ನಟ ಕಿಚ್ಚ ಸುದೀಪ್ ಅವರು ಸದ್ಯ ಅವರ ಬಹುನೀರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಚಿತ್ರದ ಪ್ರೊಮೋಷನ್ ಆಕ್ಟಿವಿಟಿಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಸುದೀಪ್ ಅವರು ಸೇರಿದಂತೆ ಇಡೀ ವಿಕ್ರಾಂತ್ ರೋಣ ಚಿತ್ರತಂಡ ದೆಹಲಿಗೆ ಹೋಗಿ ಪ್ರಚಾರ ಮಾಡಿಕೊಂಡು ಬಂದಿದ್ದರು. ಈ ವೇಳೆ ನಟ ಸುದೀಪ್ ಚಿತ್ರದ ಬಗ್ಗೆ ಮಾತ್ರವಲ್ಲದೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹೀಗೆ ಮಾತನಾಡುತ್ತಾ ಇಂದಿನ ಪಾನ್ ಇಂಡಿಯಾ ಸಿನಿಮಾಗಳ ಜಮಾನದಲ್ಲಿ ಹೇಗೆ ಕಲಾವಿದರು ಗಡಿಯನ್ನೂ ಮೀರಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸುವಾಗ ಸುದೀಪ್ ಅವರು ತಮ್ಮನ್ನು ಉತ್ತರ ಭಾರತದವರು ‘ಬಾಜಿರಾವ್’ ಹೀರೋ ಎಂದು ಕರೆಯುತ್ತಿದ್ದರು ಎಂಬ ಸ್ವಾರಸ್ಯಕರ ಸಂಗತಿಯನ್ನು ಹೊರಹಾಕಿದ್ದಾರೆ. ಅರೆ.. ಬಾಜಿರಾವ್ ಸಿನಿಮಾ ಹೀರೊ ರಣವೀರ್ ಸಿಂಗ್ ತಾನೇ? ಸುದೀಪ್ ಸುದೀಪ್ ಹೇಗೆ ‘ಬಾಜಿರಾವ್’ ಹೀರೋ ಆಗ್ತಾರೆ ಅಂತೀರಾ? ಮುಂದೆ ಓದಿ
“ಒಂದು ಕಾಲದಲ್ಲಿ ದಕ್ಷಿಣದ ಸಿನಿಮಾಗಳು ಉತ್ತರ ಭಾರತದಲ್ಲಿ ಟಿವಿಯಲ್ಲಿ ಮಾತ್ರ ಪ್ರಸಾರವಾಗುತ್ತಿದ್ದವು. ನಾನು ದೆಹಲಿ, ಗೋವಾ, ಮುಂಬೈ ಅಥವಾ ಜೈಪುರಕ್ಕೆ ಹೋದಾಗ ಎಲ್ಲರೂ ನನ್ನನ್ನು ‘ಬಾಜಿರಾವ್ ಹೀರೋ’ ಎಂದು ಕರೆಯುತ್ತಿದ್ದರು. ನನ್ನ ‘ಕೆಂಪೇಗೌಡ’ ಸಿನಿಮಾ ಹಿಂದಿಗೆ ‘ಬಾಜಿರಾವ್’ ಹೆಸರಿನಲ್ಲಿ ಎಂದು ಡಬ್ ಆಗಿತ್ತು. ಅಂದು ನಾವು ಟಿವಿ ಕಲಾವಿದರಾಗಿ ಪರಿಚಯಗೊಂಡಿದ್ದೆವು. ಈಗ ಚಿತ್ರಮಂದಿರಗಳ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದೇವೆ’’ ಎಂದಿದ್ದಾರೆ ಸುದೀಪ್.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
