿಂದೆ ಗುರೂಜಿ ಜೊತೆ ಕೆಲಸ ಮಾಡುತ್ತಿದ್ದ ಮಹಾಂತೇಶ ಶಿರೂರು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಗುರೂಜಿ ಹುಬ್ಬಳ್ಳಿಗೆ ಹೋಗಿದ್ದಾದರೂ ಏತಕ್ಕೆ?
ಕಳೆದ ಕೆಲವು ದಿನಗಳ ಹಿಂದೆ ಗುರೂಜಿ ಅವರ ಅಣ್ಣನ ಮಗು ಸಾವನಪ್ಪಿತ್ತು. ಇದರಿಂದ ಇಡೀ ಕುಟುಂಬದವರು ಮೊಮ್ಮಗನ ಸಾವಿನಿಂದ ದುಃಖ್ಖದಲ್ಲಿದ್ದರು. ತಮ್ಮ ಮೊಮ್ಮಗನನ್ನು ನೋಡಲು ಗುರೂಜಿ ಹುಬ್ಬಳಿಗೆ ತೆರಳಿದರು. ಇದೇ ಕಾರಣಕ್ಕಾಗಿ ಅವರು ಹುಬ್ಬಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ತಮ್ಮ ಎರಡನೆಯ ಪತ್ನಿ ಜೊತೆ ವಾಸ್ತವ್ಯ ಹೂಡಿದರು.
ಮೊದಲ ಪತ್ನಿ ಸಾವಿನ ಬಳಿಕ ಎರಡನೇ ಮದುವೆಯಾದರು. ತಮ್ಮ ಮೊದಲನೆಯ ಪತ್ನಿಯ ಮಗಳು ಮುಂಬೈ ನಲ್ಲಿ ವಾಸವಾಗಿದ್ದಳು. ತಮ್ಮ ಮೊಮ್ಮಗನ ಕಾರ್ಯವನ್ನು ಶನಿವಾರ ಮುಗಿಸಿದ ಗುರೂಜಿ ಹೋಟೆಲ್ ನಲ್ಲೆ ತಂಗಿದರು. ಇಂದು ಅಥವಾ ನಾಳೆ ರೂಮ್ ಖಾಲಿ ಮಾಡಿ ಮುಂಬೈ ನಲ್ಲಿರುವ ತಮ್ಮ ಮಗಳನ್ನು ನೋಡಲು ತೆರಳಬೇಕಿತ್ತು. ಆದರೆ ದುರದೃಷ್ಟವಶಾತ್ ಇಂದು ಅವರು ಭೀಕರವಾಗಿ ಕೊಲೆಯಾಗಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
