fbpx
ಸಮಾಚಾರ

ನನ್ನ ಹೆಸರು ಮಿಸ್ ಯೂಸ್ ಮಾಡಿಕೊಂಡ್ರೆ ಹುಷಾರ್! ಡಿಕೆಶಿ ಒಡೆತನದ ಶಾಲೆಯ ಹುಸಿ ಬಾಂಬ್ ಕರೆಯ ಕುರಿತು ಖಡಕ್ ಆಗಿ ವಾರ್ನ್ ಮಾಡಿದ ಹುಚ್ಚ ವೆಂಕಟ್

ನೆನ್ನೆ ಡಿ.ಕೆ ಶಿವ್ ಕುಮಾರ್ ಒಡೆತನದ ನ್ಯಾಷನಲ್ ಹಿಲ್‌ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್​ ಇಟ್ಟಿರೋದಾಗಿ ಬೆದರಿಕೆ ಕರೆ ಬಂದಿದ್ದು, ಕೆಲ ಕಾಲ ಆತಂಕದ ವಾತಾವರಣ ಶ್ರುಷ್ಟಿಯಾಗಿತ್ತು. ನಂತರ ಇದು ಹುಸಿ ಬಾಂಬ್ ಕರೆ ಎಂದು ಸಾಬೀತಾಗಿದ್ದು, ಹುಚ್ಚ ವೆಂಕಟ್ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿದೆ ಎಂದು ಡಿ.ಕೆ ಶಿವ್ ಕುಮಾರ್ ಹೇಳಿದರು. ಇದೀಗ ಈ ಪ್ರಕರಣ ಕುರಿತು ಹುಚ್ಚ ವೆಂಕಟ್ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಯಾವಾಗ ಇದು ಹುಸಿ ಬಾಂಬ್ ಕರೆ ಎಂದು ತಿಳಿಯಿತೋ ಅವಾಗ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್​ ಹುಚ್ಚ ವೆಂಕಟ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಬಾಂಬ್ ಬೆದರಿಕೆ ಪತ್ರ ಬಂದಿದೆ ಎಂದು ತಿಳಿಸಿದ್ದಾರೆ. ಭಾನುವಾರ ರಾತ್ರಿ ಇ-ಮೇಲ್ ಮೂಲಕ ಬೆದರಿಕೆ ಪತ್ರ ಬಂದಿತ್ತು. ಸೋಮವಾರ ಬೆಳಿಗ್ಗೆ ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಗೆ ಬಂದ ಬಳಿಕ ವಿಷಯ ಗೊತ್ತಾಯಿತು. ಅಷ್ಟರಲ್ಲಾಗಲೇ ಮಕ್ಕಳು ಶಾಲೆಗೆ ಬಂದಿದ್ದರು ಎಂದರು. ವಿದ್ಯಾರ್ಥಿಗಳನ್ನು ಶಾಲೆಯಿಂದ ಸ್ಥಳಾಂತರ ಮಾಡಲಾಗಿದೆ. ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಡಿಕೆಶಿ ತಿಳಿಸಿದರು.

 

 

ಡಿಕೆಶಿ ಅವರ ಈ ಮಾತಿಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಹುಚ್ಚ ವೆಂಕಟ್ ಇದು ಕೆಲವರಿಗೆ ಮಾತ್ರ ಹೇಳ್ತಾ ಇರೋದು. ನನ್ನ ಹೆಸರನ್ನ ಯಾವುದೇ ಕಾರಣಕ್ಕು ಮಿಸ್ ಯೂಸ್ ಮಾಡಿಕೊಳ್ಳಬೇಡಿ ಅಥವಾ ನನ್ನ ಹೆಸರಲ್ಲಿ ಮೇಲ್ ಕಳಿಸೋದಾಗ್ಲಿ, ಏನು ಮಾಡಬೇಡಿ. ಇದನ್ನು ನಾನು ಹೇಳ್ತಾ ಇರೋದು ಯಾರು ನನ್ನ ಹೆಸರು ಮಿಸ್ ಯೂಸ್ ಮಾಡಿಕೊಳ್ತಾರೋ ಅವರಿಗೆ ಮಾತ್ರ ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top