ಖ್ಯಾತ ವಾಸ್ತುಶಾಸ್ತ್ರ ಪಂಡಿತರಾದ ಚಂದ್ರಶೇಖರ್ ಗುರಿಜಿ ಅವರನ್ನು ಇಂದು ದುಷ್ಕರ್ಮಿಗಳು ಭಕ್ತರ ಸೋಗಿನಲ್ಲಿ ಬಂದು ಮನಸೋಇಚ್ಚೆಯಂತೆ ಇವರನ್ನು ಬರ್ಬರವಾಗಿ ಚಾಕುವಿನಲ್ಲಿ ಇರಿದು ಹತ್ಯೆ ಮಾಡಿದ್ದಾರೆ. ಇವರ ಕೊಲೆಯ ವಿಡಿಯೋ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಪ್ರಮುಖ ಆರೋಪಿಗಳಾದ ಮಹಾಂತೇಶ್ ಶಿರೂರು ಮತ್ತು ಮಂಜುನಾಥ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣದ ಕುರಿತು ಮಹಾಂತೇಶ್ ಪತ್ನಿ ವನಜಾಕ್ಷಿ ಮಾತನಾಡಿದ್ದು, ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ವನಜಾಕ್ಷಿ, ನನ್ನ ಪತಿ ಈ ರೀತಿ ಮಾಡುತ್ತಾರೆ ಎಂದು ನಾನು ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಗುರೂಜಿ ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ತಮ್ಮ ಜೊತೆ ಕೆಲಸ ಮಾಡುವ ಪ್ರತಿಯೊಬ್ಬರನ್ನು ಗುರೂಜಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರು ಯಾರಿಗೂ ಎಂದಿಗೂ ಮೋಸ ಮಾಡಿಲ್ಲ ಎಂದು ತಿಳಿಸಿದರು.
ಗುರೂಜಿ ನಮಗೆ ಮನೆಯ ದೇವರು, ತಂದೆ ಇದ್ದಂಗೆ. ಗುರೂಜಿ ನನಗೆ ಯಾವುದೇ ಅಸ್ತಿ ನೀಡಿಲ್ಲ. ಅಪಾರ್ಟ್ಮೆಂಟ್ ಕೂಡ ಗುರೂಜಿ ಅವರ ಹೆಸರಲ್ಲೇ ಇದೆ. ಅದರಲ್ಲಿ ಒಂದು ಫ್ಲಾಟ್ ಮಾತ್ರ ನಮಗೆ ನೀಡಿದ್ದಾರೆ. ಅದನ್ನು ಕೂಡ ನಾವು 20 ಲಕ್ಷ ಸಾಲ ಮಾಡಿ ಖರೀದಿಸಿದ್ದೇವೆ. ನನ್ನ ಮತ್ತು ನನ್ನ ಗಂಡನ ಹೆಸರಿನಲ್ಲಿ ಯಾವುದೇ ಬೇನಾಮಿ ಅಸ್ತಿ ಇಲ್ಲಾ ಎಂದು ಅವರು ಸ್ಪಷ್ಟಪಡಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
