fbpx
ಸಮಾಚಾರ

‘ಸಂವಿಧಾನ ದೇವಸ್ಥಾನ’ ಕಟ್ಟಿಸಿದ ಶಿಕ್ಷಕ: ಪ್ರಸಾದ ವಿತರಣೆಯೂ ಇದೆ

ಸಿನಿಮಾ ಹೀರೋ ಹೀರೋಯಿನ್ ಸೇರಿದಂತೆ ರಾಜಕಾರಣಿಗಳಿಗೂ ದೇವಾಲಯ ಕಟ್ಟಿದ ಅದೆಷ್ಟೋ ಪ್ರಸಂಗಗಳು ನಮ್ಮ ದೇಶದಲ್ಲಿ ಕಾಣಸಿಗುತ್ತವೆ. ಆದರೆ ವಿಶೇಷ ಎಂಬಂತೆ ಕೇರಳದ ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕರೊಬ್ಬರು ಕೇರಳದಲ್ಲಿ ಭಾರತೀಯ ಸಂವಿಧಾನವನ್ನು ಪೂಜಿಸುವ ವಿಶಿಷ್ಟ ದೇಗುಲವನ್ನು ನಿರ್ಮಿಸಿದ್ದಾರೆ. ಇಲ್ಲಿನ ಗರ್ಭಗುಡಿಯಲ್ಲಿ ಸಂವಿಧಾನ ಪುಸ್ತಕ ಪೂಜಿಸಲಾಗುತ್ತಿದೆ.

71 ವರ್ಷ ವಯಸ್ಸಿನ ಶಿವದಾಸನ್ ಪಿಳ್ಳೈ ಅವರು ವರ್ಷದ ಹಿಂದೆ ಮಂದಿರ ನಿರ್ಮಿಸಿದ್ದಾರೆ. ಮೂರು ಸೆಂಟ್ಸ್ ಜಾಗದಲ್ಲಿರುವ ಮಂದಿರದಲ್ಲಿ ಮಹಾತ್ಮಗಾಂಧಿ, ಸ್ವಾಮಿ ವಿವೇಕಾನಂದ, ಬಿ.ಆರ್.ಅಂಬೇಡ್ಕರ್ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ ಝಾಯಿ ಅವರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಗರ್ಭಗುಡಿಯಲ್ಲಿ ಸಂವಿಧಾನದ ಪೀಠಿಕೆ ಕೆತ್ತಲಾಗಿದೆ. ದೇವಸ್ಥಾನಕ್ಕೆ ನಿತ್ಯ ಭೇಟಿ ನೀಡುವವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಇಲ್ಲಿ ಭಕ್ತರಿಗೆ ಪ್ರಸಾದ ವಿತರಣೆಯೂ ಇದೆ.

“ನನಗೆ, ನನ್ನ ಪ್ರಭು ಸಂವಿಧಾನ ಮತ್ತು ನಾನು ಅದನ್ನು ಪೂಜಿಸುತ್ತೇನೆ. ಇದು ನಮ್ಮ ದೇಶ, ನಮ್ಮ ಸಹೋದರತ್ವ, ವೈವಿಧ್ಯತೆ ಮತ್ತು ಭವಿಷ್ಯದ ಆಧಾರವಾಗಿದೆ. ನಾನು ನನ್ನ ದೇವರ ಆದರ್ಶಗಳನ್ನು ಪಾಲನೆ ಮಾಡಲು ಬಯಸುತ್ತೇನೆ ಆದ್ದರಿಂದ ನಾನು ಒಂದನ್ನು ನಿರ್ಮಿಸಿದ್ದೇನೆ” ಎಂದು ಪಿಳ್ಳೈ ಹೇಳಿದ್ದಾರೆ., ಒಂದು ವರ್ಷದ ಹಿಂದೆ ಕೊಡಪನಕುನ್ನುನಲ್ಲಿರುವ ಅವರ ಮನೆಯ ಜೊತೆಗೆ “ಭರಣಘಟನಾ ಸ್ಕೇತ್ರಂ (ಸಂವಿಧಾನ ದೇವಾಲಯ)” ಎಂಬ ದೇಗುಲವನ್ನು ನಿರ್ಮಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top