fbpx
ಸಮಾಚಾರ

ವೀರೇಂದ್ರ ಹೆಗ್ಗಡೆ ತಂದೆ, ತಾತ ಕೂಡ ಶಾಸಕರಾಗಿದ್ದರು: ಶಾಸನ ಸಭೆಯಲ್ಲಿ ಮುಂದುವರಿದ ಧರ್ಮಸ್ಥಳ ಧರ್ಮಾಧಿಕಾರಿ ಪರಂಪರೆ!

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ಡಾ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿರುವುದು ಬಹಳ ಸಂತಸದ ವಿಷಯ. ಇದರೊಂದಿಗೆ ತಲೆಮಾರಿನಿಂದ ನಡೆದುಕೊಂಡ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ ಎಂದು ಹೇಳಬಹುದು. ಡಾ.ವೀರೇಂದ್ರ ಹೆಗ್ಗಡೆ ಅವರ ಪರಂಪರೆಯು ಕೂಡ ಶಾಸನ ಸಭೆಯ ಸದಸ್ಯರಾಗಿದ್ದರು ಎಂದು ಹೇಳಿದರೆ ನೀವು ನಂಬಲಾಗುವುದಿಲ್ಲ. ಆದರೆ ಇದಕ್ಕೆ ಉತ್ತರ ನಮ್ಮ ಬಳಿ ಇದೆ.

ಡಾ.ವೀರೇಂದ್ರ ಹೆಗ್ಗಡೆ ಅವರ ತಾತ ಮತ್ತೆ ತಂದೆ ಕೂಡ ಈ ಹಿಂದೆ ಶಾಸನ ಸಭೆಯ ಸದಸ್ಯರಾಗಿದ್ದರು. ಡಾ.ವೀರೇಂದ್ರ ಹೆಗ್ಗಡೆ ಅವರ ತಾತ ಮಂಜಯ್ಯ ಹೆಗ್ಗಡೆ ಅವರು 1927ರಿಂದ 15 ವರ್ಷ ಕಾಲ ಮದ್ರಾಸ್ ಶಾಸನ ಸಭೆಯ ಸದಸ್ಯರಾಗಿದ್ದರು. ಡಾ.ಹೆಗ್ಗಡೆ ಅವರ ತಂದೆ ರತ್ನವರ್ಮ ಹೆಗ್ಗಡೆ ಅವರು 1957ರಲ್ಲಿ ಬೆಳ್ತಂಗಡಿ ಅಸೆಂಬ್ಲಿ ಕ್ಷೇತ್ರದ ಪ್ರಥಮ ಕಾಂಗ್ರೆಸ್ ಶಾಸಕರಾಗಿದ್ದರು.

ಇದಾಗಿ ಸುಮಾರು 6 ವರ್ಷಗಳ ನಂತರ ಇದೀಗ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ರಾಜ್ಯಸಭಾ ಸದಸ್ಯರಾಗುವ ಅವಕಾಶ ದೊರಕಿದೆ. ಇದ್ದಲ್ಲದೆ ಕರಾವಳಿಯಲ್ಲಿ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಎರಡನೆಯ ಜೈನ ಸಮುದಾಯದ ಪ್ರತಿನಿಧಿ ಡಾ.ವೀರೇಂದ್ರ ಹೆಗ್ಗಡೆ ಅವರು ಎಂಬುದು ಅಚ್ಚರಿಯ ವಿಷಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top