fbpx
ಸಮಾಚಾರ

ಒಂದೇ ಒಂದು ಸಭೆ ನಡೆಸದ ಚಕ್ರತೀರ್ಥ ಸಮಿತಿ: ಭತ್ಯೆಗಾಗಿ 2,42,980 ರೂ. ಖರ್ಚು?

ರಾಜ್ಯದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ಪಠ್ಯ ಪರಿಷ್ಕರಣೆ ವಿವಾದ ಸದ್ಯ ತಣ್ಣಗಾದಂತೆ ಕಾಣುತ್ತಿದೆ. ಹೊಸ ಪರಿವಿಡಿಯ ಬಗ್ಗೆ ಬಹುತೇಕ ಮಠಾಧೀಶರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ವಿವಾದದ ಬಳಿಕ ಪಠ್ಯ ಪರಿಷ್ಕರಣೆ ಸಮಿತಿಯನ್ನು ಸರ್ಕಾರ ವಿಸರ್ಜನೆ ಮಾಡಿದ್ದು, ಉಂಟಾಗಿರುವ ಲೋಪದೋಷಗಳ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ರೋಹಿತ್ ಚಕ್ರತೀರ್ಥ ಸಮಿತಿ ರಚನೆಯಾದ ದಿನದಿಂದ ವರದಿ ಸಲ್ಲಿಸುವವರೆಗೂ ಒಂದೇ ಒಂದು ಸಭೆಯನ್ನು ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ‘the-file.in’ 2022ರ ಜೂನ್ 13ರಂದು ಆರ್‌ಟಿಐ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಕರ್ನಾಟಕ ಪಠ್ಯ ಪುಸ್ತಕ ಸಂಘವು ಮಾಹಿತಿ ನೀಡಿದೆ..

ಕರ್ನಾಟಕ ಪಠ್ಯಪುಸ್ತಕ ಸಂಘವು ನೀಡಿರುವ ಮಾಹಿತಿ ಪ್ರಕಾರ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮತ್ತು ಸದಸ್ಯರಿಗೆ ಉಪಸ್ಥಿತಿ, ಸ್ಥಳೀಯ, ಪ್ರಯಾಣ ಭತ್ತೆ ಎಂದು ಒಟ್ಟು 2,42, 980 ರೂ.ಯನ್ನು ಪಾವತಿಸಿದೆ. ಉಪಸ್ಥಿತಿ ಭತ್ತೆಯೆಂದು 1,61,000 ರೂ., ಸ್ಥಳೀಯ ಭತ್ತೆ 66,300 ರೂ., ಪ್ರಯಾಣ ಭತ್ತೆ 9,980, ದಿನಭತ್ತೆ 5,700 ರೂ. ಪಾವತಿಸಿದೆ. ” ಎಂದು ‘the-file.in’ ವರದಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top