ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಒಟ್ಟಿಗೆ ನಟಿಸಿದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರು ನಿಶ್ಚಿತಾರ್ಥ ಮಾಡಿಕೊಂಡು ನಂತರ ಇವರಿಬ್ಬರ ಸಂಭಂದದಲ್ಲಿ ಬಿರುಕು ಬಿದ್ದು ಇವರಿಬ್ಬರು ದೂರ ಆಗಿರುವ ವಿಷಯ ನಮಗೆಲ್ಲರಿಗೂ ಗೊತ್ತು. ಇವರಿಬ್ಬರು ದೂರ ಆಗೋಕ್ಕೆ ಹಲವಾರು ಕಾರಣಗಳನ್ನು ಜನರು ಹೇಳುತ್ತಿದ್ದರು. ಆದರೆ ಇವರಿಬ್ಬರು ಅಸಲಿಗೆ ದೂರ ವಾಗಲು ಪ್ರಮುಖ ಕಾರಣ ಯಾರು ಗೊತ್ತಾ? ಇಲ್ಲಿದೆ ಇದರ ಕುರಿತು ಒಂದು ಕುತೂಹಲಕಾರಿ ಮಾಹಿತಿ.
ಪ್ರೀತಿಸಿ ನಿಶಿತಾರ್ಥ ಮಾಡಿಕೊಂಡ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ದೂರವಾಗಲು ಮುಖ್ಯ ಕಾರಣ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ. ಈ ಕುರಿತು ಸ್ವತಃ ವೇಣು ಸ್ವಾಮಿ ಅವರೇ ತಿಳಿಸಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಬ್ರೆಕ್ ಅಪ್ ಮಾಡಿಕೊಳ್ಳಲು ರಶ್ಮಿಕಾ ಅವರಿಗೆ ಹೇಳಿದ್ದು ನಾನೆ ಎಂದು ಹೇಳಿದರು.
ನಿಮ್ಮ ಜಾತಕಕ್ಕೆ ರಕ್ಷಿತ್ ಶೆಟ್ಟಿ ಅವರು ಸೆಟ್ ಆಗದೆ ಇರುವ ಕಾರಣ ಅವರ ಜೊತೆ ಬ್ರೆಕ್ ಅಪ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ದೆ. ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಶ್ಮಿಕಾ ನನ್ನ ಸಲಹೆಯಂತೆ ಅವರ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.
ಇದಲ್ಲದೆ ವೇಣು ಸ್ವಾಮಿ ಅವರು ರಶ್ಮಿಕಾ ರಾಜಕೀಯಕ್ಕೂ ಸಹ ಪ್ರವೇಶಿಸಲಿದ್ದಾರೆ ಎಂದು ಹೇಳಿದ್ದರು. ಸಿನಿಮಾರಂಗದಲ್ಲಿ ಇಷ್ಟೊಂದು ಬ್ಯುಸಿ ಆಗಿರುವ ರಶ್ಮಿಕಾ ರಾಜಕೀಯಕ್ಕೆ ಪ್ರವೇಶಿಸಲಿದ್ದಾರಾ ಎಂಬ ಅನುಮಾನ ಅಭಿಮಾನಿಗಳ ಮನಸಲ್ಲಿ ಮೂಡಿದೆ. ಇದಲ್ಲದೆ ಇವರು ರಶ್ಮಿಕಾ ಮಂದಣ್ಣ ಅವರ ಜೀವನದ ಬಗೆಯು ಸಹ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
