ತಮಿಳು ಚಿತ್ರರಂಗದ ಪ್ರಖ್ಯಾತ ನಟ ನೆನ್ನೆ ಬೆಳಿಗ್ಗೆ ಲಘು ಹೃದಯಾಘಾತಕ್ಕೆ ಒಳಗಾಗಿಚೆನ್ನೈ ನಲ್ಲಿನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಟಿವಿ ಮಾದ್ಯಮಗಳಲ್ಲಿಯೂ ವಿಕ್ರಮ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದೇ ಹೇಳಲಾಗಿತ್ತು. ಆದರೆ ಅಸಲಿಗೆ ಚಿಯಾನ್ ವಿಕ್ರಮ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿರಲಿಲ್ಲ. ಈ ಬಗ್ಗೆ ಸ್ವತಃ ವಿಕ್ರಮ್ ಅವರ ಪುತ್ರ ದ್ರುವ ಸ್ಪಷ್ಟನೆ ನೀಡಿದ್ದಾರೆ.
ತಂದೆಯ ಆರೋಗ್ಯದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಸ್ಪಷ್ಟನೆ ನೀಡಿರುವ ಧ್ರುವ ಅವರು ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ. ಹಾಗಾದ್ರೆ ಧ್ರುವ ಅವರು ಮಾಡಿರುವ ಮಾಡಿರುವ ಪೋಸ್ಟ್ ಅಲ್ಲಿ ಏನಿದೆ? ತಂದೆಯ ಅರೋಗ್ಯ ಸ್ಥಿತಿಯ ಬಗ್ಗೆ ಧ್ರುವ ಹೇಳಿದ್ದೇನು ಅಂತೀರಾ? ಮುಂದೆ ಓದಿ
ವಿಕ್ರಮ್ ಪುತ್ರ ದ್ರುವ ಪೋಸ್ಟ್:
ಆತ್ಮೀಯ ಅಭಿಮಾನಿ ಮತ್ತು ಮತ್ತು ಹಿತೈಷಿಗಳೇ ತನ್ನ ತಂದೆಗೆ ಯಾವುದೇ ರೀತಿಯ ಹೃದಯಾಘಾತವು ಆಗಿಲ್ಲ. ಎದೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ರೀತಿಯ ಸುಳ್ಳು ವದಂತಿ ಹಬ್ಬಿಸಬೇಡಿ, ಈ ವಿಷ್ಯದಿಂದ ನಮಗೆ ಈಗಾಗಲೇ ನೋವಾಗಿದೆ ಎಂದು ಬರೆದುಕೊಂಡಿದ್ದಾರೆ.
ನಮ್ಮ ಪ್ರೀತಿಯ ಚಿಯಾನ್ ವಿಕ್ರಮ್ ಬಹಳ ಚೆನ್ನಾಗಿದ್ದಾರೆ. ನಾಳೆಯೊಳಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬರಲಿದ್ದಾರೆ.. ನನ್ನ ಈ ಹೇಳಿಕೆ ನಿಮಗೆ ಸ್ಪಷ್ಟನೆ ನೀಡಿದೆ ಎಂದು ಭಾವಿಸುತ್ತೇನೆ. ನಮ್ಮ ಕುಟುಂಬದ ಖಾಸಗೀತ ಮತ್ತು ಗೌಪ್ಯತೆಯನ್ನು ಎಲ್ಲರೂ ಗೌರವಿಸಿ ಎಂದು ಧ್ರುವ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
