ಖ್ಯಾತ ವಾಸ್ತುಶಾಸ್ತ್ರ ಪಂಡಿತರಾದ ಚಂದ್ರಶೇಖರ್ ಗುರಿಜಿ ಅವರನ್ನು ಇಂದು ದುಷ್ಕರ್ಮಿಗಳು ಭಕ್ತರ ಸೋಗಿನಲ್ಲಿ ಬಂದು ಮನಸೋಇಚ್ಚೆಯಂತೆ ಇವರನ್ನು ಬರ್ಬರವಾಗಿ ಚಾಕುವಿನಲ್ಲಿ ಇರಿದು ಹತ್ಯೆ ಮಾಡಿದ್ದಾರೆ. ಇವರ ಕೊಲೆಯ ವಿಡಿಯೋ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಇವರ ಸಾವಿನ ಸುತ್ತಾ ಹತ್ತು ಹಲವಾರು ಅನುಮಾನಗಳು ಸೃಷ್ಟಿಯಾಗಿದೆ.
ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಆದ ನಂತರ ತನಿಖೆ ಶುರು ಮಾಡಿದ ಪೊಲೀಸರು ಕೆಲವು ಮಾಹಿತಿಯನ್ನು ಕಲೆಹಾಕಿದ್ದಾರೆ. ಪ್ರಾರ್ಥಮಿಕ ತನಿಖೆಯಿಂದ ಸಿಕ್ಕಿರುವ ಮಾಹಿತಿ ಏನೆಂದರೆ ಹುಬ್ಬಳಿಯ ರೌಡಿಶೀಟರ್ ಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಲಿಗೆ ಎಂದು ಹೇಳಲಾಗುತ್ತಿದೆ. ಇದಾದ ನಂತರ ತನಿಖೆ ಮುಂದುವರಿಸಿದ ಪೊಲೀಸರು ಈ ಹತ್ಯೆಯ ಹಿಂದೆ ಗುರೂಜಿ ಜೊತೆ ಕೆಲಸ ಮಾಡುತ್ತಿದ್ದ ಮಹಾಂತೇಶ ಶಿರೂರು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿ ದೃಶ್ಯವನ್ನು ಸ್ಪಷ್ಟ ವಾಗಿ ಗಮನಿಸಿದರೆ ಇದರಲ್ಲಿ ಸೆರೆಯಾಗಿರುವ ಒಬ್ಬ ವ್ಯಕ್ತಿ ಎಂದರೆ ಅದು ಮಹಾಂತೇಶ ಶಿರೂರು. ಈತ ಕೆಲವು ವರ್ಷಗಳ ಕಾಲ ಗುರೂಜಿ ಜೊತೆ ಕೆಲಸ ಮಾಡುತ್ತಿದ್ದ. ಮಹಾಂತೇಶ ಅವರ ಪತ್ನಿಯು ಸಹ ಗುರೂಜಿ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಮಹಾಂತೇಶ ಶಿರೂರಿಗೆ ಮದುವೆ ಮಾಡಿಸಿದ್ದು ಕೂಡ ಚಂದ್ರಶೇಖರ್ ಗುರೂಜಿ ಎನ್ನಲಾಗಿದೆ. ಇತ್ತೀಚಿಗೆ ರಿಯಲ್ ಎಸ್ಟೇಟ್ ವಿಚಾರವಾಗಿ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಇದೀಗ ಇದೆ ಕಾರಣಕ್ಕಾಗಿ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇದಲ್ಲದೆ ಬಾಗಲಕೋಟ ಮೂಲದ ಮಂಜುನಾಥ್ ಹಾಗೂ ಗುರೂಜಿಯ ಆಪ್ತನಾಗಿದ್ದ ಮಹಂತೇಶ್ ಶಿರೂರ ಪ್ರಕರಣದ ಆರೋಪಿಗಳು ಎಂದು ಗುರುತಿಸಲಾಗಿದೆ. ಇದಕ್ಕೆ ಸಾಕ್ಷಿಯಾಗಿ CCTV ದೃಶ್ಯಾವಳಿಗಳು ಒಂದು ಕಡೆ ಯಾದರೆ ಮತ್ತೊಂದೆಡೆ ಆರೋಪಿಗಳು ಎರಡು ದಿನಗಳ ಹಿಂದೆ ಸ್ವಾಮೀಜಿ ಯಾವಾಗ ಬರುತ್ತಾರೆ ಎಂದು ಮಾಹಿತಿ ಪಡೆದಿದ್ದು, ಅರ್ಧ ಘಂಟೆಗಳ ಕಾಲ ಹೋಟೆಲ್ನಲ್ಲಿ ಕಾದು ಬಳಿಕ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
